Connect with us

    ಭೀಕರ ಅಪಘಾತದಲ್ಲಿ ಕೃಷಿ ಇಲಾಖೆ ಅಧಿಕಾರಿ ಮೃತ | ತಿರುಮಲ ಡಾಬ ಬಳಿ ಘಟನೆ

    ಕ್ರೈಂ ಸುದ್ದಿ

    ಭೀಕರ ಅಪಘಾತದಲ್ಲಿ ಕೃಷಿ ಇಲಾಖೆ ಅಧಿಕಾರಿ ಮೃತ | ತಿರುಮಲ ಡಾಬ ಬಳಿ ಘಟನೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 20 JANUARY 2024
    ಚಿತ್ರದುರ್ಗ (CHITRADURGA): ನಗರದ ಹೊರವಲಯದ ಹೊಳಲ್ಕೆರೆ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಹೊಳಲ್ಕೆರೆ ಕೃಷಿ ಇಲಾಖೆ ತಾಂತ್ರಿಕ ಸಿಬ್ಬಂದಿ ವಿ.ವಿಶಾಲ್‌ ಕುಮಾರ್‌ (29 ) ಮೃತಪಟ್ಟಿದ್ದಾನೆ.

    ಹೊಳಲ್ಕೆರೆ ರಸ್ತೆಯ ತಿರುಮಲ ಡಾಬ ಬಳಿ ಶನಿವಾರ ಬೆಳಿಗ್ಗೆ ವಿಶಾಲ್‌ ಕುಮಾರ್‌ ಕಾರಿಗೆ ಲಾರಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ವಿಶಾಲ್‌ ಕುಮಾರ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಇದನ್ನೂ ಓದಿ: ಮಕ್ಕಳ ಒಲವು, ಭಾವನೆ ಗೌರವಿಸಿ | ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗದಿಂದ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕ ಮದುವೆ ನಿಶ್ಚಿತಾರ್ಥ ಭಾನುವಾರ ನಿಗಧಿಯಾಗಿತ್ತು.

    ಇದನ್ನೂ ಓದಿ: ಕೊಲೆಯಲ್ಲಿ ಅಂತ್ಯವಾದ ಸಹೋದರರ ಆಸ್ತಿ ಜಗಳ | ಬೆಲಗೂರು ಗ್ರಾಮದಲ್ಲಿ ಘಟನೆ

    ಶಿವಮೊಗ್ಗದಲ್ಲಿ ಬಿಎಸ್ಸಿ (ಕೃಷಿ) ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಕೃಷಿ)ಪೂರ್ಣಗೊಳಿಸಿ 2018 ರಲ್ಲಿ ಸರ್ಕಾರಿ ಹುದ್ದೆ ಪಡೆದಿದ್ದರು. ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top