By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಜೈನ್ ಸಮುದಾಯದ ಭವನದಲ್ಲಿ ಮಾತೃ ವಂದನಾ ಕಾರ್ಯಕ್ರಮ | ರಾಜ್ಯ ಮುಖಂಡ ಕೀಶೋರ್‌ಲಾಲ್‌ ವಾಲಾ ಭಾಗೀ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಜೈನ್ ಸಮುದಾಯದ ಭವನದಲ್ಲಿ ಮಾತೃ ವಂದನಾ ಕಾರ್ಯಕ್ರಮ | ರಾಜ್ಯ ಮುಖಂಡ ಕೀಶೋರ್‌ಲಾಲ್‌ ವಾಲಾ ಭಾಗೀ

ಮುಖ್ಯ ಸುದ್ದಿ

ಜೈನ್ ಸಮುದಾಯದ ಭವನದಲ್ಲಿ ಮಾತೃ ವಂದನಾ ಕಾರ್ಯಕ್ರಮ | ರಾಜ್ಯ ಮುಖಂಡ ಕೀಶೋರ್‌ಲಾಲ್‌ ವಾಲಾ ಭಾಗೀ

News Desk Chitradurga News
Last updated: 3 June 2025 18:49
News Desk Chitradurga News
2 weeks ago
Share
ಜೈನ್ ಸಮುದಾಯದ ಭವನದಲ್ಲಿ ಮಾತೃ ವಂದನಾ ಕಾರ್ಯಕ್ರಮ | ರಾಜ್ಯ ಮುಖಂಡ ಕೀಶೋರ್‌ಲಾಲ್‌ ವಾಲಾ ಭಾಗೀ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 03 JUNE 2025

ಚಿತ್ರದುರ್ಗ: ಮನೆಯಲ್ಲಿ ಮಕ್ಕಳಿಗೆ ತಾಯಿಯ ಪ್ರೀತಿಯೇ ಮೊದಲು, ನಂತರ ತಂದೆಯ ಪ್ರೀತಿ. ತಂದೆ ತಾಯಿ ಇಬ್ಬರ ಪ್ರೀತಿಯಲ್ಲಿ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಭಾರತೀಯ ಜೈನ್ ಸಂಘದ ರಾಜ್ಯ ಮುಖಂಡರಾದ ಕೀಶೋರ್‌ಲಾಲ್‌ ವಾಲಾ ತಿಳಿಸಿದರು.

Also Read: ಸೌಟ್ಸ್ ಮತು ಗೈಡ್ಸ್ ನಾ ರಾಜ್ಯ ಪುರಸ್ಕಾರ ಪ್ರಶಸ್ತಿ | ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ವಿತರಣೆ

ನಗರದ ಭಾರತೀಯ ಜೈನ್ ಸಂಘದ ಚಿತ್ರದುರ್ಗ ಘಟಕದಿಂದ ಜೈನ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಾತೃ ವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಮನೆಗಳಲ್ಲಿ ಅಜ್ಜ-ಅಜ್ಜಿ ಇದ್ದವರೇ ಭಾಗ್ಯಶಾಲಿಗಳಾಗಿದ್ದಾರೆ. ಮನೆಯಲ್ಲಿ ಎಲ್ಲರ ಪ್ರೀತಿ, ವಿಶ್ವಾಸವನ್ನುಗಳಿಸುವ ಮೂಲಕ ಮುಂದಿನ ಪ್ರಜೆಗಳಾಗಿ ಬೆಳೆಯಬೇಕಿದೆ. ಸಾಕಷ್ಟು ಮಕ್ಕಳಿಗೆ ತಂದೆ-ತಾಯಿಯ ಪ್ರೀತಿ ಸಿಗದೇ ಅನಾಥರಾಗಿದ್ದಾರೆ. ಈ ಸಮಯದಲ್ಲಿ ತಂದೆ-ತಾಯಿ ಇದ್ದವರೇ ಪುಣ್ಯವಂತರು ಅನ್ನಿಸುತ್ತದೆ ಎಂದರು.

ಭಾರತ ದೇಶವನ್ನು ಭಾರತ ಮಾತೆ ಎನ್ನುವ ಪರಿಪಾಠ ಇದೆ. ಅದೇ ರೀತಿ ಮನೆಯಲ್ಲಿ ಮಕ್ಕಳ ಪೋಷಣೆಯಲ್ಲೂ ಮಾತೆಯ ಪಾತ್ರ ದೊಡ್ಡದಾಗಿದೆ. ಇದರೊಟ್ಟಿಗೆ ಕುಟುಂಬ ನಿರ್ವಹಣೆಯಲ್ಲೂ ತಾಯಿಯ ಪಾತ್ರ ಹಿರಿದು. ತಾಯಿ ಇಲ್ಲದ ಕುಟುಂಬದ ನಿರ್ವಹಣೆ ದುಸ್ಸಾಹಸವಾಗುತ್ತದೆ ಎಂದು ತಿಳಿಸಿದರು.

Also Read: RCB ಕಪ್‌ ಗೆಲ್ಲಲಿ | ಬಂಗಾರದ IPL CUP ತಯಾರಿಸಿದ ಹೊಸದುರ್ಗದ ಯುವಕರು

ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಭಾರತೀಯ ಸೇನೆಗೆ ಕಳುಹಿಸುವ ಮೂಲಕ ತ್ಯಾಗ ಮಾಡಿದ್ದಾರೆ. ಅನೇಕ ಸೈನಿಕರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಮಕ್ಕಳನ್ನು ಸೇನೆಗೆ ಕಳುಹಿಸಿದ ಪೋಷಕರು ನಿಜಕ್ಕೂ ಮಹಾತ್ಮರು ಎಂದು ಬಣ್ಣಿಸಿದರು.

ಭಾರತೀಯ ಜೈನ್ ಸಂಘದ ಕಾರ್ಯದರ್ಶಿ ಪ್ರಕಾಶ್ ಗುಲೇಚ ಮಾತನಾಡಿ, ಜೈನ್ ಸಂಘದವತಿಯಿಂದ 18 ರಿಂದ 25 ವರ್ಷದ ಒಳಗಿನ ಹೆಣ್ಣು ಮಕ್ಕಳಿಗಾಗಿ ಸ್ಮಾರ್ಟ್‌ಗರ್ಲ್ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸುವ ಮೂಲಕ ಅವರಲ್ಲಿ ಧೈರ್ಯ, ಮನೋವಿಕಾಸ, ನಾಯಕತ್ವ ಗುಣ, ಕಷ್ಟ ಕಾಲದಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಕಲೆ, ಸಮಾಜದಲ್ಲಿ ಬರುವಂತ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುವ ಬಗ್ಗೆ ತಿಳಿಸಿಕೊಡಲಾಗುವುದು.

ಚಿತ್ರದುರ್ಗದಲ್ಲಿ ಜೂ.21-22ರಂದು ಈ ಕಾರ್ಯಕ್ರಮ ನಡೆಯಲಿದೆ ಇದರ ನೊಂದಾಣಿ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

ಭಾರತೀಯ ಜೈನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಕ್ರಾಂತ್‍ಜೈನ್ ಮಾತನಾಡಿದರು.

ಸಮಾರಂಭದಲ್ಲಿ ಟ್ರಸ್ಟಿಗಳಾದ ವಸ್ತಿಮಲ್‍ಜೀ,ಪುಷಬ್ ರಾಜ್ ಭಾಘ್ನಾ, ವಿಪುಲ್ ಜೈನ್, ವಿನೋದ್, ಭಾರತೀಯ ಜೈನ್ ಸಂಘದ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಷಾ ಭಾಗವಹಿಸಿ ದ್ದರು.

ರೇಖಾ, ರಿಂಕಲ್, ಸರೋಜ್ ಪ್ರಾರ್ಥನೆ ಮಾಡಿದರು. ಸವಿತಾ ಹಾಗೂ ಅನಿತಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿತ್ರದುರ್ಗದ ಭಗತ್‌ ಸಿಂಗ್‌ ಅವರ ತಂದೆ ತಿಪ್ಪೇಸ್ವಾಮಿ, ತಾಯಿ ಕಮಲಮ್ಮ, ಮತ್ತೋರ್ವ ಸೇನಾನಿ ರಮೇಶ ಅವರ ಪೋಷಕರಾದ ಶಿವಮ್ಮ ಜಯಪ್ಪ, ಸೈನಿಕ ಗುರುಮೂರ್ತಿ ಪೋಷಕರಾದ ರತ್ನಮ್ಮ ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaChitradurga newsChitradurga UpdatesJain CommunityKannada Latest NewsKannada NewsKishorelal WalaMatru Vandanaಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಕೀಶೋರ್‌ಲಾಲ್‌ ವಾಲಾಚಿತ್ರದುರ್ಗಚಿತ್ರದುರ್ಗ ನ್ಯೂಸ್ಜೈನ್ ಸಮುದಾಯಮಾತೃ ವಂದನಾ
Share This Article
Facebook Email Print
Previous Article ಸೌಟ್ಸ್ ಮತು ಗೈಡ್ಸ್ ನಾ ರಾಜ್ಯ ಪುರಸ್ಕಾರ ಪ್ರಶಸ್ತಿ | ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ವಿತರಣೆ
Next Article ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ಸಮಿತಿ ಅಧ್ಯಕ್ಷರಾಗಿ ಮಾದಾರ ಚನ್ನಯ್ಯ ಶ್ರೀ ಆಯ್ಕೆ
Leave a Comment

Leave a Reply Cancel reply

Your email address will not be published. Required fields are marked *

arecanut price list
ಅಡಿಕೆ ಧಾರಣೆ | ಜೂನ್‌ 16 | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್‌
ಅಡಕೆ ಧಾರಣೆ
UPSC ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಪಾಪೇಶ್ ಅವಿರೋಧ ಆಯ್ಕೆ
ಮುಖ್ಯ ಸುದ್ದಿ
ಖಾಸಗಿ ಕಂಪನಿಗಳಲ್ಲಿ ಉದ್ಯೋಗ | ಜೂ.19 ರಂದು ನೇರ ನೇಮಕಾತಿ ಸಂದರ್ಶನ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?

Not a member? Sign Up