ಮುಖ್ಯ ಸುದ್ದಿ
Folk art fair; ಮುರುಘಾ ಮಠದಿಂದ ಅದ್ದೂರಿ ಜಾನಪದ ಕಲಾಮೇಳ | ರಾಜಬೀದಿಯಲ್ಲಿ ಸಾಗಿದ ಶರಣರು


CHITRADURGA NEWS | 12 OCTOBER 2024
ಚಿತ್ರದುರ್ಗ: ಮುರುಘಾ ಮಠ(murugha math)ದಿಂದ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಆಯೋಜಿಸಿದ್ದ ಜಾನಪದ ಕಲಾಮೇಳ(Folk art fair) ಹಾಗೂ ಶೂನ್ಯಪೀಠ ಹಾಗೂ ಮುರುಘಾ ಪರಂಪರೆಯ ಪೂಜ್ಯರುಗಳು ಭಾವಚಿತ್ರಗಳ ಮೆರವಣಿಗೆ ಶನಿವಾರ ಅದ್ದೂರಿಯಾಗಿ ಜರುಗಿತು.
ಕ್ಲಿಕ್ ಮಾಡಿ ಓದಿ: JATRE: ನಾಳೆ ಹಾರನಕಣಿವೆ ರಂಗಪ್ಪನ ಅಂಬಿನೋತ್ಸವ | ತಂಗಟೆ ಗಿಡಕ್ಕೆ ಬಾಳೆಹಣ್ಣು ಸಕ್ಕರೆಯ ಸರ್ಫ್ ವಿಶೇಷ
ಕಳೆದ 4ನೇ ತಾರೀಖಿನಿಂದ ನಡೆಯುತ್ತಿರುವ ಉತ್ಸವ ಇಂದು ಮತ್ತೊಂದು ವಿಶೇಷತೆಗೆ ಕಾರಣವಾಯಿತು.
ಬೆಳಿಗ್ಗೆ 10.30 ಕ್ಕೆ ಶರಣಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾಮೇಳಕ್ಕೆ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶ್ರೀ ಮುರುಳೀಧರ ಹಾಲಪ್ಪ ಚಾಲನೆ ನೀಡಿದರು.

ಮುರುಘಾ ಮಠದಿಂದ ಅದ್ದೂರಿ ಜಾನಪದ ಕಲಾಮೇಳ
ಬಳಿಕ ವಿವಿಧ ಪ್ರಕಾರದ ನೂರಾರು ಜಾನಪದ ಕಲಾತಂಡಗಳು ತಮ್ಮದೇ ಆದ ವಿಶಿಷ್ಟ ಭಂಗಿಯ ಪ್ರದರ್ಶನ ನೀಡುತ್ತಾ ಸಾಗಿದ ದೃಶ್ಯ ಸುಮಾರು ಮೂರು ಕಿಲೋಮೀಟರ್ನಷ್ಟು ಉದ್ದ ಸಾಗಿತು.
ಕ್ಲಿಕ್ ಮಾಡಿ ಓದಿ: Murugha math; ಸಮಾಜಮುಖಿಯಾಗಿ ಆಲೋಚಿಸಿದವರು ಜಯದೇವ ಶ್ರೀಗಳು | ಡಾ.ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಪುಷ್ಪಾಲಾಂಕೃತ ಸಾರೋಟಿನಲ್ಲಿ ಜಯದೇವ ಜಗದ್ಗುರುಗಳ ಮೂರ್ತಿ, ಜಯದೇವ ಶ್ರೀಗಳ ಬೆಳ್ಳಿ ಪ್ರತಿಮೆ ಮುಂಚೋಣ ಯಲ್ಲಿ ನಾಸಿಕ್ ಡೋಲು , ಛತ್ರಿ ಚಾಮರ, ಸೋಮನ ಕುಣ ತ, ಝಾಂಜ್ ಮೇಳ, ತಮಟೆ ವಾದ್ಯ, ಮಹಿಳಾ ತಮಟೆ ವಾದ್ಯ, ಕತ್ತಿಗುರಾಣ ಕುಣ ತ, ಹಾವೇರಿ ಜಿಲ್ಲೆಯ ಝಾಂಜ್ ಪಥಕ, ಉರುಮೆ, ಬ್ರಾಸ್ ಬ್ಯಾಂಡ್ವಾದ್ಯ, ಕೀಲುಕುದುರೆ, ವೀರ ಮಕ್ಕಳ ಕುಣ ತ, ಭರ್ಚಿ ಕುಣ ತ, ಪುರುಷರ ಡೊಳ್ಳು ಕುಣ ತ ಖಾಸ ಬೇಡರ ಪಡೆ, ಗಾರುಡಿ ಗೊಂಬೆ, ಲಂಬಾಣ ನೃತ್ಯ, ಟ್ರೆöÊಸನ್ ಡ್ರಂ ಸೆಟ್, ಭೂತನಕುಣ ತ, ಕೊಂಬು ಕಹಳೆ, ಟಕೂರಿ ವಾದ್ಯ, ನಂದಿಕೋಲು ಸಮಾಳ, ಡ್ರಮ್ ಸೆಟ್ ವಾದ್ಯ, ತ್ರಾಷ್ ವಾದ್ಯ, ಹಗಲು ವೇಷ, ಮೇಳ ವಾದ್ಯ, ಬ್ಯಾಂಜೋ, ಛತ್ರಿ ಕುಣ ತ, ಹರಿಗೆ ಕುಣ ತ,ಕರಡಿ ಚಮಾಳ ವಾದ್ಯ, ಡೊಳ್ಳು, ಗೊರವರಕುಣ ತ, ಕೋಲಾಟ ಹೀಗೆ ಹಲವಾರು ತಂಡಗಳು ತಮ್ಮದೇ ಆದ ಕಲೆಗಳನ್ನು ಪ್ರದರ್ಶಿಸುತ್ತಾ ಸಾಗುತ್ತಿದ್ದ ದೃಶ್ಯವನ್ನು ರಸ್ತೆ ಬದಿಯಲ್ಲಿ ನಿಂತು ಸಾರ್ವಜನಿಕರು ವೀಕ್ಷಿಸಿದರು.
ಕ್ಲಿಕ್ ಮಾಡಿ ಓದಿ: Reservation: ಒಳಮೀಸಲು ಜಾರಿಗೆ ಪಟ್ಟು | ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಮಾವೇಶ | ರಾಜ್ಯ ಸರ್ಕಾರದ ವಿರುದ್ಧ ಮಾದಿಗ ಮುಖಂಡರ ಅಸಮಧಾನ
ಪೂಜ್ಯರುಗಳಾದ 12ನೇಯ ಶತಮಾನದ ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ದರಾಮೇಶ್ವರ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಗೋಸಲ ಸಿದ್ದೇಶ್ವರ ಸ್ವಾಮಿಗಳು, ಗೋಸಲ ಚನ್ನಬಸವೇಶ್ವರ ಸ್ವಾಮಿಗಳು, ತೋಂಟದ ಸಿದ್ದಲಿಂಗೇಶ್ವರ ಸ್ವಾಮಿಗಳು, ಗುಮ್ಮಾಳಪುರದ ಸಿದ್ದಲಿಂಗಸ್ವಾಮಿಗಳು, ಕಟ್ಟಿಗೆಹಳ್ಳಿ ಸಿದ್ದಲಿಂಗಸ್ವಾಮಿಗಳು, ಮುರಿಗೆ ಶಾಂತವೀರ ದೇಶಿಕರು (1ನೇ ಮುರಿಗೆ ಸ್ವಾಮಿಗಳು), ಗುರುಸಿದ್ದಸ್ವಾಮಿಗಳು (ಇಮ್ಮಡಿ ಮುರಿಗೆ ಸ್ವಾಮಿಗಳು) ಸ್ವಾದಿ ಚನ್ನಬಸವ ಸ್ವಾಮಿಗಳು, ಮೂರುಸಾವಿರದ (ಸಣ್ಣ ಗುರುಪಾದಸ್ವಾಮಿಗಳು), ಮೂರುಸಾವಿರದ ಸಿದ್ದಲಿಂಗಸ್ವಾಮಿಗಳು, ಒಪ್ಪೊತ್ತಿನ ಚನ್ನವೀರಸ್ವಾಮಿಗಳು, ವ್ಯಾಕರಣದ ಸಿದ್ದಲಿಂಗಸ್ವಾಮಿಗಳು, ನೈಘಂಟಿನ ಸಿದ್ದಬಸವ ಸ್ವಾಮಿಗಳು, ಸಣ್ಣ ಬರಹದ ರಾಚವಟ್ಟಿ ಸ್ವಾಮಿಗಳು, ಸಾವಳಿಗೆ ಗುರುಶಾಂತಸ್ವಾಮಿಗಳು, ಸಣ್ಣಪಾದದ ಚನ್ನವೀರ ಸ್ವಾಮಿಗಳು, ಶಿರಸಂಗಿ ಮಹಾಲಿಂಗಸ್ವಾಮಿಗಳು, ಹೆಬ್ಬಾಳು ರುದ್ರಸ್ವಾಮಿಗಳು, ಬ್ಯಾಡಿಗಿ ಮುಪ್ಪಿನ ಸ್ವಾಮಿಗಳು, ಜಯದೇವ ಸ್ವಾಮಿಗಳು, ಜಯವಿಭವ ಸ್ವಾಮಿಗಳು, ಮಲ್ಲಿಕಾರ್ಜುನಸ್ವಾಮಿಗಳು, ಬಸವಣ್ಣನವರು, ಅಕ್ಕಮಹಾದೇವಿ, ಅಥಣ ಮುರುಘೇಂದ್ರ ಶಿವಯೋಗಿಗಳು, ಮೃತ್ಯುಂಜಯ ಅಪ್ಪಗಳ ಭಾವಚಿತ್ರಗಳು ಜನರನ್ನು ಆಕರ್ಷಿಸಿದವು. ಹಾಗೆಯೇ ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು, ಸಾರ್ವಜನಿಕರು, ಸ್ವಾಮೀಜಿಗಳು, ವಿದ್ಯಾರ್ಥಿಗಳು ವಚನಗಳನ್ನು ಹೇಳುತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದರು.

ಮುರುಘಾ ಮಠದಿಂದ ಅದ್ದೂರಿ ಜಾನಪದ ಕಲಾಮೇಳ
ಉತ್ಸವವು ಮಠದಿಂದ ಹೊರಟು ನಗರದ ಪ್ರಮುಖ ರಾಜಬೀದಿಗಳಾದ ಸಂತೆಪೇಟೆ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಬಸವಮಂಟಪರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಕೋಟೆಯ ಮೇಲುದುರ್ಗಕ್ಕೆ ಸಾಗಿ ಅಂತ್ಯಗೊಂಡಿತು.
ಕ್ಲಿಕ್ ಮಾಡಿ ಓದಿ: Colours kannada: ನಟ ಹುಲಿ ಕಾರ್ತಿಕ್ಗೆ ಇಮ್ಮಡಿ ಶ್ರೀ ಅಭಯ | ಬಡವರ ಮಕ್ಕಳು ಬೆಳೆಯಬೇಕು ಎಂದ ಶ್ರೀಗಳು
ಮೇಳದಲ್ಲಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಶ್ರೀ. ಬಸವಕುಮಾರ ಸ್ವಾಮಿಗಳು, ಶ್ರೀ ಮಾದಾರ ಚೆನ್ನಯ್ಯ ಸ್ವಾಮಿಗಳು, ಡಾ.ಬಸವಪ್ರಭು ಸ್ವಾಮಿಗಳು, ಇಳಕಲ್ ಶ್ರೀ ಗುರುಮಹಾಂತಸ್ವಾಮಿಗಳು, ಗುರುಮಠಕಲ್ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಡಾ,ಬಸವ ರಮಾನಂದಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಆಡಳಿತಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಂ ಕೆ ತಾಜ್ ಪೀರ್, ಪಟೇಲ್ ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಹರಗುರು ಚರಮೂರ್ತಿಗಳು, ಎಸ್.ಜೆ.ಎಂ.ವಿದ್ಯಾಪೀಠದ ವಿವಿಧ ಸಂಸ್ಥೆಗಳ ಮುಖ್ಯಸ್ಥರುಗಳು, ವಿವಿಧಜಾತಿ, ಧರ್ಮದ ಮುಖಂಡರು, ಜನಪ್ರತಿನಿಧಿಗಳು, ಸಾರ್ವಜನಿಕರು ಉತ್ಸವದಲ್ಲಿ ಭಾಗವಹಿಸಿದ್ದರು.

