CHITRADURGA NEWS | 11 AUGUST 2025
ಚಿತ್ತದುರ್ಗ: ರಾಜ್ಯ ಸರ್ಕಾರದ ಮುಂದಿರುವ ಮಹತ್ವದ ವಿಚಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರವಾಗಿ ಮಾಜಿ ಸಚವ ಎಚ್.ಆಂಜನೇಯ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಎಚ್.ಆಂಜನೇಯ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಪಾಯಿಂಟ್ಸ್ ರೂಪದಲ್ಲಿ ಓದಿ:
ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ನೀಡಿರುವ ಪರಿಶಿಷ್ಟ ಜಾತಿಯ ಒಳಮೀಸಲಾತಿ ಹಂಚಿಕೆ ವಿವರ.
ಇದನ್ನೂ ಓದಿ: ವಿವಿ ಸಾಗರದ ಒಡಲು ಸೇರಿದ ಭದ್ರೆ | ಇಂದಿನ ಜಲಾಶಯದ ಮಟ್ಟ
ಪ್ರವರ್ಗ – ಎ, ಅತಿ ಸೂಕ್ಷ್ಮ ಅಸ್ಪೃಶ್ಯ, ಅಲೆಮಾರಿ ಸೇರಿದಂತೆ 59 ಜಾತಿಗಳಿಂದ ಒಟ್ಟು 5,22,099, ಪರಿಶಿಷ್ಟ ಜಾತಿಯ ಶೇ.4.97 ರಷ್ಟಿದ್ದು ಮೀಸಲಾತಿ ಪ್ರಮಾಣ ಶೇ.1.
ಪ್ರವರ್ಗ – ಬಿ, ಮಾದಿಗ ಮತ್ತು ಸಂಬಂಧಿಸಿದ ಇತರೆ ಜಾತಿಗಳು ಸೇರಿದಂತೆ 18 ಜಾತಿಗಳಿಂದ ಒಟ್ಟು 36,69,246, ಪರಿಶಿಷ್ಟ ಜಾತಿಯ ಶೇ.34.91 ರಷ್ಟಿದ್ದು ಮೀಸಲಾತಿ ಪ್ರಮಾಣ ಶೇ.6
ಪ್ರವರ್ಗ – ಸಿ, ಹೊಲೆಯ, ಛಲವಾದಿ ಮತ್ತು ಸಂಬಂಧಿಸಿದ ಜಾತಿಗಳು ಸೇರಿದಂತೆ 17 ಜಾತಿಗಳಿಂದ ಒಟ್ಟು 30,08,633, ಪರಿಶಿಷ್ಟ ಜಾತಿಯ ಶೇ.28.63 ರಷ್ಟಿದ್ದು ಮೀಸಲಾತಿ ಪ್ರಮಾಣ ಶೇ.5.
ಇದನ್ನೂ ಓದಿ: ಒಳ ಮೀಸಲಾತಿ ಸಮೀಕ್ಷೆ | ಛಲವಾದಿ ಜನಾಂಗದ ನಿಖರವಾದ ಸಂಖ್ಯೆ ತೋರಿಸದೆ ಸರ್ಕಾರದಿಂದ ಅನ್ಯಾಯ
ಪ್ರವರ್ಗ – ಡಿ, ಲಂಬಾಣಿ, ಭೋವಿ, ಕೊರಚ, ಕೊರಮ ಸೇರಿದಂತೆ 04 ಜಾತಿಗಳಿಂದ ಒಟ್ಟು 28,34,949, ಪರಿಶಿಷ್ಟ ಜಾತಿಯ ಶೇ.26.97 ರಷ್ಟಿದ್ದು ಮೀಸಲಾತಿ ಪ್ರಮಾಣ ಶೇ.4
ಪ್ರವರ್ಗ – ಇ, ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಕ ಸೇರಿದಂತೆ 03 ಜಾತಿಗಳಿಂದ ಒಟ್ಟು 4,74,954, ಪರಿಶಿಷ್ಟ ಜಾತಿಯ ಶೇ.4.52 ರಷ್ಟಿದ್ದು ಮೀಸಲಾತಿ ಪ್ರಮಾಣ ಶೇ.1.
ನಾಗಮೋಹಬ್ ದಾಸ್ ಆಯೋಗದ ವಾರದಿ ಸಲ್ಲಿಕೆ ನಂತರ ಯಾವುದೇ ವಾಗ್ವಾದ ನಡೆದಿಲ್ಲ. ಕೆಲ ಮಾಧ್ಯಮಗಳಲ್ಲಿ ಊಹಾತ್ಮಕ ವರದಿ ಬಂದಿವೆ.
ವರದಿ ಪ್ರತಿ ಓದಿಕೊಂಡು ಬಂದ ನಂತರ ಆಗಸ್ಟ್ 16 ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಒಳಮೀಸಲಾತಿ ಜಾರಿಯಾಗುವ ದಿನಗಳು ಬಹಳ ಹತ್ತಿರದಲ್ಲಿವೆ.
ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಪರಿಶಿಷ್ಟ ಜಾತಿಯ ಸಮಾವೇಶದಲ್ಲಿ ಕೊಟ್ಟ ಭರವಸೆಯಂತೆ ಆರನೇ ಗ್ಯಾರೆಂಟಿಯಾಗಿ ಒಳಮೀಸಲಾತಿ ಜಾರಿ ಆಗಲಿದೆ.
ಸದಾಶಿವ ಆಯೋಗದ ವರದಿಯನ್ನು ಬಿಜೆಪಿಯವರು ಪೂರ್ಣ ಕೈ ಬಿಟ್ಟರು. ಈಗಲೂ ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಗೊಂದಲ ಬಗೆಹರಿಸಲು ಆಯೋಗ ರಚನೆಯಾಗಿತ್ತು.
ಈಗ ಬಂದಿರುವ ವರದಿಯಲ್ಲಿ ಮಾದಿಗರ ಸಂಖ್ಯೆ ಹೆಚ್ಚಾಗಿದೆ. ಹಿಂದುಳಿದಿರುವಿಕೆಯಲ್ಲಿ ತಳಹಂತದಲ್ಲಿದೆ ಎನ್ನುವುದು ಬಹಿರಂಗವಾಗಿದೆ.
ಮೆಡಿಕಲ್, ಇಂಜಿನಿಯರಿಂಗ್ ಸೀಟು, ಸರ್ಕಾರಿ ನೌಕರಿ ಸೇರಿದಂತೆ ಎಲ್ಲವನ್ನೂ ವಿಶ್ಲೇಷಣೆ ಮಾಡಿ ವರದಿ ಸಲ್ಲಿಸಲಾಗಿದೆ.
ಸರ್ಕಾರ ಆಗಸ್ಟ್ 16 ರಂದು ಚರ್ಚಿಸಿ ತೀರ್ಮಾನ ಮಾಡಿ ತಕ್ಷಣ ಜಾರಿಮಾಡಬೇಕು. ಸ್ವಾತಂತ್ರ್ಯ ಬಂದ ಈ ತಿಂಗಳಲ್ಲೇ ಮಾದಿಗರಿಗೆ ಸ್ವಾತಂತ್ರ್ಯ ಸಿಗಬೇಕು. ಇದಕ್ಕಾಗಿ ಉಪಸಮಿತಿ ರಚನೆ ಮಾಡಬೇಕಾಗಿಲ್ಲ.
ಜನಸಂಖ್ಯೆಯಲ್ಲಿ ಶೇ.34 ಇದ್ದೇವೆ.ಆದರೆ, ಉದ್ಯೋಗದಲ್ಲಿ ಶೇ.0.94 ರಷ್ಟು ಮಾತ್ರ ಇದ್ದೇವೆ ಎಂದು ಮಾಜಿ ಸಚಿವ ಆಂಜನೇಯ ಸುದ್ದಿಗೊಷ್ಠಿಯಲ್ಲಿ ವಿವರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ವಕೀಲರಾದ ಶರಣಪ್ಪ, ರವೀಂದ್ರ, ತಾಪಂ ಮಾಜಿ ಸದಸ್ಯ ಸಮರ್ಥರಾಯ್ ಇತರರುದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
