Connect with us

    ಸೇನೆಯಿಂದ ನಿವೃತ್ತನಾಗಿ ಬಂದ ಯೋಧನಿಗೆ ತಾಳ್ಯ ಗ್ರಾಮಸ್ಥರ ಅದ್ದೂರಿ ಸನ್ಮಾನ

    ಸೇನೆಯಿಂದ ನಿವೃತ್ತನಾಗಿ ಬಂದ ಯೋಧನಿಗೆ ತಾಳ್ಯ ಗ್ರಾಮಸ್ಥರ ಅದ್ದೂರಿ ಸನ್ಮಾನ

    ಹೊಳಲ್ಕೆರೆ

    ಸೇನೆಯಿಂದ ನಿವೃತ್ತನಾಗಿ ಬಂದ ಯೋಧನಿಗೆ ತಾಳ್ಯ ಗ್ರಾಮಸ್ಥರ ಅದ್ದೂರಿ ಸನ್ಮಾನ

    ಸೇನೆಯಿಂದ ನಿವೃತ್ತನಾಗಿ ಬಂದ ಯೋಧನಿಗೆ ತಾಳ್ಯ ಗ್ರಾಮಸ್ಥರ ಅದ್ದೂರಿ ಸನ್ಮಾನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 27 OCTOBER 2024

    ಹೊಳಲ್ಕೆರೆ: 24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ಷಣ್ಮುಖಪ್ಪ ಅವರಿಗೆ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮಸ್ಥರದಿಂದ ಅದ್ದೂರಿಯಾಗಿ ಮೆರವಣಿಗೆ ಮಾಡಿ, ಸನ್ಮಾನಿಸಲಾಯಿತು.

    ಕ್ಲಿಕ್ ಮಾಡಿ ಓದಿ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣಾ ವೇಳಾಪಟ್ಟಿ ಪ್ರಕಟ | ನವೆಂಬರ್ 16 ರಂದು ಚುನಾವಣೆ

    ಸೇವೆಯಿಂದ ನಿವೃತ್ತಿ ಹೊಂದಿರುವ ಸೈನಿಕ ಪಿ.ಷಣ್ಮುಖಪ್ಪ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು, ಇದೀಗ ಸೇವೆಯಿಂದ ನಿವೃತ್ತಿಯಾಗಿ ಸ್ವಗ್ರಾಮ ತಾಳ್ಯಕ್ಕೆ ವಾಪಸ್ ಆಗುತ್ತಿದ್ದಂತೆ ಗ್ರಾಮಸ್ಥರು ಹೂ ಮಾಲೆ ಹಾಕಿ, ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದ್ದಾರೆ.

    ಬಳಿಕ ಶಾಲಾ ಆವರಣದಲ್ಲಿ ಸನ್ಮಾನ ಮಾಡುವ ಮೂಲಕ ಸೇವೆ ಸಲ್ಲಿಸಿದ ಮಾಜಿ ಯೋಧನಿಗೆ ಗೌರವ ಸಲ್ಲಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: ರೈತ ಸಂಘದ ರಾಜ್ಯಾಧ್ಯಕ್ಷರಾಗಿ ಬಡಗಲಪುರ ನಾಗೇಂದ್ರ ಪುನರಾಯ್ಕೆ | ಚಿತ್ರದುರ್ಗದಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನ

    ಈ ವೇಳೆ ಬಿಜೆಪಿ ಯುವ ಮುಖಂಡ ರಘುಚಂದನ್, PSI ಕಾಂತರಾಜ್, PU ಕಾಲೇಜ್ ಅಧ್ಯಕ್ಷ ನಟರಾಜ್, ಟಿ.ಹನುಮಂತಪ್ಪ, ಸದಾಶಿವಪ್ಪ, ಚನ್ನಬಸಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ್ ಸೇರಿ ಹಲವು ಗ್ರಾಮಸ್ಥರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಹೊಳಲ್ಕೆರೆ

    To Top