CHITRADURGA NEWS | 05 MAY 2026
ಚಿತ್ರದುರ್ಗ: ರಾಜ್ಯದ ವಿವಿಧೆಡೆಗಳಿಂದ ಬಿ.ಎಸ್.ಯಡಿಯೂರಪ್ಪರವರ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಜನತೆ ಯಾವುದೇ ಕಾರಣದಿಂದಲೂ ಸಹಾ ಊಟದ ಕೂರತೆಯಾಗದಂತೆ ನಿಭಾಯಿಸಲಾಗುವುದೆಂದು ಎಂದು ಬೆಂಗಳೂರಿನ ಯಲಹಂಕ ಶಾಸಕ ವಿಶ್ವನಾಥ್ ತಿಳಿಸಿದರು.
ಇದನ್ನೂ ಓದಿ: ಯಡಿಯೂರಪ್ಪ ಸಿಎಂ ಆಗಿದ್ದಾಗ ನಾನು ಕೇಳಿದಷ್ಟು ಅನುದಾನ ಕೊಡುತ್ತಿದ್ದರು | ಎಂ.ಚಂದ್ರಪ್ಪ
ಮೇ.9ರಂದು ಚಿತ್ರದುರ್ಗ ನಗರದ ಹೊರವಲಯದ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಪಕ್ಕದಲ್ಲಿರುವ ಮೈದಾನದಲ್ಲಿ ನಡೆಯಲಿರುವ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಆಹಾರಕ್ಕೆ ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸುಮಾರು 10 ಲಕ್ಷ ಜನತೆ ಆಗಮಿಸಲಿದ್ದಾರೆ, ಇಲ್ಲಿಗೆ ಬರುವವರಿಗೆ ಊಟ, ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಪಕ್ಷ ಬೆಂಗಳೂರಿನ ಶಾಸಕರಿಗೆ ಮತ್ತು ಪ್ರಮುಖರಿಗೆ ವಹಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೆ ಅಡುಗೆ ಭಟ್ಟರನ್ನು ನೇಮಿಸಲಾಗಿದೆ. ಸುಮಾರು 500 ಜನ ಅಡುಗೆ ಮಾಡುವವರು ಅಡುಗೆ ಸಾಮಾನಿನ ಸಮೇತರಾಗಿ ಚಿತ್ರದುರ್ಗಕ್ಕೆ ಬರಲಿದ್ದಾರೆ, ಇದಕ್ಕೆ ಸಂಬಂಧಪಟ್ಟಂತೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಕಾರ್ಯಕ್ರಮ ನಡೆಯುವ ದಿನದಂದು ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ಊಟದ ವ್ಯವಸ್ಥೆ ಮಾಡಲಾಗುವುದು. ಬಂದವರಿಗೆ ಭಫೆ ರೀತಿಯಲ್ಲಿ ಊಟ ಬಡಿಸಲಾಗುವುದು. ಬೆಳಿಗ್ಗೆ ಟಮೋಟೋ ಬಾತ್, ಮೂಸರನ್ನ, ಮೈಸೂರು ಪಾಕ್, ವಾಟರ್ ಬಾಟಲ್ ನೀಡಲಾಗುವುದು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಹುದ್ದೆ | ಅರ್ಜಿ ಆಹ್ವಾನ
12ರ ನಂತರ ವೆಜಿಟೇಬಲ್ ಪಲಾವ್, ಮೊಸರನ್ನ, ಮೈಸೂರು ಪಾಕ್ ಹಾಗೂ ಬಾಟಲ್ ನೀರನ್ನು ನೀಡಲಾಗುವುದು. ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಬಂದವರನ್ನು ಹಸಿದ ಹೊಟ್ಟೆಯಲ್ಲಿ ಕಳುಹಿಸುವುದಿಲ್ಲ ಏನಾದರೂ ಮಾಡಿ ನೀಡಲಾಗುತ್ತದೆ.
ಎಲ್ಲಾ ಜವಾಬ್ದಾರಿಯನ್ನು ಅಡುಗೆ ಮಾಡುವವರಿಗೆ ನೀಡಲಾಗಿದ್ದು ಒಂದು ಊಟಕ್ಕೆ ಇಂತಿಷ್ಟು ಎಂದು ಮಾತನಾಡಲಾಗಿದೆ. ಊಟ ನೀಡುವಲ್ಲಿ ಯಾವುದೇ ಸಮಸ್ಯೆಯಾಗಬಾರದೆಂದು ಒಂದೊಂದು ಕೌಂಟರ್ ಬಳಿ ಇಬ್ಬರು ಶಾಸಕರು, 120 ಜನ ಸ್ವಯಂ ಸೇವಕರು ಇರಲಿದ್ದಾರೆ. ಜನರಿಗೆ ಬಿಸಿಯಾದ ಆಹಾರವನ್ನು ನೀಡಲಾಗುವುದು ತಣ್ಣನೆ ಆಹಾರವನ್ನು ನೀಡುವುದಿಲ್ಲ ಎಂದು ತಿಳಿಸಿದರು.
ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಶಾಸಕರಾದ ಮುನಿರತ್ನ ಮಾತನಾಡಿ, ಯಡಿಯೂರಪ್ಪರವರು ಕೊಟ್ಟ ಮಾತಿನಂತೆ ನಡೆದ ವ್ಯಕ್ತಿಯಾಗಿದ್ದಾರೆ. ಅಧಿಕಾರದ ಸಮಯದಲ್ಲಿ ತಾನು ಬೆಳೆದು ತನ್ನ ಜೊತೆಯಲ್ಲಿ ಇರುವವರನ್ನು ಸಹಾ ಬೆಳೆಸುವುದರ ಮೂಲಕ ದೊಡ್ಡ ವ್ಯಕ್ತಿಯಾಗಿದ್ದಾರೆ.
ನಂಬಿದವರನ್ನು ಕೈಬಿಡುವುದಿಲ್ಲ ಎಂಬ ಹೆಸರು ಯಾರಿಗಾದರೂ ಇದ್ದರೆ ಅದು ಯಡಿಯೂರಪ್ಪರವರಿಗೆ ಮಾತ್ರ, ಇವರ 50 ವರ್ಷದ ಹೋರಾಟದ ಜೀವನದ ಸಾಧನೆಯ ಕಾರ್ಯಕ್ರಮದ ಯಶಸ್ವಿಗೆ ಎಲ್ಲರು ಸಹಾ ಕಂಕಣ ಬದ್ದರಾಗಿ ದುಡಿಯಲಾಗುತ್ತಿದೆ. ಪಕ್ಷದ ಕಾರ್ಯಕರ್ತರಿಗೆ ಹಬ್ಬದ ವಾತಾವರಣವನ್ನು ಮೂಡಿಸಿದೆ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ.05 | ಹತ್ತಿ ರೇಟ್ ಎಷ್ಟಿದೆ?
ಈ ಸಂದರ್ಭದಲ್ಲಿ ಮಹಾಲಕ್ಷ್ಮೀ ಪುರಂ ಶಾಸಕ ಗೋಪಾಲಯ್ಯ, ದಾಸರಹಳ್ಳಿ ಶಾಸಕ ಮುನಿರಾಜ್, ಬೆಂಗಳೂರು ದಕ್ಷಿಣದ ಕೃಷ್ಣಪ್ಪ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡ್, ರಾಜ್ಯ ಉಪಾಧ್ಯಕ್ಷರಾದ ತಮ್ಮೇಶ್ ಗೌಡ, ಮಲ್ಲಿಕಾರ್ಜನ ಕಲ್ಲಂ ಸೀತರಾಮರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
