
CHITRADURGA NEWS | 19 JANUARY 2026
ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನ್ರೇಗಾ (MGNREGA) ಹೆಸರಿನ ಯೋಜನೆಯನ್ನು ವಿ.ಬಿ.ಜಿ ರಾಮ್ ಜಿ ಎಂದು ಬದಲಾಯಿಸಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಮಟ್ಟದ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | 19 ಜನವರಿ | ಚನ್ನಗಿರಿ, ಭೀಮಸಮುದ್ರ ಇತರೆ ಅಡಿಕೆ ಮಾರುಕಟ್ಟೆ ವಿವರ
ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನೆ ನಡೆಸಿ, ಅಂಬೇಡ್ಕರ್ ವೃತ್ತದಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸಚಿವ ಡಿ.ಸುಧಾಕರ್ ಮಾತನಾಡಿ, ಮನರೇಗಾ ಯೋಜನೆಯ ರೂಪ ಬದಲಾಯಿಸಿ ಹೆಸರನ್ನೂ ಬದಲಿಸಲು ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ.
ದೇಶದ ಆರ್ಥಿಕ ತಜ್ಞ ಮನ್ಮೋಹನ್ ಸಿಂಗ್ ಅವರು ಜಾರಿಗೆ ತಂದ ಮನ್ರೇಗಾ ಯೋಜನೆಯನ್ನು ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತದೆ. ಈ ಮೂಲಕ ಗ್ರಾಮೀಣ ಕೂಲಿ ಕಾರ್ಮಿಕರಿಗೆ, ಗ್ರಾ.ಪಂ ವ್ಯಾಪ್ತಿಯಲ್ಲಿ ಕೃಷಿಕ ಬದುಕು, ಆಸ್ತಿಗಳ ರಕ್ಷಣೆ, ಸ್ವತ ಸಮಸ್ಯೆಗಳ ನಿವಾರಣೆ, ಕನಿಷ್ಠ ಕೂಲಿ ದೊರಕಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಒದಗಿಸುವ ಯೋಜನೆಯಾಗಿತ್ತು ಎಂದರು.
ಇದನ್ನೂ ಓದಿ: ಸಚಿವ ಕೆ.ಹೆಚ್.ಮುನಿಯಪ್ಪ ಚಿತ್ರದುರ್ಗ ಜಿಲ್ಲಾ ಪ್ರವಾಸ
ಹಿಂದೆಯೂ ಈ ಯೋಜನೆಯನ್ನು ಬದಲಿಸಲು ಕೇಂದ್ರ ಸರಕಾರ ಮುಂದಾಗಿತ್ತು. ಆದರೆ ಸಾಕಷ್ಟು ಹೋರಾಟಗಳ ಫಲವಾಗಿ ಈ ಯೋಜನೆ ಯಥಾಸ್ಥಿತಿಯಲ್ಲಿ ಮುಂದುವರೆದಿತ್ತು. ಅಡಚಣೆ ಇದ್ದರೂ ಮನ್ರೇಗಾ ಯೋಜನೆ ಸುಲಲಿತವಾಗಿ ಸಾಗುತ್ತಿತ್ತು. ಆದರೆ ಇದೀಗ ಸಂಪೂರ್ಣವಾಗಿ ಯೋಜನೆಯ ಜೊತೆಗೆ ಹೆಸರನ್ನು ಬದಲಿಸುವ ಮೂಲಕ ಗಾಂಧಿ ವಿರೋಧಿ ಕೇಂದ್ರ ಸರ್ಕಾರವೆಂದು ಸಾಬೀತಾಗಿದೆ.
ಯೋಜನೆ ಬದಲಿಸುವ ಸಂಬಂಧ ಸುರ್ಧೀಘ ಚರ್ಚೆಗಳು ನಡೆದಿಲ್ಲ. ಯಾವುದೇ ರಾಜ್ಯಕ್ಕೂ ಪತ್ರ ಬರೆದು ಅಭಿಪ್ರಾಯ ಕೇಳಿಲ್ಲ. ಗ್ರಾ.ಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿಲ್ಲ. ಜನರ, ಜನ ಪ್ರತಿನಿಧಿಗಳ ವಿಶ್ವಾಸಗಳಿಸದೇ, ಲೋಕಸಭೆಯಲ್ಲೂ ಚರ್ಚೆಗೆ ಅವಕಾಶ ನೀಡದೇ ರಾಷ್ಟ್ರೀಯ ಮಟ್ಟದ ಯೋಜನೆಯನ್ನು ಬದಲಾಯಿಸಲಾಗಿದೆ ಎಂದು ದೂರಿದರು.
ಶಾಸಕ ರಘುಮೂರ್ತಿ ಮಾತನಾಡಿ, ಕೇಂದ್ರದಿಂದ ಮಾಡಲು ಹೊರಟ ಬದಲಾವಣೆಯನ್ನು ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಸಿದೆ. ಈ ನಿಟ್ಟಿನಲ್ಲಿ ಮನ್ರೇಗಾ ಬಚಾವ್ ಹೆಸರಿನಲ್ಲಿ ದೊಡ್ಡ ಆಂದೋಲನ ಮಾಡುವ ತೀರ್ಮಾನ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಸರಕಾರ ಮೊದಲಿದ್ದ ಪರಿಸ್ಥಿತಿ ಮುಂದುವರೆಸುವಂತೆ ಒತ್ತಾಯಿಸಿ ಹಂತ ಹಂತವಾಗಿ ಹೋರಾಟ ಮಾಡಲಾಗುವುದು. ವಿಬಿ ಜಿ ಗ್ರಾಮ್ ಜಿ ಯೋಜನೆಯಲ್ಲಿ ಕೆಲಸವನ್ನು ಸೀಮಿತಗೊಳಿಸಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 19 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಕೇಂದ್ರ ಸರಕಾರ ನೀಡುವ ಅನುಮತಿಯಷ್ಟು ಮಾತ್ರ ಕೆಲಸ ಮಾಡಬೇಕಿದೆ. ಇದು ರಾಜ್ಯಕ್ಕೆ ನ್ಯಾಯ ಮಾಡುತ್ತಿದೆ. 100 ದಿನಗಳ ಕೆಲಸ ನೀಡುತ್ತಿದ್ದ ಯೋಜನೆಯನ್ನು 125 ನೀಡುವುದಾಗಿ ಹೇಳಲಾಗುತ್ತಿದೆ. ಆದರೆ ಸಾಕಷ್ಟು ಅನುದಾನ ನೀಡದ ಕಾರಣ ಈಗ 100 ದಿನಗಳೂ ಕೆಲಸ ದೊರೆಯದಂತಹ ಪರಿಸ್ಥಿತಿ ಎದುರಾಗಿದೆ.
ನೂತನ ಯೋಜನೆಯ ಮೂಲಕ ಹೊಸ ಸಮಸ್ಯೆಯನ್ನು ತರಲಾಗಿದೆ. ಸಾರ್ವಜನಿಕ ಉದ್ಯೋಗ ಹಕ್ಕನ್ನು ಕಸಿದಿರುವುದನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ವಿರೋಧಿಸುತ್ತದೆ ಮತ್ತು ಖಂಡಿಸುತ್ತದೆ. ಈ ನಿಟ್ಟಿನಲ್ಲಿ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಸಾರ್ವಜನಿಕ ಹಿತದೃಷ್ಠಿಯಿಂದ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಪಾದಯಾತ್ರೆ, ಸಭೆಗಳನ್ನು ನಡೆಸುವಂತೆ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾ ಅಧ್ಯಕ್ಷರುಗಳಿಗೆ ಪತ್ರ ಬರೆಯಲಾಗಿದ್ದು, ಜಿಲ್ಲಾ ಸಮಿತಿಯು ಹಂತ ಹಂತವಾಗಿ ಹೋರಾಟ ನಡೆಸಲು ಸಿದ್ದವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿ.ಇಡಿ ಫಲಿತಾಂಶ | 10ನೇ ರ್ಯಾಂಕ್ ಪಡೆದ ಎಚ್.ಆಶಾ
ಶಾಸಕ ಗೋವಿಂದಪ್ಪ ಮಾತನಾಡಿ, ಪರೋಕ್ಷವಾಗಿ ಮಹಾತ್ಮ ಗಾಂಧಿ ಅವರ ಹೆಸರನ್ನು ಯೋಜನೆಯಿಂದ ತೆಗೆಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರ ಪ್ರಜಾಪ್ರಭುತ್ವದ ಹೆಸರಿಗೆ ಮಾರಕವಾಗಿದೆ. ಕೃಷಿ ಕಾಯ್ದೆ ಬದಲಿಸಿದ್ದಕ್ಕೆ ಪಂಜಾಬ್, ಹರಿಯಾಣದಲ್ಲಿ ವರ್ಷಾನುಘಟ್ಟಲೆ ಪ್ರತಿಭಟನೆ ಮಾಡಲಾಗಿತ್ತು.
ಗ್ರಾಮೀಣ, ಎಸ್ಸಿ/ಎಸ್ಟಿ ಜನರಿಗೆ ಕನಿಷ್ಠ ವೇತನ ನೀಡುತ್ತಿದ್ದ ಕಾಯ್ದೆಯನ್ನು ಸಂಪೂರ್ಣ ನಿಲ್ಲಿಸಲು ಕೇಂದ್ರ ಸರಕಾರ ಹೊರಟಿತ್ತು, ವಿರೋಧದ ಹಿನ್ನಲೆ ಹಂತ ಹಂತವಾಗಿ ಬದಲಿಸುವ ಹುನ್ನಾರ ಹೂಡಿದೆ. ಗಾಂಧೀಜಿ ಹೆಸರು ಬದಲಿಸಿರುವುದು ಖಂಡನೀಯ. ರಾಷ್ಟ್ರದ 130 ಕೋಟಿಗೂ ಹೆಚ್ಚು ಜನರ ನಂಬಿಕೆಗೆ ಧಕ್ಕೆ ತಂದಿದ್ದು ಇದನ್ನು ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸಿ. ಹಿಂದಿನ ಕಾಯ್ದೆ ಜಾರಿಗೆ ತರಲು ಒತ್ತಾಯಿಸುವುದಾಗಿ ತಿಳಿಸಿದರು.
ರಾಜ್ಯಕ್ಕೆ 2019 ರಿಂದ ಇಲ್ಲಿವರಗೆ 1,26 ಸಾವಿರ ಕೋಟಿ ಕೇಂದ್ರ ಸರಕಾರದಿಂದ ಅನುದಾನ ಬರಬೇಕಾಗಿದೆ. ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ಪಡೆಯದ ಕೆಲಸವನ್ನು ಮಾಡುತ್ತಿರುವ ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ಕಳೆದ ಬಾರಿ ರಾಜ್ಯ ಸರಕಾರವು 20 ಕೋಟಿ ರೂಗಳ ಮಾನವ ದಿನಗಳನ್ನು ಕ್ರಿಯಾಯೋಜನೆ ನೀಡಿದ್ದು, ಅದನ್ನು 12 ಕೋಟಿ ರೂಗಳಿಗೆ ಅನುಮತಿ ನೀಡಲಾಗಿದೆ. ಈ ಬಾರಿ ಅದನ್ನೇ ಮುಂದುವರಿಸಲು ಸೂಚಿಸಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕಬೀರಾನಂದ ಮಠದ ಶಿವನಾಮ ಸಪ್ತಾಹಕ್ಕೆ ಕಾರ್ಯಾಧ್ಯಕ್ಷರಾಗಿ ಭಾಸ್ಕರ್ ಆಯ್ಕೆ
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಅದಿ ಜಾಂಭವ ಅಭೀವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೈಲಾರಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಗೀತಾ ನಂದಿನಿ ಗೌಡ, ಮನಿರಾ ಮುಕಾಂದರ್, ಅಲ್ಲಾ ಭಕ್ಷಿ, ಚೋಟು, ಮರುಳಾರಾಧ್ಯ, ಲಕ್ಷೀಕಾಂತ, ಮುದಸಿರ್, ಜಯ್ಯಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
