CHITRADURGA NEWS | 11 AUGUST 2025
ಹೊಸದುರ್ಗ: ಇವತ್ತಿನ ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಣಿಸುತ್ತಿದೆ ಅದರೆ ಸೌಜನ್ಯ, ಸಂಸ್ಕಾರಗಳು ಕಾಣಿಸುತ್ತಿಲ್ಲ. ಕೇವಲ ನೀವು ಒಳ್ಳೆ ಬಟ್ಟೆ ಧರಿಸಿದರೆ ಸಾಲದು, ನಡತೆಯು ಮುಖ್ಯವಾಗುತ್ತದೆ. ಅಂಕ ಪಡೆದವರೆಲ್ಲ ಆದರ್ಶ ಪುರುಷರಲ್ಲ ಅಂಕೆ-ಸಂಖ್ಯೆಗಳಿಗಿಂತ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: ಹೈವೇನಲ್ಲಿ 3 ಕಿ.ಮೀ ಟ್ರಾಫಿಕ್ ಜಾಮ್ | ಚಿತ್ರದುರ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ
ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಸಭಾಂಗಣದಲ್ಲಿ ನಡೆದ ಸುಜ್ಞಾನ ಸಂಗಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಂದೆ-ತಾಯಿ ಋಣ, ಹಿರಿಯರ, ಸಮಾಜದ ಋಣ, ದೇಶದ ಋಣವನ್ನು ತೀರಿಸಲು ಕಂಕಣ ಬದ್ಧವಾಗಿರಬೇಕು. ನೀವು ಪಡೆದ ಸಹಾಯ, ಸೇವೆ, ಋಣ, ಅವಕಾಶವನ್ನು ನೀವು ಪಡೆದು ಬೇರೆಯವರಿಗೆ ನೀಡಿದಾಗ ಮಾತ್ರ ನಿಮ್ಮ ದುಡಿಮೆಗೆ ಅರ್ಥ ಬರುತ್ತದೆ.
ಕೇವಲ ಪಡೆಯುವುದಕ್ಕೆ ಸೀಮಿತವಾದರೆ ಕೊಡುವ ಕೈಗಳಿಗೆ ನೀವು ಮಾಡುವ ಅವಮಾನವಾಗುತ್ತದೆ. ತಾನು ಬೆಳೆದು ತನ್ನವರನ್ನು ಬೆಳೆಸುವುದು ಆದರ್ಶ, ಅದನ್ನೇ ಭಾರತೀಯ ಸಂಸ್ಕೃತಿ, ಸಂತರು ಆಧ್ಯಾತ್ಮ ಪುರುಷರು ಸಾರಿ ಸಾಧಿಸಿ ತೋರಿಸಿದ್ದಾರೆ.
ಇದಂನ್ನಿ ಓದಿ: ಒಳಮೀಸಲಾತಿ | ಮಾಜಿ ಸಚಿವ ಎಚ್.ಆಂಜನೇಯ ಮಹತ್ವದ ಸುದ್ದಿಗೋಷ್ಠಿ |ಯಾರಿಗೆ ಎಷ್ಟು ಮೀಸಲಾತಿ ?
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹೇಶ್ ಸಂಗಮ್, ಗುರುಗಳಿಂದ ಧನ ಸ್ವರೂಪದಲ್ಲಿ ಸಹಾಯ ನಿರೀಕ್ಷಿಸುವ ಬದಲು ಅವರ ನೆರಳಿನಲ್ಲಿ ನಡೆದಾಗ ಅನೇಕ ರೀತಿಯ ಲಾಭಗಳು ಸಿಗಲು ಸಾಧ್ಯ. ಪ್ರತಿಬಾರಿಯೂ ಏನನ್ನಾದರೂ ಸಮಾಜಕ್ಕೆ ಅರ್ಪಿಸಬೇಕೆಂಬ ಅವರ ತುಡಿತ ನಮ್ಮಂತ ಯುವಕರಿಗೆ ಆದರ್ಶವಾಗಿದೆ.
ಕೇವಲ ಕುಟುಂಬಕ್ಕಾಗಿ ದುಡಿಯದೇ ಸಮಾಜಕ್ಕೂ ದುಡಿಯಬೇಕೆಂಬ ಅರಿವನ್ನು ಜಾಕೃತಿಗೊಳಿಸಿದವರು ಪೂಜ್ಯ ಗುರುಗಳಾದ ಶಾಂತವೀರ ಶ್ರೀಗಳು. ಅವರ ಇಪ್ಪತೈದು ವರ್ಷದ ಸಮಾಜಕ್ಕೆ ಸಮರ್ಪಿತ ಬದುಕು ನಮ್ಮಂತ ಸಣ್ಣಪುಟ್ಟ ಸಮುದಾಯಗಳು ಜಾಗೃತಿಯಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಯಪ್ಪ, ವಿದ್ಯಾರ್ಥಿಯ ಬದುಕು ಆಸಕ್ತದಾಯಕವಾಗಿರಬೇಕು, ಅನ್ವೇಷಣೆಯ ಕಡೆಗೆ ಆದರ್ಶಗಳ ಪರಿಪಾಲನೆ ಕಡೆಗೆ ಗಮನ ಕೊಡಬೇಕೆಂದು. ಆನ್ಲೈನ್ ಗೇಮ್, ಸಾಮಾಜಿಕ ಜಾಲತಾಣಗಳ ಕಡೆಗೆ ಗಮನ ಹರಿಸಬೇಡಿ.
ಇದನ್ನೂ ಓದಿ: ವಿವಿ ಸಾಗರದ ಒಡಲು ಸೇರಿದ ಭದ್ರೆ | ಇಂದಿನ ಜಲಾಶಯದ ಮಟ್ಟ
ಇವತ್ತು ಉದ್ಯೋಗಕ್ಕಾಗಿ ಶಿಕ್ಷಣ ಪಡೆಯದೆ ಭವಿಷ್ಯಕ್ಕಾಗಿ ಶಿಕ್ಷಣ ಪಡೆಯುವ ಕಡೆಗೆ ಗಮನಹರಿಸಿ. ಶ್ರೀಗಳು ಸಮುದಾಯಕ್ಕಾಗಿ ಕನಸುಗಳನ್ನು ಕಂಡಿದ್ದು, ಕಟ್ಟಿದ್ದು ಸಮುದಾಯದ ಸಹಭಾಗಿತ್ವ ಸಹಕಾರ ಅವರ ಜೊತೆ ಇದ್ದರೆ ಏನನ್ನಾದರೂ ಸಾಧಿಸುವ ಛಲ ಗುರಿ ಬದ್ಧತೆ ಅವರಲ್ಲಿ ಕಂಡಿದ್ದೇವೆ.
ಶ್ರೀಗಳ ಜೊತೆ ನಾವುಗಳು ನಿಂತರೆ ಸಮಾಜವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕತೃತ್ವಶಕ್ತಿಯನ್ನು ಅವರು ಸಂಪಾದಿಸಿದ್ದಾರೆ. ನಮ್ಮ ಸಮುದಾಯದ ರಾಜಕಾರಣಿಗಳು, ಉದ್ಯಮಗಳು, ನೌಕರರು ಅವರ ಜೊತೆ ನಿಂತು ಸಮಾಜದ ಭವಿಷ್ಯದ ಬೆಳವಣಿಗೆಗೆ ಸಹಕಾರಿಯಾಗಬೇಕೆಂದು ಮನವಿ ಮಾಡಿದರು.
ಸಾಹಿತಿ ಸಿದ್ಧವನಹಳ್ಳಿ ವೀರೇಶ್ ಕುಮಾರ್ ಮಾತನಾಡಿದರು.
ಶ್ರೀ ಶಾಂತವೀರ ಸ್ವಾಮೀಜಿ ತಾವು ಕೃಷಿಯಿಂದ ಗಳಿಸಿದ ಆರು ಲಕ್ಷ ರೂಗಳನ್ನು ಸಮುದಾಯದ ವಿದ್ಯಾರ್ಥಿಗಳ ಶಾಶ್ವತ ಠೇವಣಿ ನಿಧಿಗೆ ನೀಡಿದರು.
ಇದನ್ನೂ ಓದಿ: ಉತ್ತಮ ಸಮಾಜ ನಿರ್ಮಾಣಕ್ಕೆ ಬುದ್ಧನ ಆಶಯ ಅನುಸರಿಸಿ | ಸಚಿವ ಎಂ.ಬಿ.ಪಾಟೀಲ್
ಹೊಸದುರ್ಗ ತಾಲೂಕಿನ ಸಮುದಾಯದ ಅತಿ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಆಶೀರ್ವದಿಸಲಾಯಿತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
