Connect with us

    ಕೆರೆ ಏರಿ ಮೇಲೆ ಲಾರಿ ಪಲ್ಟಿ | ಮದ್ಯದ ಬಾಟಲ್‌ಗಳು ಚೆಲ್ಲಾಪಿಲ್ಲಿ

    accident

    ಮುಖ್ಯ ಸುದ್ದಿ

    ಕೆರೆ ಏರಿ ಮೇಲೆ ಲಾರಿ ಪಲ್ಟಿ | ಮದ್ಯದ ಬಾಟಲ್‌ಗಳು ಚೆಲ್ಲಾಪಿಲ್ಲಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 10 JUNE 2024
    ಚಿತ್ರದುರ್ಗ:‌ ಕೆರೆಯ ಏರಿ ಮೇಲೆ ಲಾರಿಯೊಂದು ಪಲ್ಟಿಯಾಗಿ ಮದ್ಯದ ಬಾಟಲ್‌ಗಳು ಚೆಲ್ಲಾಪಿಲ್ಲಿಯಾದ ಘಟನೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಶಿವನ ಕೆರೆ ಏರಿಯ ಮೇಲೆ ಲಾರಿ ಪಲ್ಟಿಯಾಗಿದ್ದು, ₹33 ಲಕ್ಷ ಮೌಲ್ಯದ ಮದ್ಯ ನಾಶವಾಗಿದೆ. ಮೈಸೂರಿನ ಬನ್ನೂರು ಸಮೀಪದ ಬಿಯರ್‌ ಫ್ಯಾಕ್ಟರಿಯಿಂದ 1,500 ಬಾಕ್ಸ್‌ ಬಿಯರ್‌ ಬಾಟಲ್‌ಗಳನ್ನು ಲಾರಿಯಲ್ಲಿ ತುಂಬಿಕೊಂಡು ಹುಬ್ಬಳ್ಳಿಗೆ ಸಾಗಿಸಲಾಗುತ್ತಿತ್ತು.

    ಕ್ಲಿಕ್ ಮಾಡಿ ಓದಿ: ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಮಾಣವಚನ | ಕೋಟೆನಾಡಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

    ಭಾನುವಾರ ನಸುಕಿನ 3.30ರಲ್ಲಿ ಕೆರೆ ಏರಿಯ ಮೇಲೆ ಕಾಡುಪ್ರಾಣಿಯೊಂದು ಅಡ್ಡ ಬಂದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.

    ಕ್ಲಿಕ್ ಮಾಡಿ ಓದಿ: ಹತ್ತಿ ಬೆಳೆಗಾರರ ಜಾಗೃತಿ ಸಮಾವೇಶ | ಬೆಳೆಯ ಬಗ್ಗೆ ವೈಜ್ಞಾನಿಕ ಮಾಹಿತಿ

    ಲಾರಿ ಪಲ್ಟಿಯಾದ ರಭಸಕ್ಕೆ ಮದ್ಯದ ಬಾಕ್ಸ್‌ಗಳು ಕೆಳಗೆ ಬಿದ್ದಿದ್ದು, ಶೇ 70ರಷ್ಟು ಬಾಟಲ್‌ಗಳು ಒಡೆದು ಹೋಗಿವೆ. ವಿಷಯ ತಿಳಿದ ಪೊಲೀಸರು ಲಾರಿ ಪಲ್ಟಿಯಾಗಿದ್ದ ರಸ್ತೆಯಲ್ಲಿ ವಾಹನ ಸಂಚಾರ ತಡೆದ ಜನರನ್ನು ಹತ್ತಿರಕ್ಕೆ ಬಿಡಲಿಲ್ಲ. ಇದರಿಂದ ಶೇ 30ರಷ್ಟು ಮದ್ಯ ಉಳಿದಿದೆ. ಲಾರಿ ಚಾಲಕ ಅರ್ಫತ್‌ಗೆ ಸಣ್ಣ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top