By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಮೇ.15 ಕ್ಕೆ ಶ್ರೀ ರಾಮಾನುಜಾಚಾರ್ಯರರ ಜಯಂತೋತ್ಸವ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಮೇ.15 ಕ್ಕೆ ಶ್ರೀ ರಾಮಾನುಜಾಚಾರ್ಯರರ ಜಯಂತೋತ್ಸವ

ಮುಖ್ಯ ಸುದ್ದಿ

ಮೇ.15 ಕ್ಕೆ ಶ್ರೀ ರಾಮಾನುಜಾಚಾರ್ಯರರ ಜಯಂತೋತ್ಸವ

News Desk Chitradurga News
Last updated: 3 May 2024 15:57
News Desk Chitradurga News
1 year ago
Share
ಶ್ರೀ ರಾಮಾನುಜಾಚಾರ್ಯ
ಶ್ರೀ ರಾಮಾನುಜಾಚಾರ್ಯ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 03 MAY 2024

ಚಿತ್ರದುರ್ಗ: ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾ ಬೆಂಗಳೂರು, ಭಗವದ್ ಶ್ರೀ ರಾಮಾನುಜಾಚಾರ್ಯರ ಜಯಂತೋತ್ಸವ ಸಮಿತಿ, ಪರಶುರಾಂಪುರ ಹಾಗೂ ಶ್ರೀ ವೈಷ್ಣವ ಸಮುದಾಯದ ವತಿಯಿಂದ ಪರಶುರಾಂಪುರದಲ್ಲಿ ಭಗವದ್ ಶ್ರೀ ರಾಮಾನುಜಾಚಾರ್ಯರ 1007ನೇ ಜಯಂತೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಪಿಆರ್ ಪುರ ಗ್ರಾಮದ ಪಾವಗಡ ರಸ್ತೆಯ ಲಕ್ಷ್ಮಿಚನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ಮೇ.15 ಮತ್ತು 16 ರಂದು ಶ್ರೀ ರಾಮಾನುಜಾಚಾರ್ಯರ ಜಯಂತೋತ್ಸವ ಆಯೋಜಿಸಲಾಗಿದೆ.

ಇದನ್ನೂ ಓದಿ: ಸಾಹಿತಿ ಬಿ.ಎಲ್ ವೇಣು ನಿವಾಸಕ್ಕೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಭೇಟಿ

ಜಯಂತೋತ್ಸವದ ಅಂಗವಾಗಿ ಗ್ರಾಮದ ಪಾವಗಡ ರಸ್ತೆಯ ಹಳೇಕೆರೆಯ ಬಳಿ ಇರುವ ಗ್ರಾಮದೇವರಾದ ಲಕ್ಷ್ಮೀಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಮೇ 15ರ ಬುಧವಾರ ಸಂಜೆ ಉಪನಯನದ ವಟುಗಳಿಗೆ ಉದಕಶಾಂತಿ ಭಜನಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೇ 16 ಗುರುವಾರ ಬೆಳಿಗ್ಗೆ 7.30 ಕ್ಕೆ ಶ್ರೀ ಲಕ್ಷ್ಮೀಚನ್ನಕೇಶವಸ್ವಾಮಿಯವರಿಗೆ ಹಾಗೂ ಭಗವದ್ ಶ್ರೀ ರಾಮಾನುಜಾಚಾರ್ಯರಿಗೆ ಪಂಚಾಮೃತಾಭಿಷೇಕ ಹಾಗೂ ಹೂವಿನ ಅಲಂಕಾರ ಸೇವೆ ಆರಂಭಿಸಲಾಗುವುದು.

ಮೇಲುಕೋಟೆಯ ಯದುಗಿರಿ ಮಠದ 41 ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ 11.30 ಕ್ಕೆ ಉಪನಯನ ವಟುಗಳಿಗೆ ಶ್ರೀಗಳಿಂದ ಸಮಾಶ್ರಯಣ ಮುದ್ರಾಧಾರಣೆ ಕಾರ್ಯಕ್ರಮ.

ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆ ಗಡಿಭಾಗದಲ್ಲಿ ಮಧ್ಯ ಮಾರಾಟ ನಿಷೇಧ

ಅಂದು ಮಧ್ಯಾಹ್ನ 12.30 ಕ್ಕೆ ಲೋಕ ಕಲ್ಯಾಣಾರ್ಥವಾಗಿ ಮಹಾಸುದರ್ಶನ ಹೋಮ ಹಾಗೂ ಪೂರ್ಣಾಹುತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಉಪನಯನ ಕಾರ್ಯಕ್ರಮದ ಪೌರೋಹಿತ್ಯ ನೇತೃತ್ವವನ್ನು ಉಭಯ ವೇದಾಂತ ವಿದ್ವಾನ್ ಮಧುಸೂಧನ್ ಭಟ್ಟರು ಕತ್ರಿಗುಪ್ಪೆ, ಬೆಂಗಳೂರು, ಯಲಹಂಕದ ರಾಮು ರಾಮಾನುಜಜಂ, ತುಮಕೂರಿನ ಶ್ರೀನಿವಾಸರಾಜ್ ತುಳಸೀ ಆಚಾರ್ಯರು, ತಾವರೇಕೆರೆಯ ಹರಿಪ್ರಸಾದ್, ದಾವಣಗೆರೆಯ ಸುನಿಲ್ ಆಚಾರ್ಯ ನಡೆಸಿಕೊಡುವರು.

ಇದನ್ನೂ ಓದಿ: ಹೆಚ್ಚಾಗಿದೆ ಬಿಸಿಲು | ಕುರಿ, ಮೇಕೆ, ದನ ಮೆಯಿಸಲು ಸರಿಯಾದ ಸಮಯ ಯಾವುದು ಗೊತ್ತಾ

ಜಯಂತೋತ್ಸವಕ್ಕೆ ಅಭಿನವರಂಗ ರಾಮಾನುಜ ತ್ರಿದಂಡಿ ಜೀಯಾರ್ ಮಹಾಸ್ವಾಮಿಗಳು, ಮೈಸೂರು ಸಂಸ್ಥಾನ, ಯೋಗ ಸಂಸ್ಕøತಂ ಯುನಿರ್ವಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪುರಸ್ಕøತರಾದ ಡಾ.ಸಂಪತ್ ವೇಣುಗೋಪಾಲ ಆಚಾರ್ಯ ಖ್ಯಾತ ಜೋಷಿಸಿ ಯಲಹಂಕ ಬೆಂಗಳೂರು, ಶ್ರೀ ಎ.ಪಿ ರಾಮಮೂರ್ತಿ ಸ್ವಾಮೀಜಿ ರಾಯದುರ್ಗದ ವಿಪ್ರಮಲೈ ವಿಶ್ವಮಾತಾಶ್ರಮ ಪಾಲ್ಗೊಳ್ಳುವರು.

ದಾವಣಗೆರೆಯ ಉಪನ್ಯಾಸಕ ನಯನಜ ಮೂರ್ತಿ, ಡಾ ಸಂಪತ್ ವೇಣುಗೋಪಾಲ್ ಆಚಾರ್ಯ ಇವರಿಂದ ಉಪನ್ಯಾಸ.

ಗುರುಗಳಿಂದ ಆಶೀರ್ವಚನ, ನಂತರ ಶ್ರೀ ರಾಮಾನುಜಾಚಾರ್ಯರ ಉತ್ಸವ ಮಹಾಮಂಗಳಾರತಿ ಪ್ರಸಾದ ವಿನಿಯೋಗ ತರಿಯಾರಾದನೆ
ಕಾರ್ಯಕ್ರಮ ಇರಲಿದೆ.

ಇದನ್ನೂ ಓದಿ: ಮಕ್ಕಳ ಕವಿಗೋಷ್ಠಿಗೆ ಕವನಗಳ ಆಹ್ವಾನ| ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಆಯೋಜನೆ

ಕಾರ್ಯಕ್ರಮದಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾದ ಅಧ್ಯಕ್ಷ ರವಿ ನರಸಿಂಹನ್, ಕಾರ್ಯದರ್ಶಿ ಸುಗಂಧರಾಜು, ಸಾಲುಕಟ್ಟೆ ಶ್ರೀನಿವಾಸ, ಎಸ್.ಅನಂತ್, ಕೆ.ಎಸ್. ಶ್ರೀನಿವಾಸ ಹೊಸದುರ್ಗ, ದಾವಣಗೆರೆಯ ವರದರಾಜು, ಚನ್ನಗಿರಿಯ ನರಸಿಂಹಮೂರ್ತಿ, ಶಿವಮೊಗ್ಗದ ಎಸ್.ಆರ್.ಗಿರೀಶ್, ಗೌರವಾಧ್ಯಕ್ಷ ಟಿ.ಎಲ್.ವೆಂಕಟರಾಜು, ಕೆ.ಬಿ.ರಾಮಕೃಷ್ಣ, ಎಸ್ ಹನುಮಂತರಾಯ, ಪ್ರಭಾಕರ, ಗೋಪಾಲ, ಪಿ.ಎಸ್.ಸುರೇಶ, ಪಿ.ಎಸ್.ನಾಗರಾಜು, ದಿವಾಕರಮೂರ್ತಿ, ಎಸ್.ಶ್ರೀನಿವಾಸ, ಎಸ್. ಆದಿತ್ಯ, ರಂಗನಾಥ, ಗಾಯತ್ರಮ್ಮ, ಗೌರಮ್ಮ, ಅಶೋಕ ಮತ್ತಿತರರು ಭಾಗವಹಿಸುವರು ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಚ್. ಸತ್ಯನಾರಾಯಣಮೂರ್ತಿ ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaJayantotsavapavagadaPR PuraSri Ramanujacharyaಚಿತ್ರದುರ್ಗಜಯಂತೋತ್ಸವಪಾವಗಡಪಿ.ಆರ್ ಪುರಶ್ರೀ ರಾಮಾನುಜಾಚಾರ್ಯ
Share This Article
Facebook Email Print
Previous Article ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ
Next Article ವಿಧಾನಸೌಧ ಲೋಕಸಭೆ ಚುನಾವಣೆ ಬೆನ್ನಲ್ಲೆ ಮತ್ತೊಂದು ಚುನಾವಣೆ | ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೇಳಾಪಟ್ಟಿ ಪ್ರಕಟ
Leave a Comment

Leave a Reply Cancel reply

Your email address will not be published. Required fields are marked *

ಲಿಫ್ಟ್ ಹತ್ತಿದ ತಕ್ಷಣ ತಲೆ ಸುತ್ತುವವರು ಒಮ್ಮೆ ಈ ವಿಚಾರ ತಿಳಿದಿರಿ
Life Style
ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ಬಂದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ಎಂಬುದನ್ನು ತಿಳಿಯಿರಿ
Life Style
ಹೆರಿಗೆಯ ನಂತರ ಬೇಗ ಚೇತರಿಸಿಕೊಳ್ಳಲು ಈ ಲಡ್ಡುಗಳನ್ನು ತಿನ್ನಿರಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 30 | ಉದ್ಯೋಗಗಳಲ್ಲಿ ಬಡ್ತಿ, ದೂರದ ಪ್ರಯಾಣ, ಆರೋಗ್ಯದಲ್ಲಿ ಎಚ್ಚರ
Dina Bhavishya
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up