
CHITRADURGA NEWS |28 JULY 2025
ಹೊಳಲ್ಕೆರೆ: ತಮ್ಮ ಅಂಟಿಸಿಕೊಂಡ ಕಾಯಿಲೆ ಕುಟುಂಬದ ಮಾನ ತೆಗೆಯುತ್ತೆ ಎಂಬ ಕಾರಣಕ್ಕೆ ಒಡಹುಟ್ಟಿದ ತಮನನ್ನೇ ಅಕ್ಕ ಭಾವ ಸೇರಿ ಕೊಲೆ ಮಾಡಿದ್ದಾರೆ ಎನ್ನುವ ಆತಂಕಕಾರಿ ಸುದ್ದಿ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.
ಹೊಳಲ್ಕೆರೆ ತಾಲೂಕು ದುಮ್ಮಿ ಗ್ರಾಮದ ಮಲ್ಲಿಕಾರ್ಜುನ ಕೊಲೆಯಾದ ಯುವಕನಾಗಿದ್ದು, ಆತನ ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ್ ವಿರುದ್ಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಖುದ್ದು ತಂದೆಯೇ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಮೂವರು ಸಾವು
ಈವರೆಗೆ ಬೇರೆ ಬೇರೆ ಜಾತಿಯಲ್ಲಿ ಮದುವೆಯಾದಾಗ ಮಾನ ಹೋಗುತ್ತದೆ ಎಂಬ ಕಾರಣಕ್ಕೆ ಮರ್ಯಾದೆ ಹತ್ಯೆ ನಡೆದಿದ್ದ ಸುದ್ದಿ ಓದಿದ್ದವರಿಗೆ ಕಾಯಿಲೆ ಕಾರಣಕ್ಕೆ ಹತ್ಯೆ ಮಾಡಿರುವ ಸುದ್ದಿ ಅಚ್ಚರಿ ಮೂಡಿಸಿದೆ.
ಹೊಳಲ್ಕೆರೆ ತಾಲೂಕು ದುಮ್ಮಿ ಗ್ರಾಮದ ಮಲ್ಲಿಕಾರ್ಜುನ ಜಿ.ಎನ್(23) ಕೊಲೆಯಾದ ಹಿನ್ನೆಲೆಯಲ್ಲಿ ಆತನ ತಂದೆ ನಾಗರಾಜ್ ತಮ್ಮ ಪುತ್ರಿ ಹಾಗೂ ಅಳಿಯನ ವಿರುದ್ಧ ತನಿಖೆ ನಡೆಸುವಂತೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮಗಳು ನಾಪತ್ತೆ | ತಂದೆ ಆತ್ಮಹತ್ಯೆ | ಪೋಕ್ಸೋ ಕೇಸ್ ದಾಖಲಿಸದ ಪೊಲೀಸರ ವಿರುದ್ಧ ಆಕ್ರೋಶ
ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಾಗ ಓಮಿನಿ ಕಾರಿನಲ್ಲಿ ಕುತ್ತಿಗೆಗೆ ಬ್ಲಾಂಕೆಟ್ ಸುತ್ತಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಏನಿದು ಅಕ್ಕನೇ ತಮ್ಮನ ಕೊಲೆ ಮಾಡಿದ ವಿಚಿತ್ರ ಘಟನೆ:
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ೨೩ ವರ್ಷದ ಮಲ್ಲಿಕಾರ್ಜುನ ಸ್ನೇಹಿತರೊಂದಿಗೆ ಚಿತ್ರದುರ್ಗಕ್ಕೆ ಬರುವಾಗ ಐಮಂಗಲ ಬಳಿ ಲಾರಿಗೆ ಡಿಕ್ಕಿಯಾಗಿ ಕಾರು ಅಪಘಾತಕ್ಕೀಡಾಗಿ ತಲೆ, ಎದೆ ಹಾಗೂ ಎಡಗಾಲಿಗೆ ಪೆಟ್ಟು ಬಿದ್ದಿತ್ತು.
ಈ ವಿಚಾರ ತಿಳಿದು ಕುಟುಂಬದವರು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಮಲ್ಲಿಕಾರ್ಜುನನ ರಕ್ತ ಪರೀಕ್ಷೆ ನಡೆಸಿದಾಗ ಮಾರಣಾಂತಿಕ ಕಾಯಿಲೆ ಇರುವುದು ಗೊತ್ತಾಗಿದೆ.
ಇದನ್ನೂ ಓದಿ: ಗಿಲಿಕೇನಹಳ್ಳಿ ಅಜ್ಜಯ್ಯ ಆತ್ಮಹತ್ಯೆ ಪ್ರಕರಣ | ಎಸ್ಪಿ ರಂಜಿತ್ಕುಮಾರ್ ಬಂಡಾರು ಹೇಳಿಕೆ
ಆನಂತರ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಬ್ಲಡ್ ಲಾಸ್ ಆಗುತ್ತಿದೆ, ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಈ ವೇಳೆ ಮಗಳು ನಿಶಾ ಹಾಗೂ ಅಳಿಯ ಮಂಜುನಾಥನಿಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ತಂದೆ ನಾಗರಾಜಪ್ಪ ತಿಳಿಸಿದ್ದು, ಅವರ ಓಮಿನಿ ಕಾರಿನಲ್ಲಿ ಜು.25 ರಂದು ಸಂಜೆ 7 ಗಂಟೆಗೆ ದಾವಣಗೆರೆಯಿಂದ ಮಣಿಪಾಲಕ್ಕೆ ಹೊರಟಿದ್ದಾರೆ.
ಆದರೆ, ಜು.26 ರಂದು ಬೆಳಗಿನ ಜಾವ ೪.೩೦ಕ್ಕೆ ದುಮ್ಮಿ ಗ್ರಾಮಕ್ಕೆ ಮಲ್ಲಿಕಾರ್ಜುನನ ಶವದೊಂದಿಗೆ ನಿಶಾ ಹಾಗೂ ಮಂಜುನಾಥ್ ಬಂದಿದ್ದಾರೆ. ಮಾರ್ಗ ಮಧ್ಯೆ ಮೃತಪಟ್ಟಿದ್ದರಿಂದ ಊರಿಗೆ ತಂದೆವು ಎಂದು ತಂದೆಯ ಬಳಿ ಹೇಳಿದ್ದಾರೆ.
ಇದನ್ನೂ ಓದಿ: ಯೂರಿಯಾಗೆ ಮುಗಿಬಿದ್ದ ಸಾವಿರಾರು ರೈತರು | ಎಪಿಎಂಸಿ ಬಳಿ ದಿನವಿಡೀ ಸರತಿ ಸಾಲು | ಸರ್ಕಾರದ ಬೇಜವಾಬ್ದಾರಿಗೆ ಆಕ್ರೋಶ
ಶವ ಗಮನಿಸಿದಾಗ ಕುತ್ತಿಗೆ ಬಳಿ ರಕ್ತ ಹೆಪ್ಪುಗಟ್ಟಿದಂತೆ ಕಪ್ಪು ಕಲೆಗಳು ಕಂಡು ಬಂದಿವೆ. ತಕ್ಷಣ ತಂದೆ ನಾಗರಾಜಪ್ಪ ಮಗಳು ಅಳಿಯನನ್ನು ಮನೆಯೊಳಗೆ ಕರೆದೊಯ್ದು ಕೂಲಂಕುಷವಾಗಿ ವಿಚಾರಿಸಿದಾಗ, ನನಗೆ ಮಾರಣಾಂತಿಕ ಕಾಯಿಲೆ ಇದೆ, ವಿಪರೀತ ಸಾಲ ಮಾಡಿಕೊಂಡಿದ್ದೇನೆ ನಾನು ಸಾಯಬೇಕು ಎಂದು ಕಿರಿ ಕಿರಿ ಮಾಡಿದ. ಇವನ ಮಾರಣಾಂತಿಕ ಕಾಯಿಲೆಯಿಂದ ನಮ್ಮ ಮರ್ಯಾದೆ ಹೋಗುತ್ತದೆ. ತಂದೆ ತಾಯಿಗೂ ಈ ರೋಗ ಹರಡುತ್ತಾನೆ ಎಂದು ಭಾವಿಸಿ ಬ್ಲಾಂಕೆಟ್ ಕುತ್ತಿಗೆಗೆ ಸುತ್ತಿ ಎಳೆದಾಗ ಮೃತಪಟ್ಟಿದ್ದು, ಅಲ್ಲಿಂದ ಮನೆಗೆS ಶವ ತಂದಿದ್ದೇವೆ ಎಂದು ಮಗಳು ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
