CHITRADURGA NEWS | 25 APRIL 2026
ಚಿತ್ರದುರ್ಗ: ಸಾವಿರ ವರ್ಷಗಳಿಂದ ಕಣ್ಮರೆಯಾಗಿದೆ ಎಂದು ನಂಬಲಾಗಿದ್ದ ಮೂಲ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ದರ್ಶನಕ್ಕಾಗಿ ಚಿತ್ರದುರ್ಗಕ್ಕೆ ತರಲಾಗುತ್ತಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ವೇತಾ ಲಮಾಣಿ ತಿಳಿಸಿದರು.
ಇದನ್ನೂ ಓದಿ: 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಟ್ ಆಪ್ ಲಿವಿಂಗ್ ಆಶ್ರಮದಿಂದ ಸೋಮನಾಥ ಜ್ಯೋತಿರ್ಲಿಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಮೇ 2 ರಂದು ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ 7.30 ರಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಈ ಲಿಂಗಗಳನ್ನು ದರ್ಶನಕ್ಕೆ ಇಡಲಾಗುತ್ತಿದೆ.
ಈ ಅಮೂಲ್ಯ ಲಿಂಗಗಳಿಗೆ ಪ್ರಾಚೀನ ವೇದ ವಿಧಿಯಾದ ರುದ್ರಾಭಿಷೇಕ ನಡೆಯಲಿದೆ. ನಂತರ ಸತ್ಸಂಗ ನಡೆಯಲಿದೆ. ಈ ಪವಿತ್ರ ಅವಶೇಷಗಳು ಪುನಃ ಪ್ರತ್ಯಕ್ಷವಾದ ಕಥೆಯು ಭಾರತ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತೀಕವಾಗಿದೆ.
ಕ್ರಿ.ಶ. 1026 ರಲ್ಲಿ ಘಜ್ನಿಯ ಮಹಮ್ಮದ್ ನಡೆಸಿದ ದಾಳಿಯ ಸಮಯದಲ್ಲಿ ಧ್ವಂಸಗೊಂಡು ಕಣ್ಮರೆಯಾಗಿವೆ ಎಂದು ನಂಬಲಾಗಿದ್ದ ಈ ಅವಶೇಷಗಳು, ಸಾವಿರ ವರ್ಷಗಳ ಕಾಲ ರಹಸ್ಯವಾಗಿ ಸಂರಕ್ಷಿಸಲ್ಪಟ್ಟಿದ್ದವು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪ್ರಥಮ PUC ಪ್ರವೇಶಕ್ಕೆ ಅರ್ಜಿ ಆಹ್ವಾನ
ಈ ಅಂಶಗಳನ್ನು ದಕ್ಷಿಣ ಭಾರತಕ್ಕೆ ತಂದ ದೈವಭಕ್ತ ಅಗ್ನಿಹೋತ್ರಿ ಬ್ರಾಹ್ಮಣರ ವಂಶಸ್ಥರು, ಲಿಂಗಗಳ ಪ್ರಸ್ತುತ ಸಂರಕ್ಷಕರು ಲಿಂಗಗಳನ್ನು ಮತ್ತೆ ಅದರ ಪೂರ್ಣ ವೈಭವಕ್ಕೆ ಹಿಂದಿರುಗಿಸುವ ಈ ಐತಿಹಾಸಿಕ ಕ್ಷಣವನ್ನು ಮುನ್ನಡೆಸಲು ಅವರು ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ನಾಯಕ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರನ್ನು ಆಹ್ವಾನಿಸಿದ್ದಾರೆ.
ಶಿವರಾತ್ರಿಯ ಶುಭ ಸಂದರ್ಭದಂದು ಮಾತನಾಡುತ್ತಾ ಗುರುದೇವರು, “ಇದು ಸಂಪೂರ್ಣ ಭಕ್ತಿಯ ವಿಷಯ. ಕರ್ನಾಟಕದಲ್ಲಿ ಜ್ಯೋತಿರ್ಲಿಂಗ ಇಲ್ಲ. ಆದರೆ, ಕರ್ನಾಟಕದಲ್ಲಿ ಶಿವನ ಮೇಲೆ ಭಕ್ತಿ ಅಪಾರವಾಗಿದೆ. ಆದ್ದರಿಂದ, ಶಿವನಿಗೂ ಕೂಡ ದೂರವಿರಲು ಸಾಧ್ಯವಾಗಲಿಲ್ಲ. ಸಾವಿರ ವರ್ಷಗಳ ನಂತರ ಸೋಮನಾಥನು ಇಲ್ಲಿಗೆ ಬಂದಿದ್ದಾನೆ” ಎಂದು ಹೇಳಿದರು.
ಈ ಕ್ಷಣದ ಅಗಾಧವಾದ ಮಹತ್ವದ ಬಗ್ಗೆ ಗುರುದೇವರು, “ಶಿವನಿಗೆ ಐದು ಗುಣಗಳಿವೆ – ಸೃಷ್ಟಿ, ಸ್ಥಿತಿ, ಪರಿವರ್ತನೆ, ಅನುಗ್ರಹ ಮತ್ತು ತಿರೋಭಾವ (ಮರೆಯಾಗಿರುವುದು).
ಸಾವಿರ ವರ್ಷಗಳ ಕಾಲ ಮರೆಯಾದ ನಂತರ, ಶಿವನು ಈಗ ತಾನಾಗಿ ಪ್ರಕಟಗೊಂಡಿದ್ದಾನೆ. ಈ ಪವಿತ್ರ ಲಿಂಗಗಳ ರೂಪದಲ್ಲಿ ಶಿವನ ಉಪಸ್ಥಿತಿಯು, ಅವನು ಅವಿನಾಶಿ ಎಂಬುದನ್ನು ತೋರಿಸುತ್ತದೆ. ಅವನು ಶಾಶ್ವತವಾಗಿ ಇರುತ್ತಾನೆ” ಎಂದು ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 25 | ಹತ್ತಿ ರೇಟ್…
ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಸ್ಥಾನವು ಅನೇಕ ಬಾರಿ ಧ್ವಂಸವಾದರೂ ಪುನಃ ಪುನಃ ನಿರ್ಮಾಣಗೊಂಡು, ಭಕ್ತಿಯ ಸ್ಥೈರ್ಯದ ಸಂಕೇತವಾಗಿದೆ. ಮೂಲ ಲಿಂಗವು ಭೂಮಿಯಿಂದ ಸುಮಾರು ಮೂರು ಅಡಿ ಎತ್ತರದಲ್ಲಿ ತೇಲುತ್ತಿತ್ತು ಹಾಗೂ ಲಕ್ಷಾಂತರ ಭಕ್ತರು ಶಿವನನ್ನು ಪೂಜಿಸಿ ಪ್ರಾರ್ಥಿಸುತ್ತಾ, ಇದಕ್ಕೆ ಪೂಜೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ.
2007ರಲ್ಲಿ ಈ ತುಂಡುಗಳ ಮೇಲೆ ನಡೆದ ಭೂವೈಜ್ಞಾನಿಕ ಅಧ್ಯಯನದಲ್ಲಿ ಆಶ್ಚರ್ಯಕರ ವಿಷಯವೊಂದು ಕಂಡುಬಂತು. ಸಾಮಾನ್ಯ ಅಯಸ್ಕಾಂತಗಳಿಗಿಂತ ವಿಭಿನ್ನವಾಗಿ, ಈ ಕಲ್ಲಿನ ತುಂಡುಗಳ ಮಧ್ಯಭಾಗದಲ್ಲಿ ಬಲವಾದ ಕಾಂತೀಯ ಕ್ಷೇತ್ರವಿತ್ತು. ಕಲ್ಲುಗಳಲ್ಲಿ ಕಬ್ಬಿಣದ ಪ್ರಮಾಣ ತುಂಬಾ ಕಡಿಮೆ ಇತ್ತು. ಈ ರೀತಿಯ ಕಲ್ಲಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕೆಲವು ಪ್ರಾಚೀನ ಗ್ರಂಥಗಳು ಮತ್ತು ಸಂಶೋಧನಾ ಲೇಖನಗಳು ಇವು ಭೂಮಿಯ ಮೂಲದವುಗಳೇ ಅಲ್ಲ ಎಂಬ ಸೂಚನೆಯನ್ನು ನೀಡುತ್ತವೆ. ಈ ಲಿಂಗಗಳಲ್ಲಿರುವ ಪ್ರಬಲವಾದ ಶಕ್ತಿಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಸೋಮನಾಥನ ಕಥೆಯು ನಮ್ಮ ಸಮಾಜ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ನೆಲೆಸಿದೆ.
ಇದನ್ನೂ ಓದಿ: ಜಿಲ್ಲಾಸ್ಪತ್ರೆಯಲ್ಲಿ ಏ.28ರಂದು ಉಚಿತ ಗ್ಯಾಸ್ಟೊ ಶಿಬಿರ
ಚಂದ್ರ ದೇವನು ತನ್ನ ಕಷ್ಟಗಳಿಂದ ಮುಕ್ತನಾಗಲು ಶಿವನನ್ನು ಪ್ರಾರ್ಥಿಸಿದ್ದರಿಂದ ಈ ದೇವಸ್ಥಾನಕ್ಕೆ “ಸೋಮನಾಥ” ಎಂಬ ಹೆಸರು ಬಂದಿದೆ. ಚಂದ್ರನ ಪ್ರಭಾವ ಮಾನವನ ಮನಸ್ಸಿನ ಮೇಲೆ ಇರುವುದನ್ನು ಧಾರ್ಮಿಕ ಪರಂಪರೆಗಳು ಬಹುಕಾಲದಿಂದ ಗುರುತಿಸಿವೆ. ಅಶಾಂತ ಮನಸ್ಸಿಗೆ ಆಶ್ರಯಸ್ಥಾನವಾಗಿರುವ ಶಿವನು ತನ್ನ ಜಟೆಯಲ್ಲಿ ಅರ್ಧಚಂದ್ರನನ್ನು ಧರಿಸಿರುವುದು, ಭಾವನೆ ಮತ್ತು ಬುದ್ಧಿಯ ಮೇಲಿನ ನಿಯಂತ್ರಣದ ಸಂಕೇತವಾಗಿದೆ ಎಂದು ವಿವರಿಸಿದರು.
ಸಂಸ್ಥೆಯ ಮಂಜುನಾಥ್ ಮಾತನಾಡಿ, ಎಲ್ಲರಿಗೂ ಇದರ ದರ್ಶನ ಸಿಗಲಿ ಎನ್ನುವ ಉದ್ದೇಶದಿಂದ ದೇಶದ ಮೂಲೆ ಮೂಲೆಗಳಿಗೂ ಜ್ಯೋತಿರ್ಲಿಂಗ ತೆಗೆದುಕೊಂಡು ಹೋಗಲಾಗುತ್ತಿದೆ. ಇದರೊಟ್ಟಿಗೆ ಆಶ್ರಮದಿಂದ ಆನಂದದ ಅನುಭೂತಿಯ ಶಿಬಿರಗಳನ್ನು ಜೊತೆಗೆ ಮಾಡಲಾಗುತ್ತಿದೆ ಎಂದರು.
ಮಕ್ಕಳು ದಿನಕ್ಕೆ 400 ಸಲ ನಗುತ್ತಾರೆ. ದೊಡ್ಡವರು ನಗುವುದನ್ನು ಕಡಿಮೆ ಮಾಡಿದ್ದಾರೆ. ಒತ್ತಡದಿಂದ ಸಿಟ್ಟು ಸೆಡವಿನಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ನಮ್ಮೊಳಗೆ ನಾವು ಸಂಚಾರ ಮಾಡಿ ಯೋಗ, ಪ್ರಾಣಾಯಾಮ, ಧ್ಯಾನ ಮಾಡಿಸಲಾಗುತ್ತಿದೆ.
ಡಾ.ರವಿಚಂದ್ರ ಮಾತನಾಡಿ, ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ, ಒತ್ತಡ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರ ನಿವಾರಣೆಗೆ ಧ್ಯಾನ ಮಾಡಬೇಕು ಎನ್ನುವುದು ಸಾಮಾನ್ಯ. ಇದನ್ನು ರವಿಶಂಕರ್ ಗುರೂಜಿ ಸುಲಭವಾಗಿ ಅರ್ಥವಾಗಲು ಪ್ಯಾಕೇಜ್ ಮಾದರಿಯಲ್ಲಿ ಕಲಿಸುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದನ್ನು ಕಲಿತು ಅನುಸರಿಸುವುದರಿಂದ ಜೀವನದ ಉತ್ಪಾಧಕತೆ ಹೆಚ್ಚಾಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ: ನಾಯಕನಹಟ್ಟಿ ಹಟ್ಟಿ ತಿಪ್ಪೇರುದ್ರಸ್ವಾಮಿ ಹುಂಡಿಯಲ್ಲಿ 80.84 ಲಕ್ಷ ಸಂಗ್ರಹ
ಸುದ್ದಿಗೋಷ್ಠಿಯಲ್ಲಿ ಡಾ.ರವಿಚಂದ್ರ, ಶ್ವೇತಾ ಲಮಾಣಿ, ಶಿಕ್ಷಕ ರಾಜಶೇಖರ್, ಸಮಿತಿ ಮುಖ್ಯಸ್ಥ ಮಹಾಂತೇಶ್, ಅರವಿಂದ್, ಮಲ್ಲಿಕಾರ್ಜುನ್, ಪ್ರಾಜೆಕ್ಟ್ ಭಾರತ್ ಕರ್ನಾಟಕ ಮುಖ್ಯಸ್ಥ ಮಂಜುನಾಥ್ ಇದ್ದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಜ್ಯೋತಿರ್ಲಿಂಗ ದರ್ಶನ:
ಮೇ.2 ರಂದು ಚಿತ್ರದುರ್ಗದ ಮೆದೇಹಳ್ಳಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣ. ಮೇ.3 ಹೊಸದುರ್ಗದ ಅಶೋಕ ರಂಗಮಂದಿರದಲ್ಲಿ ಬೆಳಗ್ಗೆ 7.30 ರಿಂದ 11.30 ರವರೆಗೆ. ಹಾಗು ಸಂಜೆ 5 ರಿಂದ 7 ಗಂಟೆವರೆಗೆ. ಮೇ. 4ರಂದು ಚಳ್ಳಕೆರೆ ಬಿಎಂಜಿಎಚ್ಎಸ್ ಶಾಲಾ ಆವರಣದಲ್ಲಿ ಬೆಳಗ್ಗೆ 7.39 ರಿಂದ 10 ಗಂಡೆವರೆಗೆ. ಮೇ.4 ರಂದು ನಾಯಕನಹಟ್ಟಿ ಶ್ರೀ ತಿಪ್ಒಏರುದ್ರಸ್ವಾಮಿ ದೇವಾಲಯ ಹೊರಮಠದಲ್ಲಿ ಸಂಜೆ 4 ರಿಂದ 7 ರವರೆಗೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
