
CHITRADURGA NEWS | 01 OCTOBER 2025
ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ 2025ರ ಅಂಗವಾಗಿ ಶ್ರೀ ಮುರುಘಾಮಠದಲ್ಲಿ ಅಯೋಜಿಸಲಾಗಿದ್ದ ಕೃಷಿ ಮತ್ತು ಕೈಗಾರಿಕೆ ಮೇಳವನ್ನು ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಅಶೋಕ್ ದಳವಾಯಿ ಉದ್ಘಾಟಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆ ಬರಪೀಡಿತ ಎಂದು ಘೋಷಿಸಿ | ಪ್ರತಿಭಟನೆ
ಈ ವೇಳೆ ಡಾ.ಅಶೋಕ್ ದಳವಾಯಿ ಮಾತನಾಡಿ, ಶರಣ ಸಂಸ್ಕೃತಿ ಎಂದರೆ ಕೇವಲ ಧಾರ್ಮಿಕ ಪದ್ಧತಿ ಅಲ್ಲ. ಅದು ಮಾನವ ಶ್ರೇಷ್ಠತೆಯ ಜೀವನಕ್ರಾಂತಿ. ಕರ್ಮ ಸಂಸ್ಕೃತಿಗೆ ಶರಣ ಸಂಸ್ಕೃತಿ ಉತ್ತರ ನೀಡುತ್ತದೆ. 12ನೇ ಶತಮಾನದಲ್ಲಿ ಶರಣರು ಕಾಯಕ ಪರಿಕಲ್ಪನೆ ಮೂಲಕ ಕರ್ಮ ಸಂಸ್ಕೃತಿಗೆ ಸ್ಪಷ್ಟ ಉತ್ತರ ನೀಡಿದರು. ನಾವು ಮಾಡುವ ಕೆಲಸ ಅದುವೇ ಕೈಲಾಸ. ಶರಣರು ಇದನ್ನು ಜಗತ್ತಿಗೆ ತಿಳಿಸಿದರು.
ಕೃಷಿ ಕಾಯಕ ಶ್ರೇಷ್ಠವಾದದ್ದು, ಬಸವಣ್ಣನವರು ಹೇಳುವ ಹಾಗೆ ಕೃಷಿ ಕಾರ್ಯ ಮಾಡುವ ಸದ್ಭಕ್ತನ ಪಾದವ ತೋರಿಸಿ ಎನ್ನುತ್ತಾರೆ. ಮೇಟಿ ಮತ್ತು ನಾಟಿಗಳ ಮಧ್ಯೆ ನಿರರ್ಥಕ ಸಂಬಂಧವಿದೆ. ನಂತರದ್ದು ದಾಸೋಹ ಪರಿಕಲ್ಪನೆ.
ಕಾಯಕದಿಂದ ದುಡಿದಿದ್ದನ್ನು ಸ್ವಾರ್ಥಕ್ಕಾಗಿ ಬಳಸದೆ ದಾಸೋಹಕ್ಕೆ ನೀಡುವುದೇ ಪರಮಸುಖ. ಸಂಪಾದನೆ ನಿನ್ನದಾದರೆ ಲಾಭ ಸಮಾಜಕ್ಕೆ ಸೇರಬೇಕು. ಶರಣ ಸಂಸ್ಕೃತಿಯು ಇಂದಿನ ಜ್ವಲಂತ ಸಮಸ್ಯೆಗಳ ನಿರ್ಮೂಲನೆಗೆ ಇರುವ ಒಂದು ಉತ್ತರ. ಯೋಗಿ ಎಂದರೆ ಜಗತ್ತಿಗೆ ಅನ್ನ ಕೊಡುವವನು. ಕೃಷಿಕರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬೇಕು. ಇಲ್ಲವಾದಲ್ಲಿ ರೈತರ ಸಂಖ್ಯೆ ಕಡಿಮೆಯಾಗುವ ಸಂಭವವಿದೆ.
ಇದನ್ನೂ ಓದಿ: PHC ಗಳಲ್ಲಿ ವೈದ್ಯರು ಕಡ್ಡಾಯ ಹಾಜರಾತಿಗೆ ಸೂಚನೆ | ಜಿಪಂ ಸಿಇಒ ಆದೇಶ
ಎಲ್ಲಾ ಉದ್ಯೋಗಗಳಿಗಿಂತ ಕೃಷಿಯಿಂದ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ನಮ್ಮ ಯೋಚನೆ ವಿಚಾರ ಕೃತಿಗಳಲ್ಲಿ ಹತ್ತಿರ ಸಂಬಂಧವಿರಬೇಕು. ಜಾಗತಿಕ ಪರಿವರ್ತನೆಗೆ ಶರಣ ಸಂಸ್ಕೃತಿ ಸಹಕಾರವಾಗಿದೆ ಎಂದು ನುಡಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಅಧ್ಯಕ್ಷ ಶಿವಯೋಗಿ ಸಿ ಕಳಸದ ಮಾತನಾಡಿ, ಕೃಷಿಯಲ್ಲಿ ಆಸಕ್ತಿ ಇರುವವರನ್ನು ಸೇರಿಸಿ ಉತ್ತಮ ವೇದಿಕೆಯನ್ನು ಶ್ರೀಮಠದ ವತಿಯಿಂದ ಕಲ್ಪಿಸಿಕೊಡುತ್ತೇವೆ. ರೈತರ ಬೆಳೆಗೆ ಯೋಗ್ಯವಾದ ಬೆಲೆ ಬರುವಲ್ಲಿ ಶ್ರಮಿಸಬೇಕಿದೆ.
ಶ್ರೀಮಠವು ಅನೇಕ ಜಾಗದಲ್ಲಿ ಉಪಯೋಗವಾಗುವಂತೆ ಗಿಡಮರ, ತೋಟಗಾರಿಕೆಯನ್ನು ಶ್ರೀಮಠದ ವತಿಯಿಂದ ಮಾಡಿಸುತ್ತಿದ್ದೇವೆ. ಕೃಷಿ ಪದ್ಧತಿ ದಾಖಲಾತಿಯನ್ನು ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಮಾಡಲು ಶ್ರೀಮಠ ಬದ್ಧವಾಗಿದೆ. ಶ್ರೀಮಠದ ಮುಂದಿನ ಕಾರ್ಯಕ್ರಮಗಳಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತರು ಅನ್ನ ಕೊಡುತ್ತಾರೆ, ಆದರೆ ಅವರೇ ಬಡವರು ಎಂಬ ಮಾತಿದೆ. ಅದಕ್ಕೆ ನಾವು ರೈತರು ಬೆಳೆದ ಬೆಳೆಗೆ ಬೆಂಬಲ ನೀಡುವಂತೆ ಕೇಳುತ್ತಿದ್ದೇವೆ.
ಇದನ್ನೂ ಓದಿ: ನಾಗರಿಕ ಸೇವಾ ಹುದ್ದೆಗಳ ನೇಮಕಾತಿ | 3 ವರ್ಷ ವಯೋಮಿತಿ ಸಡಿಲಿಕೆ | ರಾಜ್ಯ ಸರ್ಕಾರ ಆದೇಶ
ನಮ್ಮ ರೈತರ ಆದಾಯ ಹೆಚ್ಚು ಮಾಡದಿದ್ದರೆ, ನಮ್ಮ ರೈತರ ಸಂಖ್ಯೆ ಕಡಿಮೆಯಾಗುತ್ತದೆ. ಜೊತೆಗೆ ರೈತರು ಬಹುಬೆಳ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ರೈತರು ಮಾರುಕಟ್ಟೆ ಪದ್ಧತಿಯನ್ನು ಕೃಷಿ ಸಹಕಾರ ಸಂಘಗಳ ಮೂಲಕ ಮಾಡಬೇಕಾಗಿದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ ಕಲ್ಪನೆಯನ್ನು, ರೈತರ ಸಮಸ್ಯೆಗಳನ್ನು ರೈತರೇ ಪರಿಹಾರೋಪಾಯ ಮಾಡಿಕೊಂಡರೆ ಸಾಧ್ಯ ಎಂದು ನುಡಿದರು.
ಅಕ್ಕಡಿ ಬೇಸಾಯ ತಜ್ಞರಾದ ಅರಿವು ಪ್ರಭಾಕರ್ ಬಿ ಮಾತನಾಡಿ, ನಾನು ರೈತರ ಅನುಭವ ಎಂಬ ಸಂಸ್ಥೆ ಸ್ಥಾಪಿಸಿದ್ದೇನೆ. ಅಕ್ಷಯಪಾತ್ರೆಯ ರೂಪದಲ್ಲಿ 18 ಬೆಳೆಗಳನ್ನು ಅಕ್ಕಡಿ ಸಾಲುಗಳ ಮೂಲಕ ಬೆಳೆಯಬಹುದು. ಮಳೆಯ ಮುಖಾಂತರ ಈ ಬೆಳೆಗಳನ್ನು ಬೆಳೆಯಬಹುದು. ಬೆಳಗಾವಿಯನ್ನು ಬೆಳೆಕಾಳು ರಾಜ ಎನ್ನುತ್ತಾರೆ. ನಮ್ಮ ಪೂರ್ವಜರು ಮಾಡಿದ ನೈಸರ್ಗಿಕ ಬೇಸಾಯ ಪದ್ಧತಿಯಲ್ಲಿ ಬೇಸಾಯ ಮಾಡುವುದರಿಂದ ಪೌಷ್ಟಿಕಾಂಶಯುತವಾದ ಬೆಳೆಯನ್ನು ಬೆಳೆಯಬಹುದು ಎಂದರು.
ಹುಲಿಕೆರೆ ಕೃಷಿಕರಾದ ವಿಶ್ವೇಶ್ವರ ಸಜ್ಜನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ನಾರಾಣಾಪುರ, ಶಿವಮೊಗ್ಗ ಪಶುವೈದ್ಯಾಧಿಕಾರಿ ಡಾ. ಟಿ.ವಿ.ಗಿರೀಶ್ ಜಲತಜ್ಞರಾದ ಡಾ.ದೇವರಾಜರೆಡ್ಡಿ, ಮಹಮ್ಮದ್ ನೂರುಲ್ಲಾ, ಮಂಗಳಾ ಕಿರಣ್ ನೀಲಗುಂದ, ಹಾವೇರಿಯ ಸಿದ್ದನಗೌಡ ಪಾಟೀಲ್ ಮಾತನಾಡಿದರು.
ಇದನ್ನೂ ಓದಿ: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದೊಡ್ಡಕೆರೆ ಎಚ್.ಜಿ.ಮಂಜಪ್ಪ ಅಧಿಕಾರ ಸ್ವೀಕಾರ
ಗೋಕಾಕ್ ಶ್ರೀ ಶೂನ್ಯ ಸಂಪಾದನೆ ಮಠದ ಮುರುಘರಾಜೇಂದ್ರ ಸ್ವಾಮಿಗಳು, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಶ್ರೀ ವಚನಾನಂದ ಸ್ವಾಮೀಜಿ, ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ಲಿಂಗಾರೆಡ್ಡಿ, ರೈತಸಂಘದ ಅಧ್ಯಕ್ಷ ಬಡಗಲಪುರದ ನಾಗೇಂದ್ರ, ಸಂಗನಗೌಡ ಪಾಟೀಲ್, ಹೆಚ್.ಎನ್.ಸೋಮಶೇಖರಪ್ಪ, ಕೆ. ಚಿಕ್ಕಣ್ಣ, ಶಾಂತಅಶೋಕ್, ಧನಂಜಯ, ಕೆಸಿ ಹೊರಕೇರಪ್ಪ, ರೆಡ್ಡಿಹಳ್ಳಿ ವೀರಣ್ಣ, ಭೂತಯ್ಯ, ಸಿದ್ದರಾಮಪ್ಪ ಹಿರಿಯೂರು, ತಿಮ್ಮಯ್ಯ, ಬಸ್ತಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಳ್ಳಿ ರುದ್ರಸ್ವಾಮಿ, ಚಿಕ್ಕಪ್ಪನಹಳ್ಳಿ ಎನ್.ಜೆ.ಸಂತೋಷ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಳಗುಂದ ಸಮಗ್ರ ಕೃಷಿಕರಾದ ಮಂಗಳ ಕಿರಣ್ ನೀಲಗುಂದ, ರಾಜಶೇಖರ ನಿಂಬರಗಿ, ಕೊರಟಗೆರೆ ತಾಲೂಕು ಪಾತಗನಹಳ್ಳಿ ಎ.ಎಸ್.ನಟರಾಜ್, ಮಂಡ್ಯ ಜಿಲ್ಲೆ ಸಾತೇನಹಳ್ಳಿ ನೈಸರ್ಗಿಕ ಕೃಷಿಕಾರದ ಕುಮಾರಸ್ವಾಮಿ, ತಿಪಟೂರು ಜಾಬಘಟ್ಟ ಆರ್.ರಮೇಶ್, ಮಹಮದ್ ನೂರುಲ್ಲಾ ಇವರನ್ನು ಸನ್ಮಾನಿಸಲಾಯಿತು.
ಹಸುವಿಗೆ ಮೇವು ತಿನ್ನಿಸಿದರ ಮೂಲಕ ಸಾಕುಪ್ರಾಣಿಗಳ ಪ್ರದರ್ಶನವನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಿ ಕಳಸದರವರು ಉದ್ಘಾಟಿಸಿದರು. ವಿವಿಧ ತಳಿಗಳಾದ ಹಳ್ಳಿಕಾರು, ಅಮೃತ ಮಹಲ್, ಶಿಲಾರಿ ಸ್ಥಳೀಯ ಎತ್ತುಗಳು, ಜಾಫರ್, ಬಾಡಿ, ಮುರ ತಳಿಯ ಎಮ್ಮೆಗಳು, ಜರ್ಸಿ, ಮಲೆನಾಡಗಿಡ್ಡ ತಳಿಯ ಆಕಳುಗಳು, ನಂದಿ ದುರ್ಗದ ಮೇಕೆಗಳು, ಕೋಳಿ, ಕುದುರೆ ವಿವಿಧ ಗಿಳಿಗಳು ಪ್ರದರ್ಶನಗೊಂಡವು.
ಇದನ್ನೂ ಓದಿ: ಕೋಟೆ ಇತಿಹಾಸ ಸಾರುವಲ್ಲಿ ಪ್ರವಾಸಿ ಮಾರ್ಗದರ್ಶಿಗಳ ಪಾತ್ರ ಮುಖ್ಯ | ತಹಶೀಲ್ದಾರ್ ನಾಗವೇಣಿ
ಕೃಷಿ ಮತ್ತು ಕೈಗಾರಿಕಾ ಮೇಳದಲ್ಲಿ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ಇಂಧನ ಉತ್ಪನ್ನದ ಘಟಕ, ಅಮೃತ್ ಆರ್ಗ್ಯಾನಿಕ್ ಫರ್ಟಿಲೈಜರ್ಸ್, ವಾಹಿನಿಪೈಪ್ಸ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಅಭಿವೃದ್ಧಿ ಉದ್ಯಮಶೀಲತಾ ಅಭಿವೃದ್ಧಿ ಇಲಾಖೆ, ರೇಷ್ಮೆ ಇಲಾಖೆ, ಚಳ್ಳಕೆರೆಯ ಹೂವಿನ ಹಾರ ಹಾಗೂ ರೊಟ್ಟಿ ಉತ್ಪಾದನೆ, ಸೆಲ್ಕೋ ಸೋಲಾರ್ ಲೈಟಿಂಗ್ ವಿದ್ಯುತ್ ಉತ್ಪಾದನೆ, ಕಾಟನ್ ಬ್ಯಾಗು ಉತ್ಪಾದನೆ ಮಾರಾಟ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕ¯ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಿವಮೊಗ್ಗದ ಅಂಜನಾ ಆರ್ಗಾನಿಕ್ಸ್, ಚಿತ್ರದುರ್ಗದ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆ, ಕಡೂರಿನ ಅಡಿಕೆ ಬೇಸಾಯ, ತರೀಕೆರೆಯ ಸ್ವಸಹಾಯ ಸಂಘದ ತರಕಾರಿಬೀಜ ಉತ್ಪಾದನೆ, ಶ್ರೀ ಕಲ್ಲೇಶ್ವರ ಕಾಯರ್ ಇಂಡಸ್ಟ್ರೀಸ್ ಅಂಡ್ ಆರ್ಗಾನಿಕ್ ಮ್ಯಾನುಫ್ಯಾಕ್ಚರರ್ಸ್, ಬಸವೇಶ್ವರ ವೈದ್ಯಕೀಯ ಆರೋಗ್ಯ ತಪಾಸಣೆಯ ಮಾಹಿತಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಮಗ್ರ ಮಕ್ಕಳ ರಕ್ಷಣೆ, ಸಾಮಾಜಿಕ ಅರಣ್ಯ ವಿಭಾಗ ಜಿಲ್ಲಾ ಪಂಚಾಯತ್, ಚಿತ್ರದುರ್ಗ ಜಲಸಂಪನ್ಮೂಲ ಇಲಾಖೆ ವಿಶ್ವೇಶ್ವರಯ್ಯ ಜಲನಿಗಮ ಮಂಡಳಿ, ಭದ್ರಾ ಮೇಲ್ದಂಡೆ ಯೋಜನೆ, ವಾಹಿನಿ ಪಾಲಿಟೆಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಶ್ರೀದೇವಿ ಸ್ತ್ರೀಶಕ್ತಿ ಮಹಿಳಾ ಸಂಘ ಕೃಷಿ ಮತ್ತು ವಸ್ತು ಪ್ರದರ್ಶನ, ತಾಲೂಕು ಪಂಚಾಯತ್ ಸಿರಿಧಾನ್ಯ ವಸ್ತುಗಳ ಮಾಹಿತಿ, ಸಹಾಯಕ ಕೃಷಿ ನಿರ್ದೇಶನಾಲಯ ಚಿತ್ರದುರ್ಗ, ವರ್ಷ ಕೃಷಿ ಉಪಕರಣಗಳು ಚಿತ್ರದುರ್ಗ ಪ್ರದರ್ಶನಗೊಂಡವು.
ಕೃಷಿ ಮತ್ತು ಕೈಗಾರಿಕ ವಸ್ತು ಪ್ರದರ್ಶನದಲ್ಲಿ ಕೃಷಿ ಇಲಾಖೆ, ಚಿತ್ರದುರ್ಗ ಪ್ರಥಮ, ತೋಟಗಾರಿಕಾ ಇಲಾಖೆ ಚಿತ್ರದುರ್ಗ ದ್ವಿತೀಯ, ಭದ್ರಾ ಮೇಲ್ದಂಡೆ ಯೋಜನೆ ತೃತೀಯ, ಜಿಲ್ಲಾ ಪಂಚಾಯತ್ ಮಹಿಳಾ ಸಂಘ ಸಮಾಧಾನಕರ ಬಹುಮಾನಗಳನ್ನು ಪಡೆದವು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
