CHITRADURGA NEWS | 02 AUGUST 2026
ಹೊಸದುರ್ಗ: ಮನುಷ್ಯ ದೇವನಾಗುವ ಹಾಗೂ ಆತನ ಬದುಕನ್ನು ಪರಿವರ್ತಿಸುವ ಮಹಾನ್ ಶಕ್ತಿ ಇಷ್ಟಲಿಂಗ ದೀಕ್ಷೆಯಲ್ಲಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಪರಿಶಿಷ್ಟ ಪಂಗಡ ರೈತರಿಗೆ ಸಮಗ್ರ ಕೃಷಿ ಪದ್ಧತಿ ಕುರಿತು ಉಚಿತ ತರಬೇತಿ
ಸಾಣೇಹಳ್ಳಿ ಶ್ರೀಮಠದಲ್ಲಿ ನಡೆದ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು,
ಮನುಷ್ಯ ಮತ್ತು ಇತರ ಪ್ರಾಣಿಗಳಿಗಿರುವ ಮೂಲ ಅಂತರವೆಂದರೆ ಶಿವಜ್ಞಾನ. ಕಾಡಿನಲ್ಲಿರುವ ಮೃಗಗಳು ಸಂಘಟಿತವಾಗಿ ಬಾಳುತ್ತವೆ, ಆದರೆ ನಾಡಿನಲ್ಲಿರುವ ಮಾನವ ಮೃಗಗಳಿಗೆ ಆ ಸಂಘಟನೆ ಸಾಧ್ಯವಾಗುತ್ತಿಲ್ಲ.
ಮನುಷ್ಯ ಸಗಣಿಯ ಹುಳದಂತೆ ಆಗದೆ ಶ್ರೇಷ್ಠನಾಗಬೇಕಾದರೆ ಆತನಿಗೆ ಶಿವಜ್ಞಾನ ಮತ್ತು ಸಂಸ್ಕಾರ ಅಗತ್ಯ. ಶರಣರ ಸಂಗದಿಂದ ವ್ಯಕ್ತಿಯು ತನ್ನ ಅವಗುಣಗಳನ್ನು ಕಳೆದುಕೊಂಡು ಸದ್ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯ.
ಇದನ್ನೂ ಓದಿ: ಗುಣಮಟ್ಟದ ಶಿಕ್ಷಣ, ಪ್ರತಿಷ್ಟಿತ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಅನುಷ್ಠಾನಾಧಿಕಾರಿಗಳ ಪಾತ್ರ ಮುಖ್ಯ
12ನೇ ಶತಮಾನದ ಶರಣರು ‘ದೇವರು ಕೇವಲ ಕಲ್ಲು, ಮಣ್ಣು, ಚರ್ಚ್, ಮಸೀದಿಗಳಲ್ಲಿಲ್ಲ, ಪ್ರತಿಯೊಬ್ಬರ ಒಳಗಿದ್ದಾನೆ. ‘ಮಾನವನೇ ದೇವನಾಗಬೇಕು, ದೇಹವೇ ದೇಗುಲವಾಗಬೇಕು’. ಅದಕ್ಕೆ ಅಂತರಂಗ ಮತ್ತು ಬಹಿರಂಗ ಶುದ್ಧಿ ಅತ್ಯಗತ್ಯ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಅಳಿಯಲು ಬೇಡ. ಇವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಅಂತರಂಗ ಬಹಿರಂಗ ಶುದ್ಧಿ ಸಾಧ್ಯ.
ಒಮ್ಮೆ ಪಡೆದ ಇಷ್ಟಲಿಂಗವನ್ನು ಎಂದಿಗೂ ದೇಹದಿಂದ ಅಗಲಿಸಬಾರದು. ಬೆಳಿಗ್ಗೆ ಮತ್ತು ಸಂಜೆ ಪ್ರಶಾಂತ ಸ್ಥಳದಲ್ಲಿ ಕುಳಿತು ಲಿಂಗಪೂಜೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಯಾವ ಉದ್ಯೋಗವನ್ನೇ ಮಾಡಲಿ, ಅದರಲ್ಲಿ ಶಿವನನ್ನು ಕಾಣುವ ಎಚ್ಚರವಿರಬೇಕು. ಸದಾಚಾರದಂತೆ ಸದಾ ಯಾವುದಾದರೂ ಕಾಯಕದಲ್ಲಿ ತೊಡಗಿರಬೇಕು.
ಶಿವಾಚಾರವು ಜಾತಿ ಭೇದವನ್ನು ತೊರೆದು ಎಲ್ಲರನ್ನೂ ಸಮಾನವಾಗಿ ಕಾಣಲು ಬೋಧಿಸಿದರೆ, ಗಣಾಚಾರವು ಸಂಘಟನೆ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟಿಸುವುದನ್ನು ಕಲಿಸುತ್ತದೆ ಎಂದರು.
ಇದನ್ನೂ ಓದಿ: ಹಾಸ್ಟೆಲ್ ಅಡುಗೆ ತಯಾರಕ ಮಹಮ್ಮದ್ ಚಮನ್ ಬೀಳ್ಕೊಡುಗೆ
ಕಾರ್ಯಕ್ರಮದಲ್ಲಿ ನಾಗರಾಜ್ ಹೆಚ್. ಎಸ್. ಅವರು ವಚನಗಳನ್ನು ಹೇಳಿಕೊಟ್ಟರು. ಸಿರಿಮಠ ಪೂಜಾ ವ್ಯವಸ್ಥೆಗಳನ್ನು ನೆರವೇರಿಸಿಕೊಟ್ಟರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

