CHITRADURGA NEWS | 12 MAY 2025
ಚಿತ್ರದುರ್ಗ: ತ್ಯಾಗರಾಜ ಬೀದಿಯಲ್ಲಿ ಪಾಂಡುರಂಗ ವಿಠಲ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Also Read: ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಮಸ್ಯೆ ಇದ್ದರೆ, ಈ 5 ಹಣ್ಣುಗಳನ್ನು ತಿನ್ನಿ

ತಾಡಪತ್ರಿ ವಂಶಕ್ಕೆ ಒಲಿದು ಬಂದಿರುವ ಮೂರ್ತಿ ಪಾಂಡುರಂಗ ವಿಠಲ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿದ ನಂತರ ಪಾಂಡುರಂಗವಿಠಲನನ್ನು ರಥದಲ್ಲಿ ಕೂರಿಸಿದ ಬಳಿಕ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.
ಪ್ರತಿ ವರ್ಷದಂತೆ ವೈಶಾಖ ಬುದ್ಧ ಪೂರ್ಣಿಮೆಯಂದು ಜರುಗಿದ ರಥೋತ್ಸವದಲ್ಲಿ ಉಡುಪಿಯ ಪೇಜಾವರ ಶ್ರೀ ಪಾದಂಗಳವರು, ಟಿ.ಎಸ್.ಗೋಪಾಲಕೃಷ್ಣ, ಟಿ.ಪಿ.ವಿಠಲರಾವ್, ಸುಧೀಂದ್ರ, ಟಿ.ಸಿ.ಶ್ರೀನಿವಾಸ್ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
ರಥೋತ್ಸವದ ವೇಳೆ ಮಹಿಳೆಯರು ಪಾಂಡುರಂಗವಿಠಲನನ್ನು ಸ್ಮರಿಸುತ್ತಿದ್ದರೆ. ಪುರುಷರು ಜಾಗಟೆ ಭಾರಿಸುತ್ತಿದ್ದರು.
Also Read: ಸೌತೆಕಾಯಿ ತಿಂದ ತಕ್ಷಣ ಇವುಗಳನ್ನು ತಿನ್ನಬಾರದು?
ರಥವನ್ನು ಬಾಳೆಕಂಬ, ವಿವಿಧ ಬಗೆಯ ಹೂವು ಹಾಗೂ ಹಾರಗಳಿಂದ ಅಲಂಕರಿಸಲಾಗಿತ್ತು. ರಥದ ಮುಂಭಾಗ ಹೋಮ ನಡೆಯಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
