CHITRADURGA NEWS | 02 JANUARY 2026
ಮಾಲಿನ್ಯದಿಂದಾಗಿ ಆರೋಗ್ಯಕ್ಕೆ ಮಾತ್ರವಲ್ಲ ಕೂದಲು ಮತ್ತು ಚರ್ಮದ ಸಮಸ್ಯೆಗಳು ಕಾಡುತ್ತವೆ. ಮಾಲಿನ್ಯಕಾರಕಗಳು ಕೂದಲು ಮತ್ತು ಚರ್ಮದ ನೈಸರ್ಗಿಕ ಎಣ್ಣೆಯನ್ನು ಕಸಿದುಕೊಳ್ಳುತ್ತವೆ. ಉರಿಯೂತವನ್ನು ಹೆಚ್ಚಿಸುತ್ತವೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ವೇಗಗೊಳಿಸುತ್ತವೆ.
ಇದು ಒಣ ಮತ್ತು ಮಂದ ಚರ್ಮ, ಅಕಾಲಿಕ ನೆರಿಗೆಗಳು, ಕಲೆಗಳು, ಮೊಡವೆಗಳು ಹಾಗು ದುರ್ಬಲ ಮತ್ತು ಉದುರುವ ಕೂದಲು ಮತ್ತು ತಲೆಹೊಟ್ಟುಗೆ ಕಾರಣವಾಗುತ್ತದೆ. ಆದರೆ ಸರಿಯಾದ ಮತ್ತು ನಿಯಮಿತ ಆರೈಕೆಯೊಂದಿಗೆ ಈ ಹಾನಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸರಿಪಡಿಸಬಹುದು. ಹಾಗಾಗಿ ಮಾಲಿನ್ಯ-ಸಂಬಂಧಿತ ಕೂದಲು ಮತ್ತು ಚರ್ಮದ ಸಮಸ್ಯೆಗಳನ್ನು ಸರಿಪಡಿಸಲು ಏನು ಮಾಡಬೇಕು? ಎಂಬುದನ್ನು ತಿಳಿಯಿರಿ.
ಮೊದಲು, ಡಬಲ್ ಕ್ಲೆನ್ಸಿಂಗ್ ಅಳವಡಿಸಿಕೊಳ್ಳಿ
ಮೊದಲು ಎಣ್ಣೆ ಆಧಾರಿತ ಅಥವಾ ಮೈಕೆಲ್ಲರ್ ವಾಟರ್ ಕ್ಲೆನ್ಸರ್ ನಿಂದ ಕೊಳೆಯನ್ನು ತೆಗೆದುಹಾಕಿ. ನಂತರ ಸೌಮ್ಯವಾದ ಫೋಮಿಂಗ್ ಫೇಸ್ ವಾಶ್ ಬಳಸಿ.
ಕೂದಲು ಒಣಗದಂತೆ ತಡೆಯಲು, ವಾರಕ್ಕೆ ಎರಡು ಬಾರಿ ಸಲ್ಫೇಟ್ ರಹಿತ ಶಾಂಪೂ ಬಳಸಿ ಕೂದಲು ತೊಳೆಯಿರಿ. ಮತ್ತು ಕಂಡೀಷನರ್ ಬಳಸಿ. ನಿಮ್ಮ ದೈನಂದಿನ ಆಹಾರದಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳನ್ನು ಸೇರಿಸಿ.
ಸೀರಮ್ ಬಳಸಿ
ಮಾಲಿನ್ಯದ ಪರಿಣಾಮಗಳನ್ನು ತಪ್ಪಿಸಲು, ಈ ಸೀರಮ್ಗಳನ್ನು ಬಳಸಿ-
ನಿಯಾಸಿನಮೈಡ್ (5%) ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ತಡೆಗೋಡೆಯನ್ನು ಬಲಪಡಿಸುತ್ತದೆ. ಬೆಳಗ್ಗೆ ವಿಟಮಿನ್ ಸಿ ಸೀರಮ್(10 ರಿಂದ 20%) ಫ್ರೀ ರಾಡಿಕಲ್ಗಳಿಂದ ರಕ್ಷಿಸುತ್ತದೆ. ರಾತ್ರಿಯಲ್ಲಿ ರೆಟಿನಾಲ್ ಸೀರಮ್ ಹಚ್ಚಿ. ಕೂದಲಿಗೂ ಕೂ ಹೇರ್ ಸೀರಮ್ ಹಚ್ಚುವುದನ್ನು ತಪ್ಪಿಸಬೇಡಿ.
ಮಾಯಿಶ್ಚರೈಸರ್ ಮತ್ತು ಹೇರ್ ಮಾಸ್ಕ್ ಬಳಸಿ
ನಿಮ್ಮ ಮುಖವನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಮತ್ತು ಹೈಲುರಾನಿಕ್ ಆಮ್ಲ ಮತ್ತು ಸೆರಾಮೈಡ್ ಆಧಾರಿತ ಮಾಯಿಶ್ಚರೈಸರ್ನೊಂದಿಗೆ ಹೈಡ್ರೇಟ್ ಮಾಡಿ. ಕೂದಲಿನ ಬುಡವನ್ನು ಪೋಷಿಸಲು ವಾರಕ್ಕೊಮ್ಮೆ ನಿಮ್ಮ ಕೂದಲಿಗೆ ಆರ್ಗಾನ್ ಎಣ್ಣೆ ಅಥವಾ ತೆಂಗಿನ ಎಣ್ಣೆಯ ಮಸಾಜ್ ನೀಡಿ.
ಸನ್ಸ್ಕ್ರೀನ್ ಬಳಸಿ
ಹೊರಗೆ ಹೋಗುವಾಗ ಸನ್ಸ್ಕ್ರೀನ್ ಹಚ್ಚಲು ಮರೆಯಬೇಡಿ. ಸನ್ಸ್ಕ್ರೀನ್ UV ಕಿರಣಗಳು ಮಾಲಿನ್ಯದಿಂದ ಚರ್ಮದ ಮೇಲಾಗುವ ಹಾನಿಯನ್ನು ತಪ್ಪಿಸುತ್ತದೆ. ಹಾನಿಯನ್ನು ತಪ್ಪಿಸಲು ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಮತ್ತೆ ಹಚ್ಚಿ.
ಕೂದಲನ್ನು ಕಾಪಾಡಲು ಹೊರಗೆ ಹೋಗುವಾಗ ತಲೆಗೆ ಶಾಲಿನಿಂದ ಕವರ್ ಮಾಡಿಕೊಳ್ಳಿ. UV-ಪ್ರೊಟೆಕ್ಷನ್ ಹೇರ್ ಸ್ಪ್ರೇಗಳನ್ನು ಬಳಸಿ. ಇವು ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆಂತರಿಕ ಪೋಷಣೆ
ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿಡಲು ಆಂತರಿಕ ಪೋಷಣೆಯೂ ಅಗತ್ಯ.ಒಮೆಗಾ-3 ಸಮೃದ್ಧ ಆಹಾರಗಳು (ವಾಲ್ನಟ್ಸ್, ಅಗಸೆ ಬೀಜಗಳು) ತೆಗೆದುಕೊಳ್ಳಿ. ನಿಮ್ಮ ಆಹಾರದಲ್ಲಿ ವಿಟಮಿನ್ ಎ, ಸಿ ಮತ್ತು ಇ ಸೇರಿಸಿ. ಸಿಟ್ರಸ್ ಹಣ್ಣುಗಳು, ಪಾಲಕ್ ಇತ್ಯಾದಿಗಳನ್ನು ಸೇವಿಸಿ. ಪ್ರತಿದಿನ 3 ರಿಂದ 4 ಲೀಟರ್ ನೀರು ಕುಡಿಯಿರಿ.ಪ್ರೋಬಯಾಟಿಕ್ಗಳು ಮತ್ತು ಬೀಜಗಳನ್ನು ಸೇವಿಸಿ. ಇವು ಕರುಳಿನ ಚರ್ಮದ ಅಕ್ಷವನ್ನು ಆರೋಗ್ಯಕರವಾಗಿಡುತ್ತವೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
