By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಎಚ್.ಡಿ.ಪುರ | ಮಾರ್ಚ್ 13 ರಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಎಚ್.ಡಿ.ಪುರ | ಮಾರ್ಚ್ 13 ರಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ

ಹೊಳಲ್ಕೆರೆ

ಎಚ್.ಡಿ.ಪುರ | ಮಾರ್ಚ್ 13 ರಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ

News Desk Chitradurga News
Last updated: 21 February 2025 19:15
News Desk Chitradurga News
4 months ago
Share
Decision to build a new chariot for Lakshminasarasimhaswamy of HDpura
ಎಚ್.ಡಿ.ಪುರದ ಲಕ್ಷ್ಮೀನಸರಸಿಂಹಸ್ವಾಮಿಗೆ ಹೊಸ ರಥ ನಿರ್ಮಾಣಕ್ಕೆ ನಿರ್ಧಾರ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 21 FEBRUARY 2025

ಹೊಳಲ್ಕೆರೆ: ತಾಲೂಕಿನ ಎಚ್.ಡಿ.ಪುರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ 6 ರಿಂದ 16 ರವರೆಗೆ ನಡೆಯಲಿದೆ. ಮಾರ್ಚ್ 13 ರಂದು ಬ್ರಹ್ಮ ರಥೋತ್ಸವ ಜರುಗಲಿದೆ.

Also Read: ನಂದಿ ರಥಯಾತ್ರೆ | ಹಸು ಇದ್ದ ಮನೆಗೆ ವಾಸ್ತು ಬೇಕಾಗಿಲ್ಲ | ಕುಮಾರಸ್ವಾಮಿ

ಜಾತ್ರಾ ಪೂರ್ವಭಾವಿ ಸಭೆ ಇಂದು ದೇವಸ್ಥಾನದಲ್ಲಿ ಹೊಳಲ್ಕೆರೆ ತಹಸಿಲ್ದಾರ್ ಬಿ.ಬಿ.ಫಾತಿಮಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಬ್ರಹ್ಮ ರಥೋತ್ಸವ ಜರುಗುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ, ಎಲ್ ಸಿ.ಡಿ ಟಿವಿಗಳನ್ನು ಆಯೋಜಿಸಬೇಕು. ದೇವಸ್ಥಾನದ ಒಳ ಆವರಣದಲ್ಲಿ ಸ್ವಚ್ಛತೆಗಾಗಿ ಕಸದ ಬುಟ್ಟಿ, ಸುತ್ತಲೂ ಶಾಮಿಯಾನ, ಲೈಟಿಂಗ್ ವ್ಯವಸ್ಥೆ ಮಾಡಬೇಕು ಎಂದು ತಹಸಿಲ್ದಾರ್ ಬಿ.ಬಿ.ಫಾತಿಮಾ ತಿಳಿಸಿದರು.

ದೇವರ ದರ್ಶನಕ್ಕಾಗಿ ಬ್ಯಾರಿಗೇಡ್, ಕೆಇಬಿ ಇಲಾಖೆಯವರು ಉತ್ಸವದ ಬೀದಿಗಳಲ್ಲಿ ಅಡ್ಡ ಇರುವ ಲೈನ್ ಗಳನ್ನು ಸ್ಥಳಾಂತರ ಮಾಡಿ, ಹೆಚ್ಚುವರಿ ಯಾಗಿ ಒಂದು ಟಿಸಿ ಇರಬೇಕು.

Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?

ಜಾತ್ರಾ ಸಂದರ್ಭದಲ್ಲಿ ಭಕ್ತಾದಿಗಳಿಗೆ ತೊಂದರೆಯಾಗದಂತೆ ವಿದ್ಯುತ್ ನೀಡಬೇಕು. ಭಕ್ತರು ಬಿಡಾರದ ಹತ್ತಿರ ವಿದ್ಯುತ್ ಸಮಸ್ಯೆ ಉಂಟಾಗದಂತೆ ಅಲ್ಲಿ ಲೈನ್ ಮ್ಯಾನ್ ಗಳನ್ನು ನಿಯೋಜಿಸಬೇಕು. ಗ್ರಾಮವನ್ನು ಸಂಪೂರ್ಣವಾಗಿ ಸ್ವಚ್ಛವಾಗಿರುವಂತೆ ಗ್ರಾಮ ಪಂಚಾಯಿತಿಯವರು ನೋಡಿಕೊಳ್ಳಬೇಕು.

ನೀರಿನ ವ್ಯವಸ್ಥೆಗಾಗಿ ಟ್ಯಾಂಕರ್ ಗಳ ವ್ಯವಸ್ಥೆ ಮಾಡಿಕೊಳ್ಳಬೇಕು, ಉತ್ಸವದ ಬೀದಿಗಳನ್ನು ಸ್ವಚ್ಛಗೊಳಿಸಬೇಕು. ಎಲ್ಲಾ ಬೀದಿ ದೀಪಗಳನ್ನು ಸರಿಪಡಿಸಿ ಸುಸಜ್ಜಿತವಾದ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಆರೋಗ್ಯ ಅಧಿಕಾರಿಗಳು ಹೆಚ್ಚುವರಿಯಾಗಿ ಸಿಬ್ಬಂದಿಗಳು ಹಾಗೂ ಔಷಧಿಗಳು, ವೈದ್ಯರನ್ನು ಆಯೋಜಿಸಬೇಕು. ಪೊಲೀಸ್ ಇಲಾಖೆಯವರು ಹೆಚ್ಚಿನ ಜಾಗೃತಿ ವಹಿಸಿ ಬ್ಯಾರಿಗೇಡ್ ಗಳನ್ನು ಹಾಕಬೇಕು ಎಂದು ತಿಳಿಸಿದರು.

Also Read: ಚನ್ನಗಿರಿ, ಯಲ್ಲಾಪುರದಲ್ಲಿ ಅಡಿಕೆ ಬೆಲೆ ಏರಿಕೆ | ರೈತರಲ್ಲಿ ಸಂತಸ

ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗಬಾರದು. ಅಂಗವಿಕಲರು ಮತ್ತು ವೃದ್ಧರಿಗೆ ನೇರದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ವ್ಯಾಪಾರಿಗಳು ಎಲ್ಲೆಂದರಲ್ಲಿ ಅಂಗಡಿಗಳನ್ನು ಹಾಕದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿಯೇ ಗ್ರಾಮದಲ್ಲಿ 20 ರಿಂದ 25 ಜನರ ಜನರ ಸ್ವಯಂ ಸೇವಕರ ಗುಂಪುಗಳನ್ನು ರಚನೆ ಮಾಡಿಕೊಳ್ಳಲು ತಿಳಿಸಿದರು.

ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಆದಷ್ಟು ಬೇಗ ರಸ್ತೆಗಳನ್ನು ಸಿದ್ಧಪಡಿಸಬೇಕು. ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಅಗ್ನಿಶಾಮಕ ದಳದವರು ರಥೋತ್ಸವದ ದಿನ ಪೂರ್ತಿಯಾಗಿ ತಮ್ಮ ವಾಹನವನ್ನು ಗ್ರಾಮದಲ್ಲೇಯೇ ಇರಿಸಬೇಕು ಎಂದು ತಿಳಿಸಿದರು.

Also Read: ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಿಂದ ಮಕ್ಕಳ ಸ್ನೇಹಿ ಗ್ರಂಥಾಲಯ

ಸಭೆಯಲ್ಲಿ ಎಸ್ಎಲ್ಎನ್ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ರಂಗಯ್ಯ, ಉಪತಾಸಿಲ್ದಾರ್ ಡಿ.ಟಿ.ಅಶೋಕ್, ಕಾರ್ಯದರ್ಶಿ ಜಿ.ಎನ್ ಶೇಷಾದ್ರಿ, ದೇವಸ್ಥಾನದ ಅಧ್ಯಕ್ಷ ಬಿ.ಎನ್. ರವೀಂದ್ರ, ಅರ್ಚಕ ಕೃಷ್ಣಭಟ್ಟರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಮ್ಮ, ಪಿಡಿಒ ಅಂಜಿನಪ್ಪ, ವೈದ್ಯಾಧಿಕಾರಿಗಳು ಡಾ.ಜ್ಯೋತಿ, ಚಿತ್ರಹಳ್ಳಿ ಪಿಎಸ್ಐ ಕಾಂತರಾಜು, ಲಕ್ಷ್ಮಿಕಾಂತಯ್ಯ, ವೆಂಕಟೇಶ್, ರಂಗಯ್ಯ, ಅಂಜಿನಮ್ಮ, ವಿವೇಕಾನಂದ, ಉದಯ್ ಕುಮಾರ್, ರಂಗನಾಥ್, ಎಚ್.ಆನಂದ, ಪಾಂಡುರಂಗಯ್ಯ, ಈಶ್ವರಪ್ಪ, ಕೆ.ಟಿ.ಅಜ್ಜಣ್ಣ, ರಮೇಶ್, ಟಿ.ರಮೇಶ್, ಗುಂಡಿನದಾಸಯ್ಯ, ಜಗದೀಶ್, ದೇವಣ್ಣ ಸೇರಿದಂತೆ ಕೆಇಬಿ ಲೈನ್ ಮ್ಯಾನ್ಗಳು, ಅಗ್ನಿಶಾಮಕ ದಳ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Brahma RathotsavaChitradurgaChitradurga newsChitradurga UpdatesfairH. D. PuraKannada Latest NewsKannada NewsMarch 16meetingSri Lakshmi Narasimha SwamyTehsildar B.B.Fatimaಎಚ್.ಡಿ.ಪುರಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಜಾತ್ರೆತಹಸಿಲ್ದಾರ್ ಬಿ.ಬಿ.ಫಾತಿಮಾಬ್ರಹ್ಮ ರಥೋತ್ಸವಮಾರ್ಚ್ 16ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಸಭೆ
Share This Article
Facebook Email Print
Previous Article APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
Next Article ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಿ | ಗುಲ್ಬರ್ಗದ ಸಿದ್ದಬಸವ ಸ್ವಾಮೀಜಿ
Leave a Comment

Leave a Reply Cancel reply

Your email address will not be published. Required fields are marked *

ಬೆಳೆವಿಮೆ
ಫಸಲ್ ಭೀಮಾ ಯೋಜನೆ | ನೋಂದಣಿ ಆರಂಭ
ಮುಖ್ಯ ಸುದ್ದಿ
ಬೆಳೆ ಸಮೀಕ್ಷೆ | ರೈತರೇ Mobile App ಮೂಲಕ ಮಾಹಿತಿ ಅಪ್‍ಲೋಡ್ ಮಾಡಬಹುದು | ಅದು ಹೇಗೆ ಎಂದು ತಿಳಿಯಿರಿ 
ಮುಖ್ಯ ಸುದ್ದಿ
arecanut price list
ಅಡಿಕೆ ಧಾರಣೆ | ಜುಲೈ 1 | ಯಾವ ಅಡಿಕೆಗೆ ಎಷ್ಟು ರೇಟ್‌
ಅಡಕೆ ಧಾರಣೆ
ರಕ್ತದಾನದಿಂದ ಆರೋಗ್ಯ ವೃದ್ಧಿ | ಎಂ.ಕೆ.ರವೀಂದ್ರ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up