ಹೊಸದುರ್ಗ
Shantaveera swamiji; ಸಂಘಟಿತರಾದರೆ ಸಾಮಾಜಿಕ ನ್ಯಾಯ, ಮೀಸಲಾತಿ ಸಾಧ್ಯ | ಶಾಂತವೀರ ಶ್ರೀ


CHITRADURGA NEWS | 10 OCTOBER 2024
ಹೊಸದುರ್ಗ: ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಸಂಘಟನೆಗೆ ಗುರುಗಳು ಮತ್ತು ಭಕ್ತರು ಪರಸ್ಪರ ಸೌಹಾರ್ದತೆಯಿಂದ ಹೆಜ್ಜೆ ಹಾಕಿದರೆ ಮಾತ್ರ ಕುಂಚಿಟಿಗ ಸಮಾಜ ಸಂಘಟನೆಯಾಗಿ ಸಾಮಾಜಿಕ ನ್ಯಾಯ ಮೀಸಲಾತಿ ಪಡೆಯಲು ಸಾಧ್ಯ ಎಂದು ಹೊಸದುರ್ಗ ಕುಂಚಗಿರಿ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ(Shantaveera swamiji) ಹೇಳಿದರು.
ಕ್ಲಿಕ್ ಮಾಡಿ ಓದಿ: BJP; ಭ್ರಷ್ಟಾ ಸರ್ಕಾರ ಎಂಬ ಹಣೆಪಟ್ಟಿ ಮರೆ ಮಾಚಲು ಜಾತಿ ಗಣತಿ ಅಸ್ತ್ರ | ಸಿ.ಟಿ.ರವಿ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದಲ್ಲಿ ನಡೆದ ಕಳಸ ಪ್ರತಿಷ್ಠಾಪನ ಮಹಾದ್ವಾರ ಉದ್ಘಾಟನಾ ಹಾಗೂ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕುಂಚಿಟಿಗ ಸಮಾಜದ ಅನೇಕ ಸಮಸ್ಯೆಗಳು ಪರಿಹಾರವಾಗದೆ ಇರಲು ಗುರುಗಳು ಮತ್ತು ಭಕ್ತರ ಮಧ್ಯೆ ಇರುವ ಗುಂಪುಗಾರಿಕೆಯಿಂದ, ಪ್ರತಿಷ್ಠೆಗಳಿಂದ, ಪೈಪೋಟಿಯಿಂದ ಸಮಾಜ ನಲುಗುತ್ತಿದೆ ಒಂದು ಗುರುಗಳತ್ರ ಒಂದು ಬಣ ಚಾಡಿ ಹೇಳಿ ತಮ್ಮ ಬೇಳೆ ಬೇಕುಂಚಿಟಿಗ ಸಮಾಜಯಿಸಿಕೊಳ್ಳಲು ಮಠಾಧೀಶರನ್ನು ಬಳಸಿಕೊಂಡು ಕುಂಚಿಟಿಗ ಸಮಾಜದ ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ.
ಕುಂಚಿಟಿಗರು ಒಗ್ಗಟ್ಟಾಗಲು ಭಕ್ತರು ಮತ್ತು ಸ್ವಾಮಿಗಳು ಪರಸ್ಪರ ರಾಗ, ದ್ವೇಷಗಳನ್ನು ಬಿಟ್ಟು ಸಮಾಜದ ಏಳಿಗೆಗೆ ಕಂಕಣ ತೊಡಲು ಇದು ಸರಿಯಾದ ಸಮಯ, ಸಣ್ಣಪುಟ್ಟ ಸಮುದಾಯಗಳು ಗೊಂದಲವಿಲ್ಲದೆ ಸಂಘಟನೆ ಆಗುತ್ತಿವೆ, ಇದನ್ನು ನೋಡಿಯೂ ಸಂಘಟನೆಯಾಗದಿದ್ದರೆ ಸ್ವಾಮಿಗಳಾದ ನಾವುಗಳು ಪ್ರತಿಷ್ಠೆ ಬಿಡದಿದ್ದರೆ ನಮ್ಮಲ್ಲಿರುವಂಥ ಬಡವರಿಗೆ ನಾವೇ ದ್ರೋಹ ಮಾಡಿದಂತೆ.
ಕ್ಲಿಕ್ ಮಾಡಿ ಓದಿ: APMC; ಚಿತ್ರದುರ್ಗ ಮಾರುಕಟ್ಟೆ ಧಾರಣೆ | 10 ಅಕ್ಟೋಬರ್ | ಇಂದಿನ ಹತ್ತಿ ರೇಟ್
ಕುಂಚಿಟಿಗ ಸಮಾಜದ ಸಂಘಟನೆಗಳು ಅರ್ಥೈಸಿಕೊಂಡು ಸ್ವಾಮಿಗಳನ್ನು ಪರಸ್ಪರ ಸೇರಿಸುವ ಮಹತ್ಕಾರ್ಯ ಮಾಡಬೇಕೆ ಹೊರತು ಸ್ವಾಮಿಗಳ ಮಧ್ಯೆ ಕಲಹ ತಂದಿಟ್ಟು ವಿಕೃತ ಸಂತೋಷ ಪಡಬೇಡಿ, ಸಮಾಜಕ್ಕೆ ತನ್ನದೇ ಆದ ಪರಂಪರೆ, ಬುಡಕಟ್ಟು, ಕುಲ, ಬೆಡಗುಗಳು ಇರುವ ಕಾರಣ ಸಮಾಜ ಜಾಗೃತರಾಗಬೇಕು ಶಿಕ್ಷಣವಂತರಾಗಬೇಕು. ಸಂಸ್ಕಾರವಂತರಾಗಬೇಕು. ಆಗ ಸಮಾಜದಲ್ಲಿ ಪೈಪೋಟಿ ನಡೆಸಲು ಸಾಧ್ಯ.
ಕುಂಚಿಟಿಗ ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕೆ ನಮ್ಮ ಕೋರಿಕೆಯಂತೆ ಅಂದಿನ 2015 ರ ಸಿದ್ದರಾಮಯ್ಯನವರ ಸರ್ಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ಸಚಿವರಾದ ಎಚ್. ಆಂಜನೇಯನವರು ತಮ್ಮ ಹೊಳಲ್ಕೆರೆ ಕ್ಷೇತ್ರದಲ್ಲಿ ಅತಿ ಹೆಚ್ಚು ಕುಂಚಿಟಿಗರು ಇರುವುದರಿಂದ ಸಮುದಾಯದ ಸ್ಥಿತಿ ಮನಗಂಡು ಕುಲಶಾಸ್ತ್ರ ಅಧ್ಯಯನಕ್ಕೆ ಹಣ ಬಿಡುಗಡೆ ಮಾಡಿ ಕುಲಶಾಸ್ತ್ರವನ್ನು ನಡೆಸಿ ಈಗಾಗಲೇ ಸರ್ಕಾರದ ಕೈಯಲ್ಲಿದೆ.
ಆ ಕುಲಶಾಸ್ತ್ರ ಅಧ್ಯಯನ ಯಥವತ್ ಜಾರಿಗೆ ಸಮಾಜದ ಸಂಘಟನೆಗಳು ಮಠಗಳು ಪ್ರಯತ್ನಿಸಬೇಕು ಇವತ್ತಿನ ಪರಿಸ್ಥಿತಿಯಲ್ಲಿ ಸಂಘಟನೆಯಾಗಿ ಸಮಾವೇಶಗಳನ್ನು ನಡೆಸಿ ಒತ್ತಡವನ್ನು ತರದೆ ಇದ್ದರೆ ಯಾರೂ ಕರೆದು ಮೀಸಲಾತಿಯನ್ನು ನೀಡುವುದಿಲ್ಲ ಇದನ್ನು ಅರ್ಥೈಸಿಕೊಂಡು ಸಮಾಜದ ಬಾಂಧವರು ಸಂಘಟಿತರಾಗಬೇಕು.
ಕ್ಲಿಕ್ ಮಾಡಿ ಓದಿ: Conversion: ಕ್ರೈಸ್ತ ಧರ್ಮಕ್ಕೆ ಮತಾಂತರ ಯತ್ನ ಆರೋಪ | ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಸಮಾಜಕ್ಕೆ ಗುರುಗಳಿದ್ದು ಅವರನ್ನು ಬಳಸಿಕೊಂಡು ಸಾಮಾಜಿಕ ನ್ಯಾಯ ಪಡೆಯುವ ಹಿನ್ನೆಲೆಯಲ್ಲಿ ಜಾಗೃತರಾಗಬೇಕು, ಮೊದಲು ಕುಂಚಿಟಿಗ ಸಮುದಾಯದಲ್ಲಿ ಐದಾರು ಜನ ಶಾಸಕರು ಇಬ್ಬರು ಸಂಸದರು ಇರುತ್ತಿದ್ದರು ಸಮಾಜದ ಸಂಘಟನೆ ಕೊರತೆಯಿಂದ ನಮ್ಮನ್ನು ಬೇರೆ ಸಮುದಾಯಗಳು ಬಳಸಿಕೊಳ್ಳುತ್ತಿರುವುದರಿಂದ ದೊಡ್ಡ ದೊಡ್ಡ ಸಮುದಾಯಗಳ ಬೆನ್ನತ್ತಿರುವ ಸಂಘಟನೆಗಳು ನಮ್ಮ ಸಮುದಾಯದ ಅಸ್ತಿತ್ವವನ್ನೇ ಬುಡಮೇಲು ಮಾಡುವ ಅಪಾಯವಿದೆ.
ಕುಂಚಿಟಿಗ ಸಮಾಜವು ತನ್ನದೇ ಆದ ಪರಂಪರೆ ಬಂದಿದ್ದು ಆ ಪಥದಲ್ಲಿ ಸಾಗಿ ನಾವುಗಳು ಸಮಾಜವನ್ನು ಸಂಘಟಿಸಬೇಕಿದೆ ಪ್ರಾಂತ್ಯಭೇದವನ್ನು ಮರೆತು ಸಂಪ್ರದಾಯಗಳನ್ನು ಮರೆತು ಸಮುದಾಯವನ್ನು ಸಂಘಟಿಸಿ ಸಮುದಾಯದ ಬಡವರ ಬಗೆಗೆ ನಮ್ಮ ಕರುಣೆ ಬೀಳಬೇಕು ನಮ್ಮ ಸಮುದಾಯಗಳನ್ನು ಬಳಸಿಕೊಂಡ ರಾಜಕೀಯ ನಾಯಕರು ನಮ್ಮ ಸಂಘಟನೆಗೆ ಸಹಕರಿಸದೆ ಇರುವುದು ಸಂಘಟನೆಯ ಲೋಪ ಈ ಲೋಪವನ್ನು ಸರಿಪಡಿಸಿಕೊಂಡರೆ ಸರ್ಕಾರಗಳು ಜನಪ್ರತಿನಿಧಿಗಳು ಸಮುದಾಯದ ಮಾತನ್ನು ಕೇಳಲು ಸಾಧ್ಯ.
ಶತಾಯುಷಿ ಲಕ್ಷ್ಮಮ್ಮ, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 625 ಕ್ಕೆ 623 ಚರಿತ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು.
ಕ್ಲಿಕ್ ಮಾಡಿ ಓದಿ: Karnataka governement: ಪ್ರಶಸ್ತಿ ಆಯ್ಕೆ ಸಮಿತಿಗೆ ಹಿರಿಯ ಪತ್ರಕರ್ತ ಕ.ಮ.ರವಿಶಂಕರ್ | ರಾಜ್ಯ ಸರ್ಕಾರದ ಆದೇಶ
ಶ್ರೀ ಲಕ್ಷ್ಮಿ ದೇವಸ್ಥಾನದ ಟ್ರಸ್ಟಿನ ಪದಾಧಿಕಾರಿಗಳು ಭಕ್ತರು ಇದ್ದರು.

