
CHITRADURGA NEWS | 12 OCTOBER 2025
ಹೊಸದುರ್ಗ: ಬಸವಣ್ಣ ಅಂತಹ ಆದರ್ಶ ಪುರುಷರ ದಾರಿಯಲ್ಲಿ ಸಂಚರಿಸುವ ಮೂಲಕ ಬದುಕನ್ನು ಹಸನಾಗಿಸಲು ಸುಜ್ಞಾನ ಸಂಗಮವನ್ನು ಆಯೋಜಿಸಿದ್ದೇವೆ ಎಂದು ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಹೇಳಿದರು.
ಇದನ್ನೂ ಓದಿ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ | ಅರ್ಜಿ
ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ 23ನೇ ವರ್ಷದ 10ನೇ ತಿಂಗಳ ಸುಜ್ಞಾನ-ಸಂಗಮ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು.
ಬಸವಣ್ಣ ದಲಿತೋದ್ಧಾರಕ ಸಮಾನತೆಯ ಹರಿಕಾರ ಸಹಬಾಳ್ವೆಯ ಪ್ರತೀಕ ಸೌಹಾರ್ದತೆಯ ಸಂಕೇತ ಕಾಯಕವೇ ಕೈಲಾಸ ಎಂಬ ಮಂತ್ರವನ್ನು ನೀಡಿದ ಕಾರುಣಿಕ ಪುರುಷ ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬ ತತ್ವ ಬೋಧಿಸಿದ ತತ್ವಜ್ಞಾನಿ ಮಹಿಳಾ ಸಬಲೀಕರಣದ ಕಾರಣಿಕರ್ತ ಸರ್ವರು ಸಮಾನರು ಎಂದು ಸಾರಿದ ಸಮ ಸಮಾಜದ ಕನಸನ್ನು ನನಸು ಮಾಡಿದ ನುಡಿದಂತೆ ನಡೆದು ತೋರಿದ ಅದ್ಭುತ ದೇವಮಾನವ ಮಾನವನನ್ನು ಮಹದೇವನನ್ನಾಗಿಸಿದ ಮರಣವನ್ನು ಮಹಾನವಮಿ ಎಂದು ಭೋದಿಸಿದ ಪ್ರಬುದ್ಧ ಚಿಂತಕ ಎಂದರು.
ಸುಜ್ಞಾನ-ಸಂಗಮ ಕಾರ್ಯಕ್ರಮ ಮನಸ್ಸು ಮನಸುಗಳನ್ನು ಬೆರೆಯುವ ಜಾತಿ ವೈಷ್ಣವ್ಯಗಳನ್ನು ದೂರ ಮಾಡಿ ಜಾತಿ ಶ್ರೇಷ್ಠ ಎಂಬ ಮನಸ್ಥಿತಿಯನ್ನು ಬದಲಾಯಿಸಿ, ಮಾನವ ಶ್ರೇಷ್ಠ ಎಂಬ ತತ್ವವನ್ನು ಸಾರಲು ಕಳೆದ 23 ವರ್ಷಗಳಿಂದ ಸುಜ್ಞಾನ ಸಂಗಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಇದರ ಲಾಭ ಮಠಕ್ಕಲ್ಲ ಭಕ್ತರಿಗೆ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಸರಳ ವಿವಾಹ | ಪ್ರೋತ್ಸಾಹಧನಕ್ಕೆ ಅಲ್ಪಸಂಖ್ಯಾತರಿಂದ ಅರ್ಜಿ
ವಾಲ್ಮೀಕಿ ಮಹರ್ಷಿಗಳು ಸಾಮಾನ್ಯನು ಅಸಮಾನ್ಯನಾಗಬಲ್ಲ ಎಂಬ ಶ್ರೇಷ್ಠ ಸಂದೇಶವನ್ನು ಜಗತ್ತಿಗೆ ಸಾರಿ. ಜಾತಿಯಿಂದ ವ್ಯಕ್ತಿಯನ್ನು ಗುರುತಿಸಬಾರದು ಎಂಬ ತತ್ವವನ್ನು ತಮ್ಮ ವಿಚಾರಗಳ ಮೂಲಕ ಬರಹಗಳ ಮೂಲಕ ಸಾಧಿಸಿ ತೋರಿದ ಮಹಾನ್ ರಾಸಾಯನಿಕ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗೂಳಿಹಟ್ಟಿ ಹಾಲ ಸಿದ್ದಪ್ಪ ಮಾತನಾಡಿ, ಸುಜ್ಞಾನ ಸಂಗಮ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಮನಸು ಮನಸುಗಳನ್ನು ಬೆಸೆಯುವ ಸೌಹಾರ್ದ ವಾತಾವರಣವನ್ನು ನಿರ್ಮಾಣ ಮಾಡುವ ಅನುಭವ ಮಂಟಪದ ಮಾದರಿಯಲ್ಲಿ ಸರ್ವ ಜನಾಂಗದ ಭಕ್ತರು ಭಾಗವಹಿಸಿ ಸುಜ್ಞಾನವನ್ನು ಸವಿತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ.
ಶಾಂತವೀರ ಶ್ರೀಗಳು ಕೇವಲ ಬೋಧಕರಲ್ಲ, ಕಷ್ಟ ಎಂದು ಬರುವ ಭಕ್ತರ ಕಷ್ಟವನ್ನು ನೀಗಿಸುವ ದೇವರಾಗಿ ಧೈರ್ಯ ತುಂಬುವ ವೀರ ಸನ್ಯಾಸಿಯಾಗಿ ನಮ್ಮ ಸಮಾಜಕ್ಕೆ ಸಿಕ್ಕಿರುವುದು ಸಮಾಜದ ಪುಣ್ಯವೇ ಸರಿ ಎಂದು ಭಾವಿಸುತ್ತೇವೆ. ಗುರುಗಳ ಆಜ್ಞೆಯಂತೆ ನಾವು ಕೂಡ ಜಾತ್ಯತೀತ ಮನೋಭಾವನೆಯನ್ನು ಬೆಳೆಸಿಕೊಂಡು ಸರ್ವ ಜನಾಂಗವನ್ನು ನಮ್ಮವರೆಂದು ಭಾವಿಸಿ, ಬದುಕುತ್ತೇವೆ ಎಂದು ತಿಳಿಸಿದರು.
ಹೊಸದುರ್ಗ ಕಬ್ಬಳ ಉದ್ಯಮಿ ಸರ್ಜ್ಞಾನೇಶ್ ಮಾತನಾಡಿ, ಹೊಸದುರ್ಗದಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ಹೊಸತನಕ್ಕೆ ನಾಂದಿ ಹಾಡುವವರು ಶಾಂತವೀರ ಶ್ರೀಗಳು. ಅವರ ಹೊಸತನದ ಮತ್ತು ಹೊಸ ಆಲೋಚನೆಗಳ ಮೂಲಕ ಯುವ ಉತ್ಸಾಹಿಗಳಿಗೆ ಪ್ರೇರಣದಾಯಕವಾಗಿದ್ದಾರೆ ಎಂದರು.
ಸಾಗರ ಕನ್ನಡ ಉಪನ್ಯಾಸಕರು ಹಾಗೂ ಲೇಖಕರಾದ ಡಾ.ಸರ್ಫ್ರಾಜ್ ಚಂದ್ರಗುತ್ತಿ ವಚನಸಾಹಿತ್ಯ ಹಾಗೂ ಮಹಿಳೆ ವಿಷಯ ಕುರಿತು ಉಪನ್ಯಾಸ ನೀಡಿದರು.
ಇದನ್ನೂ ಓದಿ: ವಿವಿ ಸಾಗರ ಜಲಾಶಯ ಕೊಡಿಗೆ ಕ್ಷಣ ಗಣನೆ | ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚನೆ
ಜಾನಕಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಹಾಂತೇಶ್ ದೊಡ್ಡಘಟ್ಟ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶ್ರೀ ಸಂಗಮೇಶ್ವರ ಸಮುದಾಯ ಭವನ ಸಮಿತಿ, ಶ್ರೀ ಸಂಗಮೇಶ್ವರ ನೌಕರ ಸಂಘ, ಶ್ರೀ ಸಂಗಮೇಶ್ವರ ಯುವ ವೇದಿಕೆ, ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘ, ಶಾಂತವೀರಶ್ರೀ ಸೌಹಾರ್ದ ಪತಿನ ಸಹಕಾರ ಸಂಘ, ಹೊಸದುರ್ಗ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
