
CHITRADURGA NEWS | 22 AUGUST | 2024
ಆತ್ಮೀಯ ಚಿತ್ರದುರ್ಗ ನ್ಯೂಸ್ ಓದುಗರಿಗೆ ನಮಸ್ಕಾರ. ಇಂದಿನಿಂದ ಪ್ರತಿ ದಿನ ನಿಮ್ಮ ರಾಶಿ ಭವಿಷ್ಯ(Dina BHAVISHYA) ಪ್ರಕಟಿಸುತ್ತಿದ್ದೇವೆ.
2024 ಆಗಸ್ಟ್ 22 ಗುರುವಾರ ಚಂದ್ರನು ಮೀನಾ ರಾಶಿ ಪ್ರವೇಶ ಮಾಡಲಿದ್ದಾನೆ. ಈ ದಿನ ಸರ್ವಾರ್ಥ ಸಿದ್ಧಿ ಯೋಗವಿದೆ. ಮೇಷದಿಂದ ಮೀನಾ ರಾಶಿವರೆಗಿನ 12 ರಾಶಿಗಳ ಇಂದಿನ ಭವಿಷ್ಯ ಇಲ್ಲಿದೆ.

ಮೇಷ: ಈ ದಿನ ನಿಮ್ಮ ವ್ಯವಹಾರದಲ್ಲಿ ಮಿಶ್ರಫಲ. ವಿವೇಚನೆ ಇಲ್ಲದೆ ಹಣಕಾಸು ಖರ್ಚು ಮಾಡಿ ನಷ್ಟ ಅನುಭವಿಸುತ್ತೀರಿ. ಹಣದ ವಿಚಾರದಲ್ಲಿ ಎಚ್ಚರ. ದೂರದ ಪ್ರಯಾಣ ಮುಂದೂಡಿ.
ವೃಷಭ: ಮಿತ್ರರಿಂದ ಅನುಕೂಲವಿದೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಇಂದು ಕಿರಿಕಿರಿ ಆಗುವ ಸಾಧ್ಯತೆ ಇದೆ. ಮಾನಸಿಕ ಗೊಂದಲ, ತಳಮಳ ಇರುವ ದಿನ ಎಚ್ಚರವಾಗಿರಿ.
ಮಿಥುನ: ಇಂದು ನಿಮ್ಮ ಅದೃಷ್ಟದ ದಿನ. ಉತ್ತಮ ಧನ ಆದಾಯವಿದೆ. ಆದರೆ, ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಮಟ್ಟಿನ ಕಿರಿಕಿರಿ ಇರುತ್ತದೆ. ನ್ಯಾಯಾಲಯದ ಪ್ರಕರಣದಲ್ಲಿ ಸಮಸ್ಯೆಯಾಗುವ ಸಾಧ್ಯತೆ.
ಕಟಕ: ಉದ್ಯೋಗದಲ್ಲಿ ಯಶಸ್ವಿಯಾಗುವಿರಿ. ಆದರೆ, ತಂದೆ ಮಕ್ಕಳಲ್ಲಿ ಕಿರಿಕಿರಿಯಾಗುವ ಸಾಧ್ಯತೆ ಇದೆ. ಅನೇಕ ಆಸೆ ಆಕಾಂಕ್ಷೆಗಳಿಗೆ ಬಲಿಯಾಗುವಿರಿ. ಎಚ್ಚರಿಕೆ ವಹಿಸಿ.
ಇದನ್ನೂ ಓದಿ: ಆತಂಕ ಮೂಡಿಸಿದ 6 ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ | ವಸತಿ ಶಾಲೆಯಿಂದ ಬೆಳಗ್ಗೆ ತೆರಳಿದ್ದ ಮಕ್ಕಳು | ಬೆಂಗಳೂರಿನಲ್ಲಿ ಪತ್ತೆ
ಸಿಂಹ: ಇಂದು ನಿಮಗೆ ವಿಪರೀತ ಅದೃಷ್ಟದ ದಿನ. ವಿಪರೀತ ರಾಜಯೋಗದ ದಿನ. ಆದರೆ, ಆಲಸ್ಯ ಬಾಧಿಸುತ್ತದೆ. ಸೋಮಾರಿಗಳಾಗುವಿರಿ. ಜಿಗುಪ್ಸೆ ಕಾಡಲಿದೆ. ಕಾಲಿಗೆ ತೊಂದರೆಯಾಗಿ ಸಣ್ಣಪುಟ್ಟ ಪೆಟ್ಟಾಗುವ ಸಾಧ್ಯತೆ ಎಚ್ಚರ.
ಕನ್ಯಾ: ನಿಮಗೆ ಬಂಧುಗಳಿಂದ ತೊಂದರೆಯಿದೆ. ನೆರೆಹೊರೆಯವರಿಂದಲೂ ಸಮಸ್ಯೆ ಇದ್ದು, ನಿದ್ರಾಭಂಗವಾಗಲಿದೆ. ವಿಚ್ಚೇಧನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಜಯ ಸಿಗಲಿದೆ.
ತುಲಾ: ಇಂದು ಬಹಳ ಎಚ್ಚರವಾಗಿರಿ. ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದಲ್ಲೂ ತೊಂದರೆಯಿದೆ. ಆರ್ಥಿಕವಾಗಿ ಸಂಕಷ್ಟದ ದಿನವಾಗಿದೆ.
ವೃಶ್ಚಿಕ: ನಿಮಗೆ ಹೆಣ್ಣು ಮಕ್ಕಳಿಂದ ಸಾಕಷ್ಟು ಅನುಕೂಲ ಆಗಲಿದೆ. ಆದರೆ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಕಾಡಲಿದೆ. ಆರ್ಥಿಕವಾಗಿ ಹೆಚ್ಚು ಅನುಕೂಲವಿದೆ.
ಧನಸ್ಸು: ಇಂದು ಮಕ್ಕಳಿಗೆ ಹೆಚ್ಚು ಅವಕಾಶಗಳು ಲಭಿಸಲಿವೆ. ಧನಹಾನಿಯಾಗಲಿದೆ. ತಾಯಿಯ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗುವ ಸಾಧ್ಯತೆ. ವಾಹನ ಚಲಾಯಿಸುವಾಗ ಎಚ್ಚರವಹಿಸಿ. ಅಪಘಾತದ ಸಂಭವ ಇದೆ.
ಮಕರ: ಇಂದು ನಿಮಗೆ ಶುಭಯೋಗವಿದೆ. ಉತ್ತಮ ಸ್ನೇಹಿತರ ಪರಿಚಯವಾಗಲಿದೆ. ಆದರೆ, ಕಾನೂನು ಬಾಹಿರವಾಗಿ ಹಣ ಸಂಪಾದನೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಶಾಲೆ ವಿರುದ್ಧ ಪೋಷಕರ ಅಸಮಧಾನ | ಮಕ್ಕಳಿಗೆ ಕ್ರೂರ ದಂಡನೆಯ ಆರೋಪ | ಸಮಗ್ರ ತನಿಖೆಗೆ ತಹಶೀಲ್ದಾರ್ ಸೂಚನೆ
ಕುಂಭ: ಇಂದು ಹೆಚ್ಚು ಖರ್ಚು. ಸಾಲ ಮಾಡುವ ಪರಿಸ್ಥಿತಿ ಬರಬಹುದು. ನಿಮ್ಮ ಕಾರ್ಮಿಕರಿಂದ ಸಮಸ್ಯೆ ಆಗಬಹುದು.
ಮೀನಾ: ಬಂಧುಗಳಿಂದ ಮಾನಹಾನಿ ಸಾಧ್ಯತೆ. ತಂದೆಯ ಆರೋಗ್ಯದಲ್ಲೂ ವ್ಯತ್ಯಾಸ ಆಗಲಿದೆ. ಆಧ್ಯಾತ್ಮದ ಮೊರೆ ಹೋಗಿ. ದೇವರ ಪ್ರಾರ್ಥನೆ ಮಾಡಿ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
