Connect with us

    Hosadurga: ದೇವಸ್ಥಾನದಲ್ಲಿ ಗಲಾಟೆ | ಪರಸ್ಪರ ದೂರು ದಾಖಲು

    ಹೊಸದುರ್ಗ

    Hosadurga: ದೇವಸ್ಥಾನದಲ್ಲಿ ಗಲಾಟೆ | ಪರಸ್ಪರ ದೂರು ದಾಖಲು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 27 AUGUST 2024

    ಹೊಸದುರ್ಗ: ತಾಲೂಕಿನ ಲಕ್ಕಿಹಳ್ಳಿ ಗ್ರಾಮದಲ್ಲಿ ದೇವರ ಹಲಗೆ ಸೇವೆ ವಿಚಾರವಾಗಿ ಗುಂಪು ಘರ್ಷಣೆ ನಡೆದಿದ್ದು, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

    ಹಲಗೆ ಸೇವೆ ವಿಚಾರವಾಗಿ ಒಂದು ಗುಂಪು ಹಲ್ಲೆ ನಡೆಸಿದ ಎಂದು ಸೋಮಶೇಖರ್ ಎಂಬುವವರು ಹೊಸದುರ್ಗ (Hosadurga) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ತೀವ್ರ ಹಲ್ಲೆಯಿಂದ ಹೊಸದುರ್ಗ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮಶೇಖರ್ ವಿರುದ್ಧ ಲಕ್ಕಮ್ಮ ಎಂಬುವವರು ಪ್ರತಿ ದೂರು ದಾಖಲಿಸಿದ್ದಾರೆ.

    ಇದನ್ನೂ ಓದಿ: ಈ ರಾಶಿಯವರಿಗೆ ಇಂದು ಅದೃಷ್ಟದ ದಿನ

    ದೇವಸ್ಥಾನದಲ್ಲಿ ಗಲಾಟೆ ನಡೆಯುತ್ತಿರುವ ವೀಡಿಯೋ ಸೋಷಿಯಲ್ದ ಮೀಡಿಯಾಗಳಲ್ಲಿ ವೈರಲ್ ಆಗಿದೆ.

    ಗ್ರಾಮದ ಶ್ರೀ ಮುದ್ದುಲಿಂಗೇಶ್ವರ ದೇವರ ವೀರಗಾರರ ಪಟ್ಟವನ್ನು 20 ವರ್ಷಗಳ ಹಿಂದೆಯೇ ಕೊಟ್ಟಿದ್ದು, ಅದರಂತೆ ದೈನಂದಿನ ಪೂಜೆ ಮಾಡಿಕೊಂಡು ಬರಲಾಗುತ್ತಿದೆ.

    ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀಧಿಗೆ ನಿರ್ಧಾರ

    ಭಾನುವಾರ ರಾತ್ರಿ ದೇವರ ಪೂಜೆ ಮುಗಿಸಿ ಹಲಗೆ ಸೇವೆ ಮಾಡಲು ಮುಂದಾದಗ ಒಂದು ಗುಂಪು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದೆ ಎಂದು ಸೋಮಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಚನ್ನಗಿರಿ ಶಿವಮೊಗ್ಗ ಮಾರುಕಟ್ಟೆಗಳ ಅಡಿಕೆ ರೇಟ್

    ದೇವಸ್ಥಾನದ ಕಟ್ಟುಪಾಡುಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದರಿಂದ ಸೋಮಶೇಖರ್ ಅವರಿಗೆ ಹಲಗೆ ಸೇವೆ ಮಾಡಲು ಅವಕಾಶ ಇಲ್ಲ. ಈ ಬಗ್ಗೆ ಅನೇಕ ಸಲ ಹೇಳಿದರೂ ಕೇಳದ ವಾಗ್ವಾದ ಮಾಡುತ್ತಿದ್ದಾರೆ. ಪ್ರಶ್ನಿಸಿದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸೋಮಶೇಖರ್ ವಿರುದ್ಧ ಲಕ್ಕಮ್ಮ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    2018ರಲ್ಲಿ ಗ್ರಾಮದ ಎರಡು ಸಮುದಾಯಗಳ ನಡುವೆ ದೇವರ ಸೇವೆ ವಿಚಾರವಾಗಿ ನಡೆದ ಗಲಾಟೆ ನಡೆದು ಪ್ರಕರಣ ನ್ಯಾಯಾಲಯದಲ್ಲಿದೆ. ಇದೇ ವಿಚಾರವಾಗಿ ಪದೇ ಪದೇ ಗುಂಪು ಗಲಭೆ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಮಧ್ಯೆ ಪ್ರವೇಶಿಸಬೇಕು ಎಂದು ಗ್ರಾಮದ ಇತರೆ ವರ್ಗಗಳ ಕೋರಿಕೆಯಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top