
CHITRADURGA NEWS | 05 SEPTEMBER 2025
ಹೊಳಲ್ಕೆರೆ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸುಸಂಸ್ಕøತರನ್ನಾಗಿಸಿ, ಉತ್ತಮ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಇದನ್ನೂ ಓದಿ: ಗುರುಭವನ ನಿರ್ಮಾಣಕ್ಕೆ ರೂ.2 ಕೋಟಿ | ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಡಿ.ಸುಧಾಕರ್ ಭರವಸೆ

ಸಂವಿಧಾನ ಸೌಧದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನದ ಪ್ರಯುಕ್ತ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಗುರುವಿನ ಸ್ಥಾನ ಅತ್ಯಂತ ದೊಡ್ಡದು. ಅಕ್ಷರ ಕಲಿಸಿದ ಶಿಕ್ಷಕರುಗಳನ್ನು ಯಾವತ್ತು ಮರೆಯಬಾರದು. ನನಗೆ ನಾಲ್ಕು ಅಕ್ಷರ ಕಲಿಸಿ ಶಿಕ್ಷಕರು ಸಂಸ್ಕಾರ ನೀಡಿದ್ದರಿಂದ ಶಾಸಕನಾಗಿದ್ದೇನೆ. ಶಿಕ್ಷಕರು ಸದೃಢ ಸಮಾಜ ನಿರ್ಮಾಣ ಮಾಡಿದರೆ ಸಮಾಜಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ನನ್ನ ಕರ್ತವ್ಯ. ಯಾವುದೇ ಒಂದು ರಾಷ್ಟ್ರ ನಾಶವಾಗಬೇಕಾದರೆ ಯುದ್ದವೇ ಆಗಬೇಕೆಂದಿಲ್ಲ. ಶಿಕ್ಷಣದಿಂದ ವಂಚಿತವಾದರೆ ಸಾಕು. ತನ್ನಷ್ಟಕ್ಕೆ ತಾನೆ ಅದೋಗತಿಗಿಳಿಯುತ್ತದೆ ಎಂದು ಶಿಕ್ಷಣದ ಮಹತ್ವ ತಿಳಿಸಿದರು.
ಶಾಲೆಗೆ ಬರುವ ಮಕ್ಕಳನ್ನು ನಿಮ್ಮ ಸ್ವಂತ ಮಕ್ಕಳೆಂದು ಭಾವಿಸಿ ಪಾಠ ಹೇಳಿಕೊಡಿ. ಪ್ರತಿ ವರ್ಷ ಎರಡು ಲಕ್ಷ ಹದಿನೈದು ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ. ತೆರಿಗೆ ಬರುವುದು ಸರ್ಕಾರಕ್ಕೆ ಕೇವಲ ಒಂದು ಲಕ್ಷ ಎಂಟು ಸಾವಿರ ಕೋಟಿ ರೂ. ಮಕ್ಕಳಿಗೆ ಶೂ, ಸಾಕ್ಸ್, ಮಧ್ಯಾಹ್ನದ ಬಿಸಿಯೂಟ, ಬಾಳೆಹಣ್ಣು, ಮೊಟ್ಟೆ, ಪಠ್ಯಪುಸ್ತಕಗಳನ್ನು ಸರ್ಕಾರ ಕೊಡುತ್ತಿದೆ. ಎಲ್ಲವನ್ನು ಬಳಸಿಕೊಂಡು ಶಿಕ್ಷಣವಂತರಾಗುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಮಕ್ಕಳಿಗೆ ಕರೆ ನೀಡಿದರು.
ಇದನ್ನೂ ಓದಿ: ಸಡಗರದ ಈದ್ಮಿಲಾದ್ ಹಬ್ಬ ಆಚರಣೆ | ಮುಸ್ಲಿಂ ಬಾಂಧವರಿಂದ ಮೆರವಣಿಗೆ
ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶರಾದ ಹೆಚ್.ಬಿಲ್ಲಪ್ಪ ಮಾತನಾಡಿ, ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ಎಲ್ಲರ ಮನದಲ್ಲಿ ಬಿತ್ತುವವನೆ ನಿಜವಾದ ಗುರು. ಅದಕ್ಕಾಗಿ ಗುರುವಿಗೆ ಪವಿತ್ರವಾದ ಸ್ಥಾನವಿದೆ.
ಶಿಕ್ಷಣದಿಂದ ವಂಚಿತವಾಗುವ ಸಮಾಜದಲ್ಲಿ ವೈದ್ಯರು, ವಕೀಲರು, ನ್ಯಾಯಾಧೀಶರು, ಉತ್ತಮ ಆಡಳಿತ ನೀಡುವ ಜನಪ್ರತಿನಿಧಿಗಳಿರಲು ಸಾಧ್ಯವಿಲ್ಲ. ಶ್ರೇಷ್ಟ ಕವಿಗಳು, ಸಾಧು ಸಂತರು ಇಲ್ಲದಿದ್ದರೆ ಸಮಾಜ ಅಧಃಪತನಕ್ಕೆ ಇಳಿಯುತ್ತದೆ. ಯಾವುದೇ ಒಂದು ದೇಶ ನಾಶವಾಗಬೇಕಾದರೆ ಯುದ್ದ ಬೇಕಾಗಿಲ್ಲ. ಶಿಕ್ಷಣ ವ್ಯವಸ್ಥೆ ಹಾಳಾದರೆ ಸಾಕು ಎಂದರು.
ಶಿಕ್ಷಕನ ವೃತ್ತಿ ಅತ್ಯಂತ ಪವಿತ್ರವಾದುದು. ರಾಷ್ಟ್ರ ಸೇವೆಗೆ ಅರ್ಪಿಸಿಕೊಂಡಿದ್ದೇನೆಂಬ ಭಾವನೆ ಶಿಕ್ಷಕನಲ್ಲಿರಬೇಕು. ಯಾವ ಸಮಾಜದಲ್ಲಿ ಶಿಕ್ಷಕರ ಮನಸ್ಸು ಆರೋಗ್ಯವಾಗಿರುತ್ತದೋ ಅಂತಹ ಸಮಾಜ ಬಲಿಷ್ಠವಾಗಿರುತ್ತದೆ. ಯಾದ್ವಾತದ್ವ ನಡವಳಿಕೆಯಿದ್ದರೆ ಕಷ್ಟವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತದಾನದ ಹಕ್ಕಿದೆ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಯೋಗ್ಯರಿಗೆ ಮತ ಚಲಾಯಿಸಬೇಕೆಂದರೆ ಮೊದಲು ಶಿಕ್ಷಣವಂತರಾಗಬೇಕು.
ವ್ಯಕ್ತಿತ್ವ ನಿರ್ಮಾಣ, ಆತ್ಮವಿಶ್ವಾಸ ಮೂಡಿಸುವಂತ ಶಿಕ್ಷಣ ಇಂದಿನ ಸಮಾಜಕ್ಕೆ ಬೇಕಾಗಿದೆ. ಯಾವ ಮಕ್ಕಳಲ್ಲಿ ಏನು ಪ್ರತಿಭಯಿದೆ ಎನ್ನುವುದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದು ನುಡಿದರು.
ಇದನ್ನೂ ಓದಿ: ಶಿಕ್ಷಕರ ದಿನಾಚರಣೆ ವಿಶೇಷ ಲೇಖನ | ಅರಿವೆಂಬ ರವಿಯು ಮೂಡಲು | ಗೀತಾ ಭರಮಸಾಗರ
ಪುರುಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಹೊಳಲ್ಕೆರೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಶಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎನ್.ಶಿವಮೂರ್ತಿ, ಪುರಸಭೆ ಸದಸ್ಯರುಗಳಾದ ಪಿ.ಹೆಚ್.ಮುರುಗೇಶ್, ಪಿ.ಆರ್.ಮಲ್ಲಿಕಾರ್ಜುನ, ಡಿ.ಸಿ.ಮೋಹನ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಲೋಕೇಶ್,
ತಹಶೀಲ್ದಾರ್ ಕೊರಲಗುಂದಿ ವಿಜಯಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಸೇರಿದಂತೆ ತಾಲ್ಲೂಕಿನ ಎಲ್ಲಾ ಶಿಕ್ಷಕರುಗಳು ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
