
CHITRADURGA NEWS | 13 JUNE 2026
ಚಿತ್ರದುರ್ಗ: ಭೂಮಿಯ ಮೇಲೆ ಕೇವಲ ಮನುಷ್ಯರಷ್ಟೇ ಅಲ್ಲದೆ, ಪ್ರತಿಯೊಂದು ಜೀವಿಯೂ ಬದುಕಬೇಕಾದರೆ ಸಮಗ್ರ ಪರಿಸರದ ಅಗ್ಯವಿದೆ. ಕೇವಲ ಗಾಳಿ ಮಾತ್ರವಲ್ಲದೆ ನೀರು, ಮಣ್ಣು ಹಾಗೂ ಅವುಗಳಿಂದ ಉಂಟಾಗುವ ಪ್ರಕೃತಿಯ ಸಮತೋಲನ ಮತ್ತು ಸಂಬಂಧಗಳು ಅತ್ಯಂತ ಮುಖ್ಯವಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಡಿ.ಜೆ.ಸುದೀನ್ ಕುಮಾರ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಜೂನ್ 16ರಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆಯಲ್ಲಿ KDP ಸಭೆ
ನಗರದ ಜಿಲ್ಲಾ ಪಂಚಾಯತ್ ಕಚೇರಿ ಹತ್ತಿರದ ಕ್ರೀಡಾ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಹಾಗೂ ಕಲಾ ಚೈತನ್ಯ ಸೇವಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ-2026ರ ಅಂಗವಾಗಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.
ವಿಶ್ವ ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗಬಾರದು. ನಾವು ಬದುಕಿರುವವರೆಗೆ ಉಸಿರಾಡುವ ಕೊನೆಯ ಕ್ಷಣದವರೆಗೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.
ವಿಶ್ವ ಪರಿಸರ ದಿನಾಚರಣೆ-2026ರ ಪ್ರಯುಕ್ತ ಯುಎನ್ಇಪಿ ಬಿಡುಗಡೆ ಮಾಡಿರುವ ಪ್ರಕೃತಿಯಿಂದ ಪ್ರೇರಿತ. ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ ಎನ್ನುವ ಘೋಷವಾಕ್ಯವನ್ನು ನಾವೆಲ್ಲರೂ ಅಳವಡಿಸಿಕೊಂಡು ಪರಿಸರ ಕಾಪಾಡಿಕೊಂಡು ಹೋಗಬೇಕಿದೆ ಎಂದರು.
ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ನೀವೆಲ್ಲರೂ ಪರಿಸರದ ಬಗೆಗಿನ ನಿಮಗಿರುವ ಕಲ್ಪನೆಗಳನ್ನು ಕಾಗದದ ಮೇಲೆ ಬಣ್ಣದ ಮೂಲಕ ಮೂಡಿಸಿದ್ದೀರಿ.
ಇದನ್ನೂ ಓದಿ: ಶಿಕ್ಷಕರ ಆಯ್ಕೆಗೆ ಜೂನ್ 15ರಂದು ತರಗತಿ ಪ್ರಾತ್ಯಕ್ಷಿಕೆ
ಸೂರ್ಯೋದಯವಾಗುತ್ತಿರುವುದು, ಬೆಟ್ಟ-ಗುಡ್ಡಗಳು ನಡುವೆ ನದಿ ಹರಿಯುತ್ತಿರುವುದು, ಗಿಡ-ಮರಗಳನ್ನು ಬೆಳೆಸುವಂತಹ ಸೃಜನಶೀಲ ಚಿತ್ರಗಳನ್ನು ಬರೆದಿದ್ದೀರಿ. ಅದೇ ರೀತಿ ಪರಿಹಾರಕ್ಕೆ ಹಾನಿ ಮಾಡದಂತೆ ಯಾರೋ ಮರ ಕಡಿಯುತ್ತಿರುವ ಚಿತ್ರಗಳ ಮೂಲಕವೂ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದೀರಿ. ನಿಮ್ಮ ಈ ಕಲ್ಪನೆ ಮತ್ತು ಜಾಗೃತಿ ಕೇವಲ ಚಿತ್ರಕ್ಕೆ ಸೀಮಿತವಾಗದೇ ದೈನಂದಿನ ಜೀವನದಲ್ಲೂ ಅನುಷ್ಠಾನಕ್ಕೆ ಬರಲಿ ಎಂದು ಆಶಿಸಿದರು.
ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
8ನೇ ತರಗತಿ ವಿಭಾಗದಲ್ಲಿ ಡಾನ್ ಬಾಸ್ಕೋ ಶಾಲೆಯ (ಸ್ಟೇಟ್) ಆರ್.ಪ್ರಭಾಸ್ (ಪ್ರಥಮ ಸ್ಥಾನ), ಸೇಂಟ್ ಜೋಸೆಫ್ ಶಾಲೆಯ ಆರ್.ಅಮೃತಾ (ದ್ವಿತೀಯ ಸ್ಥಾನ) ಹಾಗೂ ವಿದ್ಯಾ ವಿಕಾಸ ಶಾಲೆಯ ಹೆಚ್.ಪ್ರೀತಿ (ತೃತೀಯ ಸ್ಥಾನ) ಪಡೆದಿದ್ದಾರೆ. ಬೃಹನ್ಮಠ ಶಾಲೆಯ ಎನ್.ಪೂಜಾ ಮತ್ತು ಬಾಪೂಜಿ ಪಬ್ಲಿಕ್ ಶಾಲೆಯ ಬಿ.ಜೆ.ಗುರುದತ್ ಸಮಾಧಾನಕರ ಬಹುಮಾನ ಪಡೆದರು.
ಇದನ್ನೂ ಓದಿ: ಸಹಕಾರಿ ಕ್ಷೇತ್ರಕ್ಕೆ ವೀರೇಂದ್ರ ಪಪ್ಪಿ ಪ್ರವೇಶ | ತಳುಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆ
9ನೇ ತರಗತಿ ವಿಭಾಗದಲ್ಲಿ ಪಾಶ್ರ್ವನಾಥ ವಿದ್ಯಾಸಂಸ್ಥೆಯ ಎ.ಚಿತ್ರಾ (ಪ್ರಥಮ ಸ್ಥಾನ) ಕೆ.ಕೆ. ನ್ಯಾಷನಲ್ ಶಾಲೆಯ ಎ.ಆರ್.ಹರ್ಷಿತಾ (ದ್ವಿತೀಯ ಸ್ಥಾನ) ಹಾಗೂ ವಾಸವಿ ವಿದ್ಯಾಸಂಸ್ಥೆಯ ಎಸ್.ವಿನೀತೇಂದ್ರ (ತೃತೀಯ ಸ್ಥಾನ) ಗಳಿಸಿದ್ದಾರೆ. ಎಸ್.ಜೆ.ಎಂ ಸಿಬಿಎಸ್ಇ ವಸತಿ ಶಾಲೆಯ ಬಿ.ವಿದ್ಯಾ ಮತ್ತು ಡಾನ್ ಬಾಸ್ಕೋ ಸಿಬಿಎಸ್ಇ ಶಾಲೆಯ ಆರ್.ದಿಯಾ ಸಮಾಧಾನಕರ ಬಹುಮಾನಕ್ಕೆ ಭಾಜನರಾಗಿದ್ದಾರೆ.
10ನೇ ತರಗತಿ ವಿಭಾಗದಲ್ಲಿ ಜ್ಞಾನ ಭಾರತಿ ವಿದ್ಯಾ ಮಂದಿರದ ಮಾನ್ವಿ ಎ. ಪಾಟೀಲ್ (ಪ್ರಥಮ ಸ್ಥಾನ) ಎಸ್.ಜೆ.ಎಂ ಸಿಬಿಎಸ್ಇ ವಸತಿ ಶಾಲೆಯ ಎಸ್.ಸ್ಪೂರ್ತಿ (ದ್ವಿತೀಯ ಸ್ಥಾನ) ಹಾಗೂ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಿ.ಚಿರಂಜೀವಿ (ತೃತೀಯ ಸ್ಥಾನ) ಪಡೆದುಕೊಂಡಿದ್ದಾರೆ. ಶರಣಬಸವೇಶ್ವರ ಶಾಲೆಯ ಶಕೀರ ಬೇಗಂ ಮತ್ತು ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಕೆ.ಎಲ್.ವರ್ಷಿಣಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ವಿಶ್ವ ಪರಿಸರ ದಿನಾಚರಣೆ-2026ರ ಘೋಷವಾಕ್ಯ ಪ್ರಕೃತಿಯಿಂದ ಪ್ರೇರಿತ. ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕೆ ಎಂಬ ವಿಷಯದ ಕುರಿತು ಚಿತ್ರದುರ್ಗ ನಗರ ವ್ಯಾಪ್ತಿಯ 24 ಶಾಲೆಗಳಿಂದ 200ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿಗಳು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಗರ್ಭ ನಿರೋಧಕ್ಕೆ ಹೊಸ ವಿಧಾನ | ಇಂಪ್ಲಾಂಟ್ ಸುರಕ್ಷಿತ ಡಾ.ಚಂದ್ರಿಕಾ
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮೀ, ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಹನುಮಂತಪ್ಪ, ವಿಷಯ ಪರಿವೀಕ್ಷಕ ಪ್ರಶಾಂತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಿತ್ರದುರ್ಗ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಹೆಚ್.ವಿ.ಪಲ್ಲವಿ, ಉಪ ಪರಿಸರ ಅಧಿಕಾರಿ ಪಿ.ರಾಜೇಶ್, ಕಲಾ ಚೈತನ್ಯ ಸೇವಾ ಸಂಸ್ಥೆ ಕಾರ್ಯದರ್ಶಿ ನಾಗರಾಜ್ ಬೇದ್ರೆ ಸೇರಿದಂತೆ ಮತ್ತಿತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

