ಚಿತ್ರದುರ್ಗ ನ್ಯೂಸ್. ಕಾಂ: ಜಿಲ್ಲೆಯಲ್ಲಿ 68 ಪ್ರಕರಣಗಳಲ್ಲಿ ಕಳುವಾಗಿದ್ದ 1.57,57299 ರೂ.ಮೌಲ್ಯದ ಚಿನ್ನಾಭರಣ ನಗದು, ವಾಹನಗಳು, ಮೊಬೈಲ್ ಮತ್ತಿತರ ವಸ್ತುಗಳ ಪೊಲೀಸರು ಮಾಲಿಕರಿಗೆ ಹಿಂತಿರುಗಿಸಿದ್ದಾರೆ.
6.24 ಲಕ್ಷ ರೂ.ಮೌಲ್ಯದ 52 ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡು ಪೊಲೀಸರು ಹಿಂತಿರುಗಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮೂಲ ಮಾಲಿಕರಿಗೆ ಹಸ್ತಾಂತರ ಮಾಡಿದರು.
ಇದನ್ನೂ ಓದಿ: ಊರ ಹಬ್ಬದ ದಿನವೇ ಕೊಲೆ
ಸದರಿ ಪ್ರಕರಣಗಳಲ್ಲಿ ಚಿತ್ರದುರ್ಗ ಉಪವಿಭಾಗದಿಂದ 22 ಪ್ರಕರಣದಲ್ಲಿ 1.08,48,299 ರೂ.ಮೌಲ್ಯದ ಸ್ವತ್ತುಗಳು, ಹಿರಿಯೂರು ಉಪವಿಭಾಗದಿಂದ 16 ಪ್ರಕರಣಗಳಲ್ಲಿ 24,95 ಲಕ್ಷ ಹಾಗೂ ಚಳ್ಳಕೆರೆ ಉಪವಿಭಾಗದಿಂದ 30 ಪ್ರಕರಣಗಳಲ್ಲಿ 24,14 ಲಕ್ಷ ರೂ. ಮೌಲ್ಯದ ಮಾಲುಗಳನ್ನು ಹಿಂತಿರುಗಿಸಿದ್ದಾರೆ.
ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಪತ್ತೆಹಚ್ಚಿ 6.24 ಲಕ್ಷ ರೂ.ಮೌಲ್ಯದ 52 ಮೊಬೈಲ್ ಮಾಲಿಕರಿಗೆ ಕೊಟ್ಟಿದ್ದಾರೆ.
ಈ ಪ್ರಕರಣಗಳಲ್ಲಿ 1 ಕೆ.ಜಿ. ಬಂಗಾರ, 2 ಕೆಜಿ ಬೆಳ್ಳೆ,ಯನ್ನೂ ವಶಪಡಿಸಿಕೊಂಡು ಮಾಲಿಕರಿಗೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಚ್.ಜೆ.ಕುಮಾರಸ್ವಾಮಿ, ಅಬ್ದುಲ್ ಖಾದರ್, ಡಿಎಸ್ಪಿಗಳಾದ ಎಚ್.ಆರ್.ಅನಿಲ್ ಕುಮಾರ್, ರಾಜಣ್ಣ, ಎಸ್.ಚೈತ್ರಾ, ಗಣೇಶ್ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
