Connect with us

    FIR: ಬಸ್ಸಿನ ಟಾಪ್‍ನಲ್ಲಿ ಜನರ ಪ್ರಯಾಣ, ಚಾಲಕ, ಮಾಲಿಕರ ವಿರುದ್ಧ ದೂರು ದಾಖಲು

    Top loaded bus

    ಕ್ರೈಂ ಸುದ್ದಿ

    FIR: ಬಸ್ಸಿನ ಟಾಪ್‍ನಲ್ಲಿ ಜನರ ಪ್ರಯಾಣ, ಚಾಲಕ, ಮಾಲಿಕರ ವಿರುದ್ಧ ದೂರು ದಾಖಲು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 12 SEPTEMBER 2024

    ಚಿತ್ರದುರ್ಗ: ಬಸ್ಸಿನ (ಮೇಲ್ಛಾವಣಿ) ಮೇಲೆ 25 ರಿಂದ 30 ಜನರನ್ನು ಕೂರಿಸಿಕೊಂಡು ಬಂದ ಖಾಸಗಿ ಬಸ್ ಚಾಲಕ ಹಾಗೂ ಮಾಲಿಕರ ಮೇಲೆ ದೂರು (FIR) ದಾಖಲಾಗಿದೆ.

    ಜಗಳೂರು ಕಡೆಯಿಂದ ಚಿತ್ರದುರ್ಗಕ್ಕೆ ಬಂದ ಖಾಸಗಿ ಬಸ್ಸಿನ ಟಾಪ್‍ನಲ್ಲಿ ಸಾಕಷ್ಟು ಜನ ಕುಳಿತು ಪ್ರಯಾಣ ಮಾಡುತ್ತಿರುವುದನ್ನು ಗಮನಿಸಿದ ಚಿತ್ರದುರ್ಗ ಸಂಚಾರಿ ಪೊಲೀಸರು, ಜೆಎಂಐಟಿ ವೃತ್ತದ ಬಳಿ ಬಸ್ ತಡೆದು ಜನರನ್ನು ಇಳಿಸಿ ಬಸ್ ಚಾಲಕನ ಮೇಲೆ ದೂರು ದಾಖಲಿಸಿದ್ದಾರೆ.

    ಇದನ್ನೂ ಓದಿ; ನಿರ್ಲಕ್ಷ್ಯ ತೋರಿದರೆ ಎಫ್‍ಐಆರ್ | ಅಧಿಕಾರಿಗಳಿಗೆ ಡಿಸಿ ವೆಂಕಟೇಶ್ ಎಚ್ಚರಿಕೆ

    ಜನರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಬಸ್ಸಿನ ಮೇಲೆ 25 ರಿಂದ 30 ಜನರನ್ನು ಕೂರಿಸಿಕೊಂಡು ಬಂದ ಚಾಲಕ ಕಂಚೋಬಳಪ್ಪ, ನಿರ್ವಾಹಕ ದಿನೇಶ್ ಹಾಗೂ ಬಸ್ ಮಾಲಿಕರಾದ ಎಸ್.ಜಯಕುಮಾರ್ ವಿರುದ್ಧ ಸಂಚಾರಿ ಪೊಲೀಸರು ದೂರು ದಾಖಲಿಸಿದ್ದಾರೆ.

    ಮುಂದಿನ ದಿನಗಳಲ್ಲೂ ಯಾವುದೇ ಬಸ್ಸಿನಲ್ಲಿ ಈ ರೀತಿಯಲ್ಲಿ ಜನರ ಪ್ರಾಣಕ್ಕೆ ತೊಂದರೆಯಾಗುವಂತೆ ಟಾಪ್‍ನಲ್ಲಿ ಕೂರಿಸಿಕೊಂಡು ಚಾಲನೆ ಮಾಡಿದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

    ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ | ಐದು ಜನರ ಗೆಲುವು

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top