
CHITRADURGA NEWS | 01 OCTOBER 2025
ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ-2025ರ ಅಂಗವಾಗಿ ಏರ್ಪಡಿಸಿದ್ದ ವಚನ ಕಮ್ಮಟ ರ್ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
2024-25 ನೇ ಸಾಲಿನ ರಾಜ್ಯಮಟ್ಟದವಚನ ಕಮ್ಮರ್ಯಾಂಕ್ ವಿಜೇತರ ವಿವರ
ಪ್ರಾಥಮಿಕ ಶಾಲಾ ವಿಭಾಗ
5ನೇ ಐದನೇ ತರಗತಿಯಲ್ಲಿ ಕಾವೇರಿ ಮೂಲಿಮಠ ಪ್ರಥಮ, ಸಾಗರ ಹೊನ್ನನಾಯಕ ದ್ವಿತೀಯ, ವರ್ಷ ಜೆ.ಆರ್ತೃತೀಯ ಸ್ಥಾನ.
6ನೇ ತರಗತಿ ವಿಭಾಗದಲ್ಲಿ ಬೃಂದಾ ಪಿ.ಆರ್ ಪ್ರಥಮ, ಸೃಷ್ಟಿ ಸಂಪತ್ತಕುಮಾರ ದ್ವಿತೀಯ, ನವೀನ್ಕುಮಾರ್ ತೃತೀಯಸ್ಥಾನ.
ಇದನ್ನೂ ಓದಿ: ಟೇಕ್ವೋಂಡಾ ಸ್ಪರ್ಧೆ | SJM ಪದವಿ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ
7ನೇ ತರಗತಿ ವಿಭಾಗದಲ್ಲಿ ಪ್ರತಿಕ್ಷ ಕೆ.ರಂಗಪುರ ಪ್ರಥಮ, ಕಲ್ಪನಾ ಶಿವಾಳಮ್ಮನವರ ದ್ವಿತೀಯ, ಶಶಿಕಲಾ ಬಿ.ಎಸ್ ತೃತೀಯಸ್ಥಾನ.
8ನೇ ತರಗತಿ ವಿಭಾಗದಲ್ಲಿ ದೀಪಿಕಾ.ಬಿ.ಪಾಟೀಲ್ ಪ್ರಥಮ, ದೀಪ.ಎಂ.ವೈ ದ್ವಿತೀಯ, ಎಲ್ಲಮ್ಮ ತೃತೀಯಸ್ಥಾನ ಪಡೆದರು.
ಪ್ರೌಢಶಾಲಾ ವಿಭಾಗ
9ನೇ ತರಗತಿ ವಿಭಾಗದಲ್ಲಿ ಅಂಕಿತ ನಾಗೇಂದ್ರ ಪ್ರಥಮ, ಶೋಭಾ ದ್ವಿತೀಯ, ಪ್ರವೀಣ್ ಹುಬ್ಬಳ್ಳಿ ತೃತೀಯ ಸ್ಥಾನ ಪಡೆದರು.
ಇದನ್ನೂ ಓದಿ: ಈ ಬೆಳಗಿನ ಅಭ್ಯಾಸಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ
10ನೇ ತರಗತಿ ವಿಭಾಗದಲ್ಲಿ ಸಂಗೀತ.ಎನ್ ಪ್ರಥಮ, ಹಾಸಿನಿ.ಕೆ ದ್ವಿತೀಯ, ಸಿಂಧು.ಎಚ್ ತೃತೀಯಸ್ಥಾನ
ಪದವಿ ಪೂರ್ವ ವಿಭಾಗ
ಪ್ರಥಮ ಪಿಯುಸಿ (ಅರಿವು) ವಿಭಾಗದಲ್ಲಿ ಚೆನ್ನಮ್ಮ ಆರ್.ಕಟುವಾಣಿ ಪ್ರಥಮ, ಅಕ್ಷತಾ ಎಸ್. ಬಡಗನ್ನಪ್ಪನವರ, ದ್ವಿತೀಯ, ಶ್ವೇತ ನಿಂಗೋಜಿ ತೃತೀಯಸ್ಥಾನ ಪಡೆದರು.
ಇದನ್ನೂ ಓದಿ: ಮುರುಘಾ ಮಠದಲ್ಲಿ ಕೃಷಿ ಮತ್ತು ಕೈಗಾರಿಕೆ ಮೇಳ | ಡಾ.ಅಶೋಕ್ ದಳವಾಯಿ ಉದ್ಘಾಟನೆ
ದ್ವಿತೀಯ ಪಿಯುಸಿ (ಆಚಾರ) ವಿಭಾಗದಲ್ಲಿ ರಂಗಸ್ವಾಮಿ ಪ್ರಥಮ, ಪ್ರೇಮ್ಕುಮಾರ್ ಜೋಗಿ ದ್ವಿತೀಯ, ಅಚಿತಾ.ಎಸ್ ತೃತೀಯಸ್ಥಾನ ಪಡೆದರು.
ಪದವಿ ವಿಭಾಗದಲ್ಲಿ
ಪ್ರಥಮ ಪದವಿ ವಿಭಾಗದಲ್ಲಿ ಸಂಗೀತ ಹಳ್ಳೂರ ಪ್ರಥಮ, ಐಶ್ವರ್ಯ.ಎನ್ ದ್ವಿತೀಯ, ಪೂರ್ಣಿಮಾ ಎಂ.ಎಸ್ ತೃತೀಯ ಸ್ಥಾನ.
ಇದನ್ನೂ ಓದಿ: ಕಲ್ಲುಪ್ಪಿನ ನೀರಿನಲ್ಲಿ ನಿಮ್ಮ ಪಾದಗಳನ್ನು ನೆನೆಸಿಡುವುದರಿಂದ ಈ ಪ್ರಯೋಜನವನ್ನು ಪಡೆಯಬಹುದಂತೆ
ದ್ವಿತೀಯ ಪದವಿ ವಿಭಾಗದಲ್ಲಿ ಲಹರಿ ಡಿ.ಜಿ ಪ್ರಥಮ, ಸಾಕ್ಷಿ ದ್ವಿತೀಯ, ನಾಗಶ್ರೀ ಭಟ್ ತೃತೀಯ ಸ್ಥಾನ
ತೃತೀಯ ಪದವಿ ವಿಭಾಗದಲ್ಲಿ ಸಚಿನ್.ಎಲ್ ಬಿರಾದಾರ ಪ್ರಥಮ, ರಕ್ಷಿತಾ.ಪಿ ದ್ವಿತೀಯ, ರಚಿತಾ ಶಿವಕ್ಕನವರ್ ತೃತೀಯ ಸ್ಥಾನ ಪಡೆದರು.
ರ್ಯಾಂಕ್ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಉತ್ತಂಗಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಕೂಡ ಬಸವತತ್ವದ ಅಡಿಯಲ್ಲಿ ಬದುಕುವುದು ಉತ್ತಮ. ತಿಳಿಯಲಾದವರಿಗೆ ತಿಳಿಯುವಂತೆ ನಡೆಸಿಕೊಡುವುದು ವಚನದ ಶಕ್ತಿಯಲ್ಲಿದೆ ಎಂದರು.
ಇದನ್ನೂ ಓದಿ: PHC ಗಳಲ್ಲಿ ವೈದ್ಯರು ಕಡ್ಡಾಯ ಹಾಜರಾತಿಗೆ ಸೂಚನೆ | ಜಿಪಂ ಸಿಇಒ ಆದೇಶ
ಜನಸಾಮಾನ್ಯರಲ್ಲಿ ಬಸವಣ್ಣನವರ ವಚನಗಳು ಒಂದು ರೀತಿಯಲ್ಲಿ ಮಂತ್ರಗಳಾಗಬೇಕು. ಸಾಮಾಜಿಕ ವ್ಯವಸ್ಥೆಯಲ್ಲಿ ಸತ್ಯಾಂಶವನ್ನು ನಾವು ಬೇಗ ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಳ್ಳುವಂತೆ ಮಾಡುವ ಶಕ್ತಿ ಈ ವಚನಗಳಲ್ಲಿವೆ. ಎಲ್ಲಾ ಸಮುದಾಯದವರೆಗೂ ಕೂಡ ಬದುಕಿನ ದಾರಿ ತೋರಿಸಬೇಕು. ಅದು ನಿಜವಾದ ಧರ್ಮ. ಸಿರಿ ಸಂಪತ್ತು ನಿಜವಾದ ಸಂಪತ್ತಲ್ಲ. ದೈಹಿಕ ಶ್ರಮದಿಂದ, ಸತ್ಯದಿಂದ, ಕರ್ಮದಿಂದ, ಕಾಯಕದಿಂದ ಸಂಪಾದಿಸುವುದು ನಿಜವಾದ ಸಂಪತ್ತು, ಸಂಸ್ಕಾರ ಎನ್ನಬಹುದು ಎಂದರು.
ಇದನ್ನೂ ಓದಿ:ನಾಗರಿಕ ಸೇವಾ ಹುದ್ದೆಗಳ ನೇಮಕಾತಿ | 3 ವರ್ಷ ವಯೋಮಿತಿ ಸಡಿಲಿಕೆ | ರಾಜ್ಯ ಸರ್ಕಾರ ಆದೇಶ
ನಿಸ್ವಾರ್ಥ ಸಮಾಜವನ್ನು ಕಟ್ಟಬೇಕು ಅಂದರೆ, ನಮ್ಮಲ್ಲಿ ಸ್ವಾರ್ಥ ಎನ್ನುವ ವಿಚಾರದಿಂದ ಹೊರಬರಬೇಕು. ಪ್ರತಿಯೊಬ್ಬರನ್ನು, ಪ್ರತಿಯೊಂದು ಜಾತಿಯವರನ್ನು ಸಮಾನತೆಯಿಂದ ಕಾಣುವ ರೂಪ ನಮ್ಮದಾಗಬೇಕು. ನಮ್ಮ ಮಕ್ಕಳಿಗೆ ಬಸವಾದಿ ಶರಣರ ವಚನಗಳನ್ನು ತಿಳಿದುಕೊಳ್ಳುವಂತಹ ತಿಳಿಸಿ ಕೊಡುವಂತಹ ಕೆಲಸ ನಮ್ಮದಾಗಬೇಕು ಎಂದು ನುಡಿದರು.
ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ವಚನಗಳನ್ನು ಸರಿಯಾಗಿ ಅರ್ಥೈಸಿಕೊಂಡಿದ್ದೆ ಆದರೆ ಯಾವ ವಿಶ್ವವಿದ್ಯಾಲಯದಲ್ಲಿ ಓದಿದರು ಅಂತಹ ವೈಚಾರಿಕತೆ ಬರಲು ಸಾಧ್ಯವಿಲ್ಲ. ಅಂತಹ ಶಕ್ತಿ ವಚನಗಳಿಗೆ ಇದೆ. ವಚನಗಳ ಶಕ್ತಿಯು ಉತ್ತಮ ಸಮಾಜ ನಿರ್ಮಾಣಕ್ಕೆ ಮೂಲ ಕಾರಣವಾಗುತ್ತಿದೆ. ಹಾಗಾಗಿ ಶರಣರು ಈ ವಚನಗಳನ್ನು ಈ ನಾಡಿಗೆ ಈ ವಿಶ್ವಕ್ಕೆ ನೀಡಿದ್ದಾರೆ. ಅವುಗಳನ್ನು ಬಿತ್ತರಿಸುವ ಕೆಲಸ ನಮ್ಮದಾಗಬೇಕು. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ವಿಕಸಿತಗೊಳಿಸುವ ಶಕ್ತಿ ಈ ವಚನ ಸಾಹಿತ್ಯದಲ್ಲಿದೆ. ಶರಣರ ಅನುಭಾವಗಳನ್ನು ಪ್ರತಿ ಕುಟುಂಬಗಳಲ್ಲಿ ಬಿತ್ತರಿಸುವ ಕೆಲಸ ನಮ್ಮದಾಗಬೇಕು ಎಂದು ನುಡಿದರು
ಇದನ್ನೂ ಓದಿ: ಅಡಿಕೆ ಧಾರಣೆ | ಸೆಪ್ಟಂಬರ್ 29 | ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್
ರಾವಂದೂರು ವಿರಕ್ತ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಸಂಸ್ಕಾರಗಳನ್ನು ಕಲಿಸಬೇಕು. ಬಸವಾದಿ ಶರಣರ ವಚನಗಳನ್ನು ಕಲಿಸುವಂತಹ ಗುಣ ನಮ್ಮದಾಗಬೇಕು. ನಮ್ಮ ಜೀವನದಲ್ಲಿ ತಾರ್ಕಿಕಜ್ಞಾನ ಎಷ್ಟು ಮುಖ್ಯವೋ ಆಧ್ಯಾತ್ಮಿಕ ಜ್ಞಾನವು ಕೂಡ ಅಷ್ಟೇ ಮುಖ್ಯ. ಅತಿ ಆಸೆ ಬಿಟ್ಟು ಸಮಾಜದ ಪ್ರಗತಿಗೆ ಕಾರಣವಾಗಬೇಕು. ನಮ್ಮ ಮಕ್ಕಳಲ್ಲಿ ಭಾವನಾತ್ಮಕ ಸಂಬಧಗಳನ್ನು ಬೆಳೆಸಬೇಕು ಎಂದರು.
ಅಶೋಕ್ ಬಸಪ್ಪ ಬರಗುಂಡಿ ಮಾತನಾಡುತ್ತಾ, ಈ ನಾಡಿಗೆ ಭೇದಭಾವವಿಲ್ಲದ ಸಮಾಜವನ್ನು ತಂದವರು ಬಸವಣ್ಣ. ಬಸವತತ್ವ ನೆಲೆಯನ್ನು ಗಟ್ಟಿಗೊಳಿಸಿ ನಾಡಿನ ಸರ್ವಜನಾಂಗದವರನ್ನು ಸಮಾನರಾಗಿ ಕಾಣುತ್ತಾ ಬಂದಿವುರುದನ್ನು ಈ ಮುರುಘಾಮಠದಲ್ಲಿ ಕಾಣಬಹುದು. ವಿಚಾರಧಾರೆಗಳು ಸಣ್ಣ ಮಕ್ಕಳಿಂದಲೂ ವಚನಗಳ ಮುಖಾಂತರ ಬಿತ್ತರಿಸುವ ಕೆಲಸ ಆಗಬೇಕು. ಒಳ್ಳೆಯ ಭಾವನೆಗಳನ್ನು ಬೆಳೆಸುವಂತಹ ಗುಣ ಎಲ್ಲರದ್ದಾಗಬೇಕು ಎಂದರು.
ಇದನ್ನೂ ಓದಿ: ನಿಂಬೆ ಹಣ್ಣು ಅಸ್ತಮಾ ರೋಗಿಗಳಿಗೆ ಪ್ರಯೋಜನಕಾರಿಯೇ?
ಶ್ರೀಮಠವು ಯಾವುದೇ ಫಲಾಪೇಕ್ಷೆ ಹೊಂದದೆ ಈ ವಚನ ಪರೀಕ್ಷೆಗಳನ್ನು ನಡೆಸುತ್ತಾ ಬಂದಿದೆ. ಇದರಿಂದ ವಿದ್ಯಾರ್ಥಿಗಳನ್ನು ಆದರ್ಶ ವ್ಯಕ್ತಿಗಳನ್ನಾಗಿಸುವ ಸೃಷ್ಟಿಸುವ ಕೆಲಸ ನಮ್ಮದಾಗಬೇಕು. ಮುಂದಿನ ಪೀಳಿಗೆಯವರಿಗೂ ಸಹ ಬಸವಾದಿ ಶರಣರ ವಚನಗಳನ್ನು ಬಿತ್ತರಿಸುವ ಕಾರ್ಯ ನಮ್ಮದಾಗಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಗುರುಮಠಕಲ್ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಸಿದ್ಧರಾಮಣ್ಣ ನಡಕಟ್ಟಿ, ಸಿ ಎಂ ಚಂದ್ರಪ್ಪ, ವಚನಕಮ್ಮಟ ನಿರ್ದೇಶಕರಾದ ವೀರಭದ್ರಪ್ಪ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
