By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಅಂಕಣಕಾರರಾಗಲು ನಡೆಸುವ ಸಿದ್ದತೆ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ
    ಕಥೆ, ಅಂಕಣ ಬರವಣಿಗೆ ಮಾಡುವುದು ಹೇಗೆ ಗೊತ್ತಾ | ಎ.ಆರ್.ಮಣಿಕಾಂತ್‌ ಹೇಳಿದ್ದಾರೆ ಓದಿ
    1 day ago
    H. Anjaneya
    ಸ್ವಯಂಕೃತ ಅಪರಾಧದಿಂದ‌ ಚುನಾವಣೆ ಸೋತಿದ್ದೇನೆ | ಎಚ್.ಆಂಜನೇಯ
    1 day ago
    ನಿರ್ದೆಶಕರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
    ಚಿತ್ರದುರ್ಗ ತಾಲೂಕಿನ ಶಾಲೆಗಳ ಅಭಿವೃದ್ಧಿಗೆ 44 ಕೋಟಿ ಪ್ರಸ್ತಾವನೆ | ಶಾಸಕ ವೀರೇಂದ್ರ ಪಪ್ಪಿ 
    1 day ago
    ಎನ್.ಶಿವಕುಮಾರ್
    ಕರ್ನಾಟಕ ರಾಜ್ಯ ವಕೀಲರ ಪರಿಷತ್ ಗೆ ಎನ್.ಶಿವಕುಮಾರ್ ಆಯ್ಕೆ
    1 day ago
    ಬ್ರಾಂಡ್‌ ಚಿತ್ರದುರ್ಗ | ಹಿಂದೂ ಎಕನಾಮಿಕ್‌ ಫೋರಂ ಆಯೋಜನೆ
    ಬ್ರಾಂಡ್‌ ಚಿತ್ರದುರ್ಗ | ಹಿಂದೂ ಎಕನಾಮಿಕ್‌ ಫೋರಂ ಆಯೋಜನೆ : ಎಂಎಲ್ಸಿ ಕೆ.ಎಸ್‌.ನವೀನ್‌ ಭಾಗೀ
    2 days ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    Hosadurga police work
    INSTAGRAM, FECEBOOK ಪರಿಚಯ | ಲೈಂಗಿಕ ದುರ್ಬಳಕೆ ವಂಚನೆ ಮಾಡುತ್ತಿದ್ದ ಆರೋಪಿ ಬಂಧನ | ಚಿನ್ನಾಭರಣ ವಶಕ್ಕೆ
    3 days ago
    ಚಿತ್ರದುರ್ಗ ಅಪರಾಧ
    ಜಾನುಕೊಂಡ ಬಳಿ ಭೀಕರ ಅಪಘಾತ | ಇಬ್ಬರು ಕುರಿಗಾಯಿಗಳು, 14 ಕುರಿ ಧಾರುಣ ಸಾವು
    1 week ago
    Accident near molakalmuru
    ಮೊಳಕಾಲ್ಮೂರು ಬಳಿ ಮತ್ತೊಂದು ಅಪಘಾತ | ಚಳ್ಳಕೆರೆಯ 5 ಜನ ಸಾವು | ಒಂದೇ ದಿನದ ಅಂತರದಲ್ಲಿ ಜಿಲ್ಲೆಯಲ್ಲಿ ಹತ್ತು ಸಾವು
    2 weeks ago
    ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ | 5 ಜನರ ದುರ್ಮರಣ
    3 weeks ago
    Accident between bike and car
    ಬೈಕ್‌ – ಕಾರು ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರು ಮೃತ
    3 weeks ago
  • ತಾಲೂಕು
    ತಾಲೂಕುShow More
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    4 days ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 weeks ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 weeks ago
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    3 weeks ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    7 days ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    1 week ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    1 week ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    2 weeks ago
    ARECANUT RATE
    ಅಡಿಕೆ ಧಾರಣೆ | 4 ಜೂನ್‌ | ಇಂದಿನ ರಾಶಿ, ಚಾಲಿ, ಕೆಂಪಡಕೆ ರೇಟ್‌
    2 weeks ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 15 | ವ್ಯವಹಾರದಲ್ಲಿ ಆರ್ಥಿಕ ಪ್ರಗತಿ, ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು
    11 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 14 | ವೃತ್ತಿ ಮತ್ತು ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ, ದೂರ ಪ್ರಯಾಣ ಬೇಡ
    1 day ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 13 | ಕೈಗೊಂಡ ಕೆಲಸಗಳಲ್ಲಿ ಅಡಚಣೆಗಳು, ಅರೋಗ್ಯದಲ್ಲಿ ಎಚ್ಚರ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 12 | ಕೈಗೊಂಡ ಕೆಲಸದಲ್ಲಿ ವಿಳಂಬ, ಆರ್ಥಿಕ ಸಂಕಷ್ಟ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 11 | ಉದ್ಯೋಗದ ವಾತಾವರಣ ಅನುಕೂಲಕರ, ಹೊಸ ವಾಹನ ಖರೀದಿ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 15 | ಮೆಕ್ಕೆಜೋಳ, ಶೇಂಗಾ ರೇಟ್….
    2 hours ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 12 | ರಾಗಿ, ಮೆಕ್ಕೆಜೋಳ ರೇಟ್….
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 11 | ಹತ್ತಿ ರೇಟ್ ಎಷ್ಟಿದೆ?
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 10 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
    5 days ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಆರೋಗ್ಯ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ನೂತನ ಆರೋಗ್ಯ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ 
    1 week ago
    ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ
    ಮೂರ್ನಾಲ್ಕು ದಿನಗಳಲ್ಲೇ ತಾಳಿಕಟ್ಟೆ ಕೆರೆಗೆ‌ ನೀರು | ಶಾಸಕ‌ ಎಂ.ಚಂದ್ರಪ್ಪ
    2 weeks ago
    ಪೂರ್ವಭಾವಿ ಸಭೆ
    ಹೊಳಲ್ಕೆರೆ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರ | ಶಾಸಕ ಎಂ.ಚಂದ್ರಪ್ಪ 
    1 month ago
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    2 months ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 months ago
  • ಹಿರಿಯೂರು
    ಹಿರಿಯೂರುShow More
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    3 weeks ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    2 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    4 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    4 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    4 months ago
  • ಹೊಸದುರ್ಗ
    ಹೊಸದುರ್ಗShow More
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    4 days ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 weeks ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 weeks ago
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    3 weeks ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    3 weeks ago
  • Life Style
    Life StyleShow More
    eyes
    ಕಣ್ಣುಗಳಲ್ಲಿನ ಈ ಬದಲಾವಣೆಗಳು ರೋಗಗಳನ್ನು ಸೂಚಿಸುತ್ತವೆಯಂತೆ
    10 hours ago
    care of your skin during pregnancy
    ಗರ್ಭಾವಸ್ಥೆಯಲ್ಲಿ ಚರ್ಮದ ಆರೈಕೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
    11 hours ago
    teeth
    ವೃದ್ಧರಾದ ಮೇಲೂ ನಿಮ್ಮ ಹಲ್ಲುಗಳು ಗಟ್ಟಿಯಾಗಿರಲು ಈ ಸಲಹೆ ಅನುಸರಿಸಿ
    1 day ago
    heart disease
    ದೇಹದಲ್ಲಿನ ಈ ಬದಲಾವಣೆಗಳು ಹೃದಯ ಕಾಯಿಲೆಯ ಲಕ್ಷಣವಾಗಿದೆ
    1 day ago
    pregnant women to eat pumpkin seeds
    ಗರ್ಭಿಣಿಯರು ಕುಂಬಳಕಾಯಿ ಬೀಜಗಳನ್ನು ತಿನ್ನುವುದು ಸುರಕ್ಷಿತವೇ? 
    2 days ago
Reading: ಹುಣಸೆಹುಳಿ ಸಾರು, ಅನ್ನದ ನೇವೈದ್ಯಕ್ಕೆ ಒಲಿಯುವ ನಾಗಪ್ಪ: ದೊಡ್ಡಚೆಲ್ಲೂರು ಕಮರದ ಕಾಡಿನಲ್ಲಿ ನೆಲೆ ವಿಶಿಷ್ಟ ಆಚರಣೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಚಳ್ಳಕೆರೆ

ಹುಣಸೆಹುಳಿ ಸಾರು, ಅನ್ನದ ನೇವೈದ್ಯಕ್ಕೆ ಒಲಿಯುವ ನಾಗಪ್ಪ: ದೊಡ್ಡಚೆಲ್ಲೂರು ಕಮರದ ಕಾಡಿನಲ್ಲಿ ನೆಲೆ ವಿಶಿಷ್ಟ ಆಚರಣೆ

chitradurganews.com
Last updated: 29 August 2023 04:39
chitradurganews.com
3 years ago
Share
Hunsehuli Nagappa, Doddachellur, Kamarada Kadu, Nagara Panchami
SHARE

ಚಿತ್ರದುರ್ಗ ನ್ಯೂಸ್: ನಾಗರಪಂಚಮಿ ಅಂದಾಕ್ಷಣ ನಮಗೆಲ್ಲಾ ಸಾಮಾನ್ಯವಾಗಿ ನಾಗರ ಕಲ್ಲುಗಳಿಗೆ ಹಾಲೆರೆಯುವ ದೃಶ್ಯ ತಕ್ಷಣಕ್ಕೆ ಕಣ್ಣ ಮುಂದೆ ಹಾದು ಹೋಗುತ್ತದೆ. ಆದರೆ, ಬುಡಕಟ್ಟು ಪರಂಪರೆಗಳ ತೊಟ್ಟಿಲು ಎಂದೇ ಹೆಸರಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ವಿಶಿಷ್ಟ ನಾಗರ ಪಂಚಮಿ ಆಚರಣೆಯಿರುವುದನ್ನು ಚಿತ್ರದುರ್ಗ ನ್ಯೂಸ್ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದೆ.

Contents
ಹೇಗಿರುತ್ತದೆ ಪೂಜೆ-ಪುನಸ್ಕಾರ?ಕರಿಕಂಬಳಿಯಲ್ಲಿದ್ದ ನಾಗರ ಕಲ್ಲುಗಳು ಮಾಯವಾಗಿದ್ದವು

ಇಲ್ಲಿ ನಾಗರ ಪಂಚಮಿ ಆಚರಣೆಗೆ ಹಾಲು ಬೇಕಾಗಿಲ್ಲ. ಬದಲಾಗಿ ಹುಣಸೆ ಹುಳಿಯಿಂದ ತಯಾರು ಮಾಡಿದ ಸಾರು ಹಾಗೂ ಅನ್ನದ ನೈವೇಧ್ಯೆ ಸಾಕು ಎನ್ನುತ್ತಾನೆ ನಾಗಪ್ಪ ದೇವರು.

Hunsehuli Nagappa, Doddachellur, Kamarada Kadu, Nagara Panchami

ಹೌದು ಇಂಥದ್ದೊAದು ವಿಶಿಷ್ಟ ಆಚರಣೆ ರೂಢಿಸಿಕೊಂಡಿರುವ ಬಂದಿರುವುದು ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ವಾಸಿಸುವ ಕಾಡುಗೊಲ್ಲ ಸಮುದಾಯದ ಮಳ್ಳಿಗನವರ್ ಬೆಡಗಿನವರು.

ಈ ಬೆಡಗಿನವರ ನಾಗರ ಪಂಚಮಿ ಪ್ರತಿ ವರ್ಷ ಶ್ರಾವಣದ ಎರಡನೇ ಸೋಮವಾರ. ಚಳ್ಳಕೆರೆಯಿಂದ ಬರೋಬ್ಬರಿ 37 ಕಿ.ಮೀ ದೂರದಲ್ಲಿರುವ ಪರಶುರಾಮಪುರದ ದೊಡ್ಡಚೆಲ್ಲೂರು ಕಾವಲಿನ ಕಮರದ ಕಾಡಿನ ನಡುವೆ ನೆಲೆಯಾಗಿರುವ ನಾಗಪ್ಪನಿಗೆ ಈ ವಿಶಿಷ್ಟ ನೈವೇದ್ಯೆ ಸಲ್ಲಿಸುವ ಸಂಪ್ರದಾಯ ಪಾಲಿಸಿಕೊಂಡಿದ್ದಾರೆ.

Hunsehuli Nagappa, Doddachellur, Kamarada Kadu, Nagara Panchami

ಚಳ್ಳಕೆರೆಯ ಕಾಟಪ್ಪನಹಟ್ಟಿ ಮತ್ತಿತರೆಡೆ ಕಾಡುಗೊಲ್ಲ ಸಮುದಾಯದ ಮಳ್ಳಿಗನವರ್ ಬೆಡಗಿನ ಸುಮಾರು 50 ಕುಟುಂಬಗಳು ದೊಡ್ಡಚೆಲ್ಲೂರು ಕಾವಲು ನಾಗಪ್ಪನ ಆರಾಧಕರಾಗಿದ್ದಾರೆ. ಪ್ರತಿ ವರ್ಷದ ಎರಡನೇ ಶ್ರವಾಣ ಸೋಮವಾರ ಮನೆಯನ್ನೆಲ್ಲಾ ಶುದ್ಧೀಕರಿಸಿಕೊಂಡು ಎಲ್ಲರೂ ಬೆಳಗ್ಗೆಯೇ ದೊಡ್ಡಚೆಲ್ಲೂರಿಗೆ ಪಾದಯಾತ್ರೆ ಮಾಡುತ್ತಾರೆ. ಅಲ್ಲಿ ನಾಗರ ಕಲ್ಲುಗಳಿಗೆ ಕಮರದ ಸೊಪ್ಪು, ಹೂವು ಇತ್ಯಾದಿಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಸಂಜೆ ಹೊತ್ತಿಗೆ ಪೂಜೆ ಸಲ್ಲಿಸುತ್ತಾರೆ. ಪೂಜೆ ಮುಗಿಯುವವರೆಗೆ ಬಹುತೇಕ ಎಲ್ಲರೂ ಉಪವಾಸ ವ್ರತ ನಡೆಸುವುದು ವಿಶೇಷ. ಒಂದು ವೇಳೆ ಅಷ್ಟು ದೂರ ಪಾದಯಾತ್ರೆ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲೇ ಇದ್ದರೂ ಇಡೀ ದಿನ ವ್ರತಾಚರಣೆ ಮಾಡಿ ಸಂಜೆಯ ನಂತರ ವ್ರತ ಕೈ ಬಿಡುವುದು ಪದ್ಧತಿ.

ಇಷ್ಟಾರ್ಥ ನೆರವೇರಿಸುವ ನಾಗಪ್ಪ ಎನ್ನುವ ನಂಬಿಕೆಯೂ ಇಲ್ಲಿಗೆ ನಡೆದುಕೊಳ್ಳುವವರಲ್ಲಿದೆ. ಕಂಕಣ ಭಾಗ್ಯ, ಸಂತಾನ, ಉದ್ಯೋಗ, ವ್ಯಾಪಾರ ಹೀಗೆ ಹಲವು ಬೇಡಿಕೆಗಳಿಗಾಗಿ ಈ ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ತಾವು ಬೇಡಿಕೊಂಡದ್ದು ಈಡೇರಿದ ನಂತರ ಬೆಳ್ಳಿಯ ಆಭರಣ, ಅನ್ನ ಸಂತರ್ಪಣೆ ಇತ್ಯಾದಿಗಳನ್ನು ಮಾಡಲಾಗುತ್ತದೆ. ದೊಡ್ಡಚೆಲ್ಲೂರು ಕಾವಲಿನಲ್ಲಿ ಮಕ್ಕಳ ಮುಡಿ ಅರ್ಪಿಸುವ ಪದ್ಧತಿಯೂ ಇದೆ.

ಹೇಗಿರುತ್ತದೆ ಪೂಜೆ-ಪುನಸ್ಕಾರ?

Hunsehuli Nagappa, Doddachellur, Kamarada Kadu, Nagara Panchami

ಶ್ರಾವಣದ ಎರಡನೇ ಸೋಮವಾರ ಬೆಳ್ಳಗೆಯೇ ಶ್ರೀ ರಂಗಸ್ವಾಮಿ ಮತ್ತು ಯತ್ತಪ್ಪ ಸ್ವಾಮಿ ದೇವಾಲಯದಿಂದ ಹೊರಡುವ ಮಳ್ಳಿಗನವರ್ ಬೆಡಗಿನ ಸುಮಾರು 50 ಕುಟುಂಬಗಳು ದೊಡ್ಡಚೆಲ್ಲೂರು ಕಾವಲನ್ನು ಪಾದಯಾತ್ರೆ ಮೂಲಕ ತಲುಪಿ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಾರೆ.

ಪೂಜೆ ಮುಗಿದ ನಂತರ ರಾತ್ರಿ ಚೆಲ್ಲೂರು ಗೇಟ್ ಬಳಿಯ ನಿಂಗಜ್ಜರ ಕಪಲೆಯಲ್ಲಿ ದಾಸಪ್ಪ, ಪೂಜಾರಿಗಳು ತಂಗುತ್ತಾರೆ. ಮಂಗಳವಾರ ಮುಂಜಾನೆ ಅಲ್ಲಿಂದ ಹೊರಟು ದೊಡ್ಡರಿ ಬಳಿ ಎದರು ಪರವು ನಡೆಸಿ ಭಕ್ತಿ ಸಮರ್ಪಣೆ ಮಾಡುತ್ತಾರೆ. ಇಲ್ಲಿ ಮತ್ತೆ ಅನ್ನ ಮತ್ತು ಸೋಪ್ಪಿನ ಸಾಂಬರ್ ನೈವೇದ್ಯ ಮಾಡಿ ಸಂಜೆ ವೇಳೆಗೆ ತಮ್ಮ ಗೊಲ್ಲರಹಟ್ಟಿಗೆ ಆಗಮಿಸುತ್ತಾರೆ.

ಭಾರತೀಯ ಮಹಿಳಾ ಅಂಧರ ಕ್ರಿಕೇಟ್ ತಂಡಕ್ಕೆ ನಾಯಕಿಯಾದಳು ಹಿರಿಯೂರಿನ ಮಗಳು ವರ್ಷಾ

ಆಗಸ್ಟ್ 28 ಎರಡನೇ ಶ್ರಾವಣ ಸೋಮವಾರವಾದ್ದರಿಂದ ನಾಗರ ಕಲ್ಲುಗಳಿಗೆ ಹುಣಸೆ ಹುಳಿಯ ಸಾರು, ಅನ್ನದ ನೈವೇದ್ಯೆ ಅರ್ಪಿಸುವ ಆಚರಣೆ ಶ್ರದ್ಧಾ ಭಕ್ತಿಯಿಂದ ಜರುಗಿತು. ಈ ಆಚರಣೆಗೆ ಮಳ್ಳಿಗನರ್ ವಂಶಸ್ಥರು ಮಾತ್ರವಲ್ಲದೇ ನೆಂಟರು, ಹೊಸದಾಗಿ ಮದುವೆಯಾದವರು ಕೂಡಾ ಬಂದು ಭಾಗವಹಿಸಿದ್ದರು. ಗೌಡರ ಚಿಕ್ಕಣ್ಣ, ರಾಜಣ್ಣ, ರಂಗನಾಥ, ಅಜ್ಜಯ್ಯ, ಮಂಜುನಾಥ, ಅಜ್ಜಯ್ಯ, ವೀರಭದ್ರಪ್ಪ, ತಿಪ್ಪೇಸ್ವಾಮಿ, ಪೂಜಾರಿ ಸುರೇಶ, ದಾಸಪ್ಪರಾದ ರಂಗಸ್ವಾಮಿ, ತಿಪ್ಪೇಸ್ವಾಮಿ ನೂರಾರು ಭಕ್ತರು ಸೇರಿ ಈ ವರ್ಷದ ಪೂಜೆಯನ್ನು ಸಂಭ್ರಮದಿAದ ನೆರವೇರಿಸಿದರು.

ಕರಿಕಂಬಳಿಯಲ್ಲಿದ್ದ ನಾಗರ ಕಲ್ಲುಗಳು ಮಾಯವಾಗಿದ್ದವು

ಈ ವಿಶಿಷ್ಟ ಆಚರಣೆಗೆ ಸುಮಾರು ಏಳೆಂಟು ತಲೆಮರುಗಳ ಹಿನ್ನೆಲೆಯಿದೆ. ಪ್ರತಿ ವರ್ಷ ಮಕ್ಕಳು, ವೃದ್ಧರನ್ನು ಕರೆದುಕೊಂಡು ಇಷ್ಟು ದೂರ ನಡೆದು ಬರುವುದು ಕಷ್ಟ ಎನ್ನುವ ಕಾರಣಕ್ಕೆ ಹಿಂದೊಮ್ಮೆ ನಮ್ಮ ಹಿರಿಯರು ದೊಡ್ಡಚೆಲ್ಲೂರಿನಲ್ಲಿರುವ ನಾಗಪ್ಪನ ವಿಗ್ರಹಗಳನ್ನು ಕರಿ ಕಂಬಳಿಯಲ್ಲಿಟ್ಟುಕೊAಡು ಚಳ್ಳಕೆರೆ ನಗರದ ಬಳಿಯೇ ಪ್ರತಿಷ್ಠಾಪನೆ ಮಾಡಲು ಮುಂದಾಗುತ್ತಾರೆ. ಹೀಗೆ ನಡೆದು ಬರುವಾಗ ರಾತ್ರಿಯಾದ ಕಾರಣ ನಾಗರ ಕಲ್ಲುಗಳ ಸಮೇತ ವೇದಾವತಿ ನದಿಯಲ್ಲಿ ರಾತ್ರಿ ಬೀಡು ಬಿಡುತ್ತಾರೆ. ಬೆಳಗ್ಗೆ ಎದ್ದು ಹೊರಡಲು ಅಣಿಯಾದಾಗ ಕಂಬಳಿಯಲ್ಲಿ ನಾಗರ ಕಲ್ಲುಗಳೇ ಇರಲಿಲ್ಲ. ಮತ್ತೆ ದೊಡ್ಡ ಚೆಲ್ಲೂರು ಕಾವಲಿಗೆ ಹೋಗಿ ನೋಡಿದಾಗ ಅದೇ ನಾಗರ ಕಲ್ಲುಗಳು ಅಲ್ಲಿ ಪ್ರತಿಷ್ಠಾಪನೆಯಾಗಿದ್ದವು. ಈ ವೇಳೆ ತಮ್ಮ ತಪ್ಪಿನ ಅರಿವಾಗಿ, ಎಷ್ಟೇ ಕಷ್ಟವಾದರೂ ಪ್ರತಿ ವರ್ಷ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತೇವೆ ಎಂದು ದೇವರಲ್ಲಿ ಕ್ಷಮೆ ಕೇಳಿದ್ದರು ಎನ್ನುವುದನ್ನು ಮಳ್ಳಿಗನರ್ ವಂಶದ ರಂಗಸ್ವಾಮಿ ಸ್ಮರಿಸುತ್ತಾರೆ.

 

(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)

(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ  https://www.facebook.com/chitradurganews?mibextid=ZbWKwL)

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Challakerechallakere NewsDoddachellurHunsehuli NagappaKamarada KaduNagara Panchamiಕಮರದ ಕಾಡುಚಳ್ಳಕೆರೆದೊಡ್ಡಚೆಲ್ಲೂರುನಾಗರ ಪಂಚಮಿಹುಣಸೆಹುಳಿ‌ ನಾಗಪ್ಪ
Share This Article
Facebook Email Print
Previous Article ಎನ್‍ಇಪಿ ಬಗೆಗೆ ವಿರೋಧ ಯಾಕಾಗಿ ದೇಶದಲ್ಲೇ ಮೊದಲು ಎನ್‍ಇಪಿ ಜಾರಿ ಮಾಡಿದ ರಾಜ್ಯದಲ್ಲೇ ಎನ್‍ಇಪಿ ರದ್ದು ಎಷ್ಟು ಸರಿ: ಎಬಿವಿಪಿ ಪ್ರಶ್ನೆ
Next Article Agriculture Minister N. Cheluvarayaswamy, visited Chitradurga, observed drought ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಇಂದು ಚಿತ್ರದುರ್ಗಕ್ಕೆ: ಬೆಳಗ್ಗೆ 9.30 ರಿಂದ ಸಂಜೆ 4 ರವರೆಗೆ ಸಚಿವರ ಕಾರ್ಯಕ್ರಮಗಳ ಪೂರ್ಣ ವಿವರ
Leave a Comment

Leave a Reply Cancel reply

Your email address will not be published. Required fields are marked *

ಮಾರುಕಟ್ಟೆ ಧಾರಣೆ
ಮಾರುಕಟ್ಟೆ ಧಾರಣೆ | ಜೂನ್ 15 | ಮೆಕ್ಕೆಜೋಳ, ಶೇಂಗಾ ರೇಟ್….
ಮಾರುಕಟ್ಟೆ ಧಾರಣೆ
eyes
ಕಣ್ಣುಗಳಲ್ಲಿನ ಈ ಬದಲಾವಣೆಗಳು ರೋಗಗಳನ್ನು ಸೂಚಿಸುತ್ತವೆಯಂತೆ
Life Style
care of your skin during pregnancy
ಗರ್ಭಾವಸ್ಥೆಯಲ್ಲಿ ಚರ್ಮದ ಆರೈಕೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
Life Style
ದಿನ ಭವಿಷ್ಯ
ದಿನ ಭವಿಷ್ಯ | ಜೂನ್ 15 | ವ್ಯವಹಾರದಲ್ಲಿ ಆರ್ಥಿಕ ಪ್ರಗತಿ, ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು
Dina Bhavishya
© Chitradurga News 2025 | Powered By Karnatakabest.com

Loading Comments...

    Welcome Back!

    Sign in to your account

    Username or Email Address
    Password

    Lost your password?

    Not a member? Sign Up