
CHITRADURGA NEWS | 30 MAY 2024
ಚಿತ್ರದುರ್ಗ: ನಿತ್ಯ ಮುಂಜಾನೆ ಕಾಫಿ ಜತೆಗೆ ಜತೆಯಾಗುವ ಪತ್ರಿಕೆಯನ್ನು ಅಚ್ಚುಕಟ್ಟಾಗಿ ಓದುಗನ ಕೈಸೇರಿಸುವ ಪತ್ರಿಕೆ ವಿತರಕರನ್ನು ಒಂದೇ ಸ್ಥಳದಲ್ಲೇ ಕಣ್ತುಂಬಿಕೊಳ್ಳಬೇಕೆ..ಆಗಿದ್ರೆ ನಿಮ್ಮ ಕ್ಯಾಲೆಂಡರ್ನಲ್ಲಿ ಸೆಪ್ಟೆಂಬರ್ 8 ಅನ್ನು ಗುರುತು ಮಾಡಿಟ್ಟುಕೊಳ್ಳಿ.
ಕೋಟೆನಾಡು ಚಿತ್ರದುರ್ಗದಲ್ಲಿ ಸೆಪ್ಟೆಂಬರ್ 8 ರಂದು ಪತ್ರಿಕಾ ವಿತರಕರ ನಾಲ್ಕನೇ ರಾಜ್ಯ ಸಮ್ಮೇಳನ ನಡೆಸಲು ಸಿದ್ಧತೆ ಪ್ರಾರಂಭವಾಗಿವೆ. ಈಗಾಗಲೇ ಮೂರು ರಾಜ್ಯಮಟ್ಟದ ವಿತರಕರ ಸಮ್ಮೇಳನ ಯಶಸ್ವಿಯಾಗಿ ನಡೆದಿವೆ.
ಸಮ್ಮೇಳನದ ಕುರಿತು ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ, ‘ಚಿತ್ರದುರ್ಗದಲ್ಲಿ ನಾಲ್ಕನೇ ವಿತರಕರ ರಾಜ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದರು.

ಕ್ಲಿಕ್ ಮಾಡಿ ಓದಿ: ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ | ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ
ಸಭೆಯಲ್ಲಿ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಹುಬ್ಬಳ್ಳಿ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಳಗಾವಿ, ಶಿಗ್ಗಾಂವ್, ಚನ್ನರಾಯಪಟ್ಟಣ, ವಿಜಯಪುರ, ಹರಿಹರ, ತುಮಕೂರು, ಬೆಂಗಳೂರಿನ ಗಾಂಧಿನಗರ, ವಿಜಯನಗರದ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಕ್ಲಿಕ್ ಮಾಡಿ ಓದಿ: ಜಿಲ್ಲಾ ಆಸ್ಪತ್ರೆಯಲ್ಲಿ ಕೀಲು, ಮೂಳೆ ಆಪರೇಷನ್ ಇನ್ ಪ್ಲಾಂಟ್ಸ್ ಉಚಿತ
ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸುದೇವ್ ನಾದನೂರು, ಜಿಲ್ಲಾ ಸಂಘಟನಾ ಸಲಹೆಗಾರ ಜಿ.ತಿಪ್ಪೇಸ್ವಾಮಿ ಇಂಗಳದಾಳ್, ಜಿಲ್ಲಾ ಉಪಾಧ್ಯಕ್ಷರಾದ ಆರ್.ಮೋಹನ್, ಕುಬೇಂದ್ರಪ್ಪ, ತುಮಕೂರು ಜಿಲ್ಲಾ ಅಧ್ಯಕ್ಷ ಚೆಲುವರಾಜ್, ಪುಟ್ಟಣ್ಣ ಗೋಕಾಕ್ ಚನ್ನರಾಯಪಟ್ಟಣ, ಎನ್.ರಾಜು ವಿಜಯನಗರ, ಅನಿಲ್ ಕುಮಾರ್ ವಿಜಯಪುರ, ಮನೋಹರ ಪರ್ವತಿ ಹುಬ್ಬಳ್ಳಿ, ನಂಜುಂಡ ಚಿಕ್ಕಮಗಳೂರು, ಚಳ್ಳಕೆರೆ ಓಂಕಾರಪ್ಪ, ಶಿವು ಹಲಗಿ ಧಾರವಾಡ, ದುಗ್ಗಪ್ಪ ಮೇದೆಹಳ್ಳಿ, ವೇದಮೂರ್ತಿ ಭೀಮಸಮುದ್ರ, ತರುಣ್, ಪ್ರಜ್ವಲ್, ನಾಮದೇವ್ ಬೆಳಗಾವಿ, ಪುರುಷೋತ್ತಮ್ ಚಾಮರಾಜನಗರ, ಮಲ್ಲಿಕಾರ್ಜುನ್ ಭದ್ರಾವತಿ, ಜಯಪ್ಪ ಬಣಕಾರ್ ಹಾವೇರಿ, ವಿಜಯಕುಮಾರ್, ಸೋಮಶೇಖರ್ ಭದ್ರಾವತಿ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
