
ಚಿತ್ರದುಗ: ನಗರದ ನೀಲಕಂಠೇಶ್ವರ ಬಡಾವಣೆಯಲ್ಲಿ ಮತಾಂತರಕ್ಕೆ(conversion) ಯತ್ನಿಸಿದ ಆರೋಪದಡಿ ಇಬ್ಬರ ಮೇಲೆ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಬಿನ್ ಹಾಗೂ ಬಿನ್ನಿ ಎಂಬುವವರ ವಿರುದ್ಧ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ನೀಲಕಂಠೇಶ್ವರ ಬಡಾವಣೆಯ ಅನಿಲ್ ಕುಮಾರ್ ದೂರು ದಾಖಲಾಗಿದೆ.

ಅ.9 ರಂದು ಸಂಜೆ 7.30ಕ್ಕೆ ಅನಿಲ್ಕುಮಾರ್ ಮನೆಗೆ ಏಕಾಏಕಿ ಆಗಮಿಸಿದ ರಾಬಿನ್ ಹಾಗೂ ಬಿನ್ನಿ, ಈ ಹಿಂದೆ ಎರಡು ಬಾರಿ ನಿಮ್ಮ ಮನೆಗೆ ಬಂದಿದ್ದೆವು, ನಿಮ್ಮ ತಾಯಿ ಜೊತೆಗೆ ಮಾತನಾಡಿದ್ದೇವೆ. ನೀವು ಹಿಂದೂ ಧರ್ಮ ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ೩೨ ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಚಾಲನೆ
ಮತಾಂತರ ಆಗುವುದರಿಂದ ನಿಮಗೆ ತುಂಬಾ ಅನುಕೂಲವಾಗುತ್ತದೆ. ನಾವು ಹಣಕಾಸಿನ ಸಹಾಯವನ್ನೂ ಮಾಡುತ್ತೇವೆ. ನಿಮ್ಮ ದೇವರುಗಳು ದೇವರೇ ಅಲ್ಲ, ಕಲ್ಲುಗಳು, ಜಗತ್ತಿಗೆಲ್ಲಾ ಒಬ್ಬನೇ ದೇವರು ಏಸುಕ್ರಿಸ್ತರು, ಅವರನ್ನು ಆರಾಧಿಸಿ ಎಂದು ಪ್ರಚೋಧನೆ ಮಾಡಿದ್ದಾರೆ.
ಈ ಬಗ್ಗೆ ನನ್ನ ಸ್ನೇಹಿತರಿಗೂ ಹೇಳಿ ಅವರನ್ನೂ ಕರೆಯಿಸುತ್ತೇನೆ ಎಂದು ಅನಿಲ್ಕುಮಾರ್, ನಗರಸಭೆ ಸದಸ್ಯ ಶಶಿಧರ್ ಹಾಗೂ ಶ್ರೇಣಿಕ್ ಜೈನ್ ಅವರಿಗೆ ಪೋನ್ ಮಾಡಿದ್ದಾರೆ. ಸ್ನೇಹಿತರಿಗೆ ಪೋನ್ ಮಾಡುತ್ತಿದ್ದಂತೆ ರಾಬಿನ್ ಹಾಗೂ ಬಿನ್ನಿ ಮನೆಯಿಂದ ಹೊರಟು ಹೋಗಿದ್ದಾರೆ.
ಇದನ್ನೂ ಓದಿ: ಒಳಮೀಸಲಾತಿಗೆ ಒತ್ತಾಯಿಸಿ ಹೋರಾಟ | ಸಂಸದ ಗೋವಿಂದ ಕಾರಜೋಳ
ಈ ಬಗ್ಗೆ ಸಮಾಲೋಚನೆ ನಡೆಸಿ ಕೋಟೆ ಠಾಣೆಯಲ್ಲಿ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ಅನಿಲ್ಕುಮಾರ್ ದೂರು ದಾಖಲಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
