Connect with us

    ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರತಿಭಟಿಸಿದವರ ಮೇಲೆ ಎಫ್‍ಐಆರ್ | ಕಪ್ಪು ಭಾವುಟ ಪ್ರದರ್ಶನ, ಮೊಟ್ಟೆ ಎಸೆಯಲು ನಡೆದಿತ್ತಾ ಪ್ಲಾನ್ !

    ಲೋಕಸಮರ 2024

    ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರತಿಭಟಿಸಿದವರ ಮೇಲೆ ಎಫ್‍ಐಆರ್ | ಕಪ್ಪು ಭಾವುಟ ಪ್ರದರ್ಶನ, ಮೊಟ್ಟೆ ಎಸೆಯಲು ನಡೆದಿತ್ತಾ ಪ್ಲಾನ್ !

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 30 MARCH 2024

    ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರ ಕಾರಿಗೆ ಮೊಟ್ಟೆ ಹೊಡೆದು ಕಪ್ಪು ಬಾವುಟ ಪ್ರದರ್ಶನಕ್ಕೆ ರಘುಚಂದನ್‌ ಬೆಂಬಲಿಗರು ಸಿದ್ಧತೆ ನಡೆಸಿದ್ದರು ಎಂಬ ಅಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

    ಶುಕ್ರವಾರ ಸಂಜೆ ಹಿರಿಯೂರು ಮೂಲಕ ಚಿತ್ರದುರ್ಗಕ್ಕೆ ಗೋವಿಂದ ಎಂ.ಕಾರಜೋಳ ಆಗಮಿಸುತ್ತಾರೆ ಎಂಬ ವಿಷಯ ತಿಳಿದ ಟಿಕೆಟ್‌ ವಂಚಿತ ಎಂ.ಸಿ.ರಘುಚಂದನ್‌ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರಸ್ತೆಯಲ್ಲಿ ಜಮಾಯಿಸಿದ್ದರು. ವಿಷಯ ತಿಳಿದ ಪೊಲೀಸರು ಹಾಗೂ ಚುನಾವಣೆ ಎಫ್‌ಎಸ್‌ಟಿ ಅಧಿಕಾರಿ ಎಸ್‌.ಎನ್‌.ಹೇಮಂತರಾಜು ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿದ್ದಾರೆ.

    ಕ್ಲಿಕ್ ಮಾಡಿ ಓದಿ: ನಾನು ನಂಬಿದವರೇ ನನ್ನ ಕತ್ತು ಕೊಯ್ದರು | ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಚಂದ್ರಪ್ಪ ವಾಗ್ದಾಳಿ

    ಈ ವೇಳೆ 100ಕ್ಕೂ ಹೆಚ್ಚು ರಘುಚಂದನ್‌ ಬೆಂಬಲಿಗರು ರಸ್ತೆಯಲ್ಲಿ ಕುಳಿತು ಗೋ ಬ್ಯಾಕ್‌ ಘೋಷಣೆ ಕೂಗಿದ್ದಾರೆ. ಉದೇ ವೇಳೆ ಕಾರಿನಿಂದ ಕಪ್ಪು ಬಣ್ಣದ ಬಾವುಟ ಹಾಗೂ ಮೊಟ್ಟೆ ಟ್ರೈಯನ್ನು ಕೆಳಗೆ ಇಳಿಸಿದ್ದಾರೆ. ಇದನ್ನು ಎಫ್‌ಎಸ್‌ಟಿ ಅಧಿಕಾರಿ ಗಮನಿಸುತ್ತಿದ್ದಂತೆ ಕಾರನ್ನು ತೆಗೆದು ಕೊಂಡು ಸ್ಥಳದಿಂದ ಪಲಾಯಾನ ಮಾಡಿದ್ದಾರೆ.

    ಘಟನೆ ಬಗ್ಗೆ ಹೇಮಂತ್‌ ರಾಜು ಬಡಾವಣೆ ಠಾಣೆಯಲ್ಲಿ 13 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ನವೀನ್‌, ಅಂಜಿನಪ್ಪ, ಚೇತನ, ತಿಮ್ಮಯ್ಯ, ಸುನೀಲ್‌, ಹುಸೇನ್‌, ಹರೀಶ್‌, ಭೂತೇಶ್‌, ಆನಂದ, ಭರತೇಶ, ವೀರೇಶ, ಶಶಿಧರ, ಕೊಟ್ರೇಶ್‌ ವಿರುದ್ಧ ದೂರು ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಲೋಕಸಮರ 2024

    To Top