CHITRADURGA NEWS | 21 APRIL 2026
ಚಿತ್ರದುರ್ಗ: ಪ್ರತಿಷ್ಠಿತ ಎಸ್.ಜೆ.ಎಂ. ವಿದ್ಯಾಪೀಠದ ಆಶ್ರಯದಲ್ಲಿ ಸ್ಥಾಪಿತವಾದ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ(ಎಸ್.ಜೆ.ಎಂ. ವಿಶ್ವವಿದ್ಯಾಲಯ)ವು ಚಿತ್ರದುರ್ಗದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ ಎಂದು ಕುಲಾಧಿಪತಿಗಳು ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಹೇಳಿದರು.
ಇದನ್ನೂ ಓದಿ: ಮುರುಘಾಮಠವು ಬಸವಾದಿ ಶರಣರ ತತ್ವ, ಚಿಂತನೆಗಳ ಪ್ರಯೋಗಶಾಲೆ
ನಗರದ ಎಸ್.ಜೆ.ಎಂ. ವಿಶ್ವವಿದ್ಯಾಲಯ, ಎಸ್.ಜೆ.ಎಂ.ಐ.ಟಿ. ಕ್ಯಾಂಪಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು.
ಜಾಗತಿಕ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ ಎಸ್.ಜೆ.ಎಂ. ವಿಶ್ವವಿದ್ಯಾಲಯವು ಸಂಶೋಧನಾ ಆಧಾರಿತ ಮತ್ತು ಫಲಿತಾಂಶ ಕೇಂದ್ರಿತ ಶಿಕ್ಷಣ ಮಾದರಿಯ ಮೂಲಕ ಮುಂದಿನ ತಲೆಮಾರಿನ ನಾಯಕರನ್ನು, ಪಂಡಿತರನ್ನು ಮತ್ತು ಆವಿಷ್ಕಾರಕರನ್ನು ಬೆಳೆಸಲು ಬದ್ಧವಾಗಿದೆ. ವಿಶ್ವವಿದ್ಯಾಲಯದ ತತ್ವಶಾಸ್ತ್ರವು ಶೈಕ್ಷಣಿಕ ಕಠಿಣತೆ, ನೈತಿಕ ಅಖಂಡತೆಯನ್ನು ದೃಷ್ಟಿಯಲ್ಲಿರಿಸಿಕೊಂಡಿದೆ.
ಅಂಗಸಂಸ್ಥೆಗಳ ಸಾಮೂಹಿಕ ಬೆಂಬಲದೊಂದಿಗೆ ಸಮಗ್ರ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳುತ್ತಿದೆ. ಅತ್ಯಾಧುನಿಕ ಸೌಲಭ್ಯಗಳು, ನುರಿತ ಶೈಕ್ಷಣಿಕ ತಜ್ಞರು, ಆಡಳಿತ ಮಂಡಳಿಯ ಸಹಕಾರದೊಂದಿಗೆ ಯಶಸ್ವಿ ಸಂಸ್ಥೆಯಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಶ್ರೀ ಶಾಂತವೀರ ಮುರಿಗೇ ಸ್ವಾಮೀಜಿಯ ಆದರ್ಶಗಳಿಂದ ಪ್ರೇರಿತವಾಗಿ ಎಸ್.ಜೆ.ಎಂ. ವಿಶ್ವವಿದ್ಯಾಲಯವು ಜ್ಞಾನ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಪರಿವರ್ತನೆಯ ದೀಪವಾಗಲು ಆಶಿಸುತ್ತಿದೆ ಎಂದರು.
ಪ್ರಮುಖ ಬೆಳವಣಿಗೆ – ಶೈಕ್ಷಣಿಕ ವರ್ಷ 2026-27 :
ಮುಂದಿನ ಶೈಕ್ಷಣಿಕ ವರ್ಷದಿಂದ ಎಸ್.ಜೆ.ಎಂ. ವಿಶ್ವವಿದ್ಯಾಲಯವು ಕೆಳಗಿನ ಏಳು ಪ್ರಮುಖ ವೃತ್ತಿಪರ ಕಾಲೇಜುಗಳನ್ನು ಅಧಿಕೃತವಾಗಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ತರಲಾಗುತ್ತಿದೆ.
ಇದನ್ನೂ ಓದಿ: ಮುರುಘಾ ಮಠ | ಬಸವ ಜಯಂತಿ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ
1. ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ,
2. ಎಸ್.ಜೆ.ಎಂ. ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ,
3. ಎಸ್.ಜೆ.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,
4. ಎಸ್.ಜೆ.ಎಂ. ಫಾರ್ಮಸಿ ಕಾಲೇಜು,
5. ಎಸ್.ಜೆ.ಎಂ. ನರ್ಸಿಂಗ್ ಕಾಲೇಜು,
6. ಬಸವೇಶ್ವರ ಅಲೈಡ್ ಹೆಲ್ತ್ ಸೆನ್ಸ್ ಕಾಲೇಜು,
7. ಬಸವೇಶ್ವರ ಫಿಸಿಯೋಥೆರಪಿ ಕಾಲೇಜು,
ಇದೊಂದು ಮಹತ್ವದ ಮೈಲುಗಲ್ಲು, ಏಕೆಂದರೆ ಎಲ್ಲಾ ಪ್ರವೇಶಗಳು, ಶೈಕ್ಷಣಿಕ ಆಡಳಿತ, ಪಠ್ಯಕ್ರಮ ವಿನ್ಯಾಸ ಮತ್ತು ಪರೀಕ್ಷೆಗಳು ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಯಲಿವೆ.
ಭವಿಷ್ಯದ ಯೋಜನೆಗಳು :
ಎಐ, ಆರೋಗ್ಯ, ಆವಿಷ್ಕಾರ ಮತ್ತು ಸುಸ್ಥಿರ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ. ಉದ್ಯಮ ಸಂಯೋಜಿತ ಪಠ್ಯಕ್ರಮ, ಇಂಟರ್ನ್ಶಿಪ್ ಮತ್ತು ಪ್ಲೇಸ್ಮೆಂಟ್ ಬೆಂಬಲ. ಸಂಶೋಧನಾ ಮೂಲಸೌಕರ್ಯ ಮತ್ತು ಪ್ರಾಯೋಜಿತ ಯೋಜನೆಗಳ ಬಲಪಡಿಕೆ. ಜಾಗತಿಕ ಸಹಕಾರ, ವಿದ್ಯಾರ್ಥಿ ಮತ್ತು ಶಿಕ್ಷಕರ ವಿನಿಮಯ ಕಾರ್ಯಕ್ರಮಗಳು. ಇಆರ್ಪಿ, ಸ್ಮಾರ್ಟ್ ಕ್ಯಾಂಪಸ್ ಮುಂತಾದ ಡಿಜಿಟಲ್ ವ್ಯವಸ್ಥೆಗಳ ಅನುಷ್ಠಾನ ಮಾಡಲಾಗವುದು ಎಂದು ವಿವರಿಸಿದರು.
ಚಿತ್ರದುರ್ಗದ ಮೇಲೆ ಪರಿಣಾಮ :
ಭಾರತ ಮತ್ತು ವಿದೇಶಗಳಿಂದ ವಿದ್ಯಾರ್ಥಿಗಳ ಆಕರ್ಷಣೆ. ಶೈಕ್ಷಣಿಕ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ. ಶಿಕ್ಷಣ ಆಧಾರಿತ ಅಭಿವೃದ್ಧಿಯಿಂದ ಸ್ಥಳೀಯ ಆರ್ಥಿಕತೆಗೆ ಉತ್ತೇಜನ. ನಗರದ ಶೈಕ್ಷಣಿಕ ಮತ್ತು ಸಂಶೋಧನಾ ಖ್ಯಾತಿಯ ವೃದ್ಧಿಯಾಗಲಿದೆ.
ವಿದ್ಯಾರ್ಥಿಗಳ ಲಾಭಗಳು :
ಉದ್ಯಮದ ಅಗತ್ಯಗಳಿಗೆ ಹೊಂದಿಕೊಂಡ ನವೀಕೃತ ಪಠ್ಯಕ್ರಮ. ವೇಗವಾದ ಶೈಕ್ಷಣಿಕ ನಿರ್ಧಾರ ಮತ್ತು ಪರೀಕ್ಷಾ ಪ್ರಕ್ರಿಯೆಗಳು. ಕೇಂದ್ರಿತ ತರಬೇತಿ ಮತ್ತು ಉದ್ಯಮ ಸಂಬಂಧಗಳ ಮೂಲಕ ಉತ್ತಮ ಪ್ಲೇಸ್ಮೆಂಟ್ ಅವಕಾಶಗಳು. ಬಹುಶಾಖಾ ಕಲಿಕಾ ವಾತಾವರಣ. ವಿಶ್ವವಿದ್ಯಾಲಯದ ಸಂಪನ್ಮೂಲಗಳು, ಸಂಶೋಧನಾ ಪ್ರಯೋಗಾಲಯಗಳು ಮತ್ತು ಆವಿಷ್ಕಾರ ಕೇಂದ್ರಗಳಿಗೆ ನೇರ ಪ್ರವೇಶ ದೊರೆಯಲಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಯೋಜನೆ
ಎಸ್.ಜೆ.ಎಂ. ವಿಶ್ವವಿದ್ಯಾಲಯವು ಶೈಕ್ಷಣಿಕ ಕಠಿಣತೆ, ಪ್ರಾಯೋಗಿಕ ಅನುಭವ ಮತ್ತು ಆವಿಷ್ಕಾರವನ್ನು ಸಂಯೋಜಿಸುವ ಮೂಲಕ ಉನ್ನತ ಶಿಕ್ಷಣದ ಮಾನದಂಡಗಳನ್ನು ಮರುಪರಿಭಾಷಿಸಲು ಬದ್ಧವಾಗಿದೆ. ಸಂಸ್ಥೆಗಳ ಏಕೀಕರಣವು ಚಿತ್ರದುರ್ಗ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಹೊಸಯುಗದ ಆರಂಭವಾಗಿದೆ.
ಪ್ರಸಕ್ತ 2026-27ನೇ ಸಾಲಿನಿಂದ ಎಸ್.ಜೆ.ಎಂ. ವಿಶ್ವವಿದ್ಯಾಲಯದ ಅಡಿಯಲ್ಲಿ ತಿಳಿಸಲಾಗಿರುವ ಎಲ್ಲಾ ಪ್ರವೇಶಾತಿಗಳು ನಡೆಯುತ್ತವೆ. ಆದರೆ ಈಗಾಗಲೇ ಪ್ರವೇಶಾತಿ ಪಡೆದು ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಪದವಿ ಮುಗಿಯುವವರೆಗೆ ಮುಂದುವರೆಯುತ್ತಾರೆ.
ನಮಗೆ ಪ್ರಸಕ್ತ ವರ್ಷದಿಂದ ಸರ್ಕಾರದಿಂದ ಹಾಗೂ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ನಿರಾಪೇಕ್ಷಣಾ ಪತ್ರ ದೊರೆತಿದೆ. ನಾವು ಹೊರರಾಷ್ಟçಗಳ ವಿಶ್ವವಿದ್ಯಾಲಯಗಳೊಂದಿಗೆ ಎಂ.ಓ.ಯು. ಮಾಡಿಕೊಳ್ಳಲಾಗುತ್ತದೆ. ಇಡೀ ಕ್ಯಾಂಪಸ್ ವೈಫೈ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು
ಇದೇ ಸಂದರ್ಭದಲ್ಲಿ 2026ನೇ ಸಾಲಿನ ವಿಶ್ವವಿದ್ಯಾಲಯದ ದಿನಚರಿಯನ್ನು ಬಿಡುಗೊಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ, ವತ್ತಿಪರ ಕಾಲೇಜುಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
