
CHITRADURGA NEWS | 02 JUNE 2025
ಚಿತ್ರದುರ್ಗ: ಜೆಇಇ ಅಡ್ವಾನ್ಸ್ -2025ರ ಫಲಿತಾಂಶದಲ್ಲಿ 34ನೇ ರ್ಯಾಂಕ್ ಪಡೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಎಸ್ ಆರ್ ಎಸ್ ಕಾಲೇಜಿನ ವಿದ್ಯಾರ್ಥಿ ಕೆ.ಪಿ.ಪೂಜಿತ್ ಕುಲಾಲ್ ಅದ್ವಿತೀಯ ಸಾಧನೆ ಮಾಡಿದ್ದಾರೆ.
Also Read: ವಿವಿ ಸಾಗರ ಹಿನ್ನೀರಿನಲ್ಲಿ ಜಮೀನು ಮುಳುಗಡೆ | ಅಹವಾಲು ಆಲಿಸಲು ಬರುತ್ತಿದೆ ಅಧಿಕಾರಿಗಳ ತಂಡ


ತ್ರಿವೇಣಿ- 502, ಆನಂದ್ ಎನ್ ವೈ-559, ಹರ್ಷಿತ್ರಾಜ್ ಎನ್ ವಿ-1083, ರಕ್ಷಿತಾ ಟಿ ಎಂ-1947 ಹಾಗೂ ವಿಕಾಸ್ ಜಿ ನಾಯಕ್-3748 ನೇ ರ್ಯಾಂಕ್ ಪಡೆದಿದ್ದಾರೆ.
40 ವಿದ್ಯಾರ್ಥಿಗಳಲ್ಲಿ, 21 ವಿದ್ಯಾರ್ಥಿಗಳು IITಗೆ ಪ್ರವೇಶಾತಿ ಪಡೆಯುತ್ತಿರುವುದು ಐತಿಹಾಸಿಕ ದಾಖಲೆ.
ರಾಷ್ಟ್ರ ಮಟ್ಟದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ಗಳೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನು ಸರಿಗಟ್ಟಿ, ಐಐಟಿ ಹಾಗೂ ಐಐಐಟಿ ಗಳಿಗೆ ಅರ್ಹತೆ ಗಳಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಅತೀ ಹೆಚ್ಚು ರ್ಯಾಂಕ್ಗಳನ್ನು ದಾಖಲಿಸಿದ ಮಧ್ಯ ಕರ್ನಾಟಕದ ಏಕೈಕ ಕಾಲೇಜು ಎಸ್ ಆರ್ ಎಸ್ ಪಿಯು ಕಾಲೇಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Also Read: ಪದವಿ ಪೂರ್ವ ಶಿಕ್ಷಣ ಇಲಾಖೆ ನೂತನ ಉಪ ನಿರ್ದೇಶಕರಾಗಿ ಕೆ.ತಿಮ್ಮಯ್ಯ ಅಧಿಕಾರಿ ಸ್ವೀಕಾರ
ಅತ್ಯುತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಅಭಿನಂದಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
