
CHITRADURGA NEWS | 28 JULY 2028
ಚಿತ್ರದುರ್ಗ: ವೇದಾವತಿ ನದಿಯ ಒಡಲು ಭರ್ತಿ ಮಾಡುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮದಗದ ಕೆರೆ ಭರ್ತಿಯಾಗಿ ಕೋಡಿ ಹರಿಯುತ್ತಿರುವುದು ಬಯಲು ಸೀಮೆ ರೈತರಲ್ಲಿ ಮಂದಹಾಸ ಮೂಡಿಸಿದೆ.
ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಎಲ್ಲ ಜಲಾಶಯಗಳು ಭರ್ತಿಯಾಗಿ ಹೊರ ಹರಿವು ಹೆಚ್ಚಾಗಿದೆ. ಆದರೆ, ಬಯಲು ಸೀಮೆ ಮಧ್ಯ ಕರ್ನಾಟಕದ ವಾಣಿವಿಲಾಸ ಸಾಗರ ಜಲಶಾಯಕ್ಕೆ ಮಾತ್ರ ಈವರೆಗೆ ಒಂದು ಹನಿ ನೀರು ಬಂದಿಲ್ಲ.

ಇದನ್ನೂ ಓದಿ: ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸಲು ಅನುಮತಿ | 4.21 TMC ನೀರೆತ್ತಲು ಅವಕಾಶ
ಮಲೆನಾಡು ಭಾಗದ ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಈಗ ಅಲ್ಲಿಂದ ವೇದಾವತಿ ನದಿ ಕಡೆಗೆ ನೀರು ಹರಿಯಲು ಪ್ರಾರಂಭಿಸಿದೆ.
ಕಡೂರು ತಾಲೂಕಿನ ಜೀವನಾಡಿ ಎಂದೇ ಭಾವಿಸಿರುವ ಮದಗದ ಕೆರೆ ಭರ್ತಿಯಾಗಿದ್ದು, ಅಲ್ಲಿಂದ ಹೊಸದುರ್ಗ ತಾಲೂಕಿನ ಬಲ್ಲಾಳಸಮುದ್ರ ಕೆರೆಯನ್ನು ಸೇರಿದ್ದು, ಒಂದೆರಡು ದಿನಗಳಲ್ಲಿ ವಿವಿ ಸಾಗರ ತಲುಪಲಿದೆ.
ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ಶಾಸಕರ ಮಾಜಿ ಕಾರು ಚಾಲಕ ಸೇರಿ ನಾಲ್ವರು ಅರೆಸ್ಟ್ | ಆರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ
ಭೋರ್ಗರೆದು ಹರಿಯುತ್ತಿರುವ ಮದಗದ ಕೆರೆಯ ಕೋಡಿ, ವೇದಾವತಿ ಒಡಲಿನ ಮೂಲಕ ನೇರವಾಗಿ ವಾಣಿವಿಲಾಸ ಸಾಗರಕ್ಕೆ ತಲುಪಲಿದ್ದು, ಈ ಮಳೆ ಹೀಗೆ ಮುಂದುವರೆದರೆ ವಿವಿ ಸಾಗರ ನೀರಿನ ಮಟ್ಟ ಹೆಚ್ಚಾಗಲಿದೆ.

ಈ ವರ್ಷ ಜನವರಿಯಲ್ಲಿ ವಿವಿ ಸಾಗರ ಕೋಡಿ ಬಿದ್ದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗೀನ ಅರ್ಪಿಸಿದ್ದರು.
ಇದನ್ನೂ ಓದಿ: ಒಡಹುಟ್ಟಿದ ತಮ್ಮನನ್ನೇ ಕೊಂದಳಾ ಅಕ್ಕ | ಮಾರಣಾಂತಿಕ ಕಾಯಿಲೆಯಿಂದ ಮನೆಯ ಮಾನ ಕಾಪಾಡಲು ಕೊಲೆ !
ಈಗ ಭದ್ರಾ ನೀರು 2 ಟಿಎಂಸಿ ಹರಿಸಲು ಸರ್ಕಾರ ಆದೇಶ ನೀಡಿದ್ದು, ಮಳೆ ನೀರಿನ ಜೊತೆಗೆ ಭದ್ರಾ ನೀರು ಸೇರಿದರೆ ಮುಂದಿನ ಮೂರ್ನಾಲ್ಕು ತಿಂಗಳಲ್ಲೇ ವಾಣಿವಿಲಾಸ ಸಾಗರ ಭರ್ತಿಯಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.
ಒಂದು ವೇಳೆ ಈ ವರ್ಷ ವಾಣಿವಿಲಾಸ ಸಾಗರ ಭರ್ತಿಯಾದರೆ ಎರಡನೇ ದಾಖಲೆ ಸೃಷ್ಟಿಯಾಗಲಿದ್ದು, ಒಂದೇ ವರ್ಷದಲ್ಲಿ ಎರಡು ಬಾರಿ ಕೋಡಿ ಹರಿದಂತಾಗಲಿದೆ.
ಇದನ್ನೂ ಓದಿ:ಕೇಂದ್ರದಿಂದ ಅಗತ್ಯ ಯೂರಿಯಾ ಗೊಬ್ಬರ ಪೂರೈಕೆ | ರಾಜ್ಯ ಸರ್ಕಾರ ಅಭಾವ ಸೃಷ್ಟಿಸಿದೆ | MLC ಕೆ.ಎಸ್. ನವೀನ್ ಆರೋಪ
ಜಲಾಶಯ ನಿರ್ಮಾಣವಾದ 89 ವರ್ಷಗಳ ಕಾಲ ಭರ್ತಿಯಾಗದ ವಿವಿ ಸಾಗರ, ಕಳೆದ ನಾಲ್ಕು ವರ್ಷಗಳಿಂದ ಭರ್ತಿಯಾಗಿ ಬಯಲು ಸೀಮೆ ಜನರನ್ನು ಪೊರೆಯುತ್ತಿರುವುದು ಈ ಪೀಳಿಗೆಯ ಪುಣ್ಯವೇ ಸರಿ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
