
CHITRADURGA NEWS | 19 MAY 2024
ಚಿತ್ರದುರ್ಗ: ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಮೇ.17 ರಿಂದ ಮಳೆರಾಯ ಕೃಪೆ ತೋರಿದ್ದು, ಬಿಡದೆ ಸುರಿಯುತ್ತಿದ್ದಾನೆ, ರೈತರಿಗೆ ಹೊಲಗಳನ್ನು ಉಳಿಮೆ ಮಾಡಲು ಹಾಗೂ ಬಿತ್ತನೆ ಮಾಡಲು ಭರವಸೆ ಮೂಡಿಸಿದ್ದಾನೆ.
ಇದನ್ನೂ ಓದಿ: ಪರಿಸರ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆ | ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಗೆಲ್ಲಿ
ಎರಡು ವರ್ಷದಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ರೈತ ಈ ವರ್ಷ ಉತ್ತಮ ಮಳೆಯಿಂದ ಹೀಗಾಗಲೇ ಬಿತ್ತನೆ ಮಾಡಲು ಬಿತ್ತನೆ ಬೀಜಗಳನ್ನು ರೈತರು ತರುತ್ತಿದ್ದಾರೆ.
ಅವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮೇ.18 ರಿಂದ 22 ರವರೆಗೆ ಮಳೆ ಹೇಳಿದ್ದು ಆದರೆ ವರಣ ಒಂದು ದಿನ ಮುಂಚಿತವಾಗಿ ಮಳೆಯ ಕೃಪೆ ತೋರಿದ್ದಾನೆ.
ಮೇ.17 ರಿಂದ ಪ್ರಾರಂಭವಾದ ಮಳೆಯು ಹೊಳಲ್ಕೆರೆ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮದ್ಯಾಹ್ನ 3 ಯಿಂದ 1 ಗಂಟೆಗಳ ಕಾಲ ಸತತವಾಗಿ ಮಳೆಯು ಸುರಿದಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾನೆ.
ಇದನ್ನೂ ಓದಿ: ತೆರೆದಿದೆ ಉದ್ಯೋಗಾವಕಾಶದ ಬಾಗಿಲು | 22ರಂದು ನೇರ ನೇಮಕಾತಿ ಸಂದರ್ಶನ
ಅದೇ ರೀತಿ ಮೇ.18 ರಂದು ಸಂಜೆಯಿಂದಲೇ ಮೋಡ ಕವಿದ ವತಾವರಣವನ್ನು ಸುಷ್ಟಿಸಿದ್ದ ಮಳೆರಾಯ ರಾತ್ರಿ 10 ಗಂಟೆಯಿಂದ ಬೆಳೆಗ್ಗಿನ ಜವಾ 5 ಗಂಟೆವರಗೆ ಬಿಡದೆ ಸುರಿದಿದ್ದು ರೈತರಿಗೆ ಬಿತ್ತನೆ ಮಾಡಲು ಭರವಸೆ ನೀಡಿದ್ದಾನೆ.

ರೈತರು ಬಿತ್ತನೆ ಮಾಡಲು ಹೊಲಗಳನ್ನು ಸಿದ್ದಮಾಡಿಕೊಳ್ಳುತ್ತಿದ್ದು, ಈ ಮಳೆಗೆ ಹತ್ತಿ ಬೀಜ ಬಿತ್ತಲು ಮುಂದಾಗಿದ್ದಾರೆ.
ಮೇ ತಿಂಗಳ ಕೊನೆಯ ವಾರದವರೆಗೂ ಹತ್ತಿ ಬೀಜಗಳನ್ನೂ ಹಾಕೋಬೋದು ಎಂದು ಲೆಕ್ಕ ಹಾಕಿರುವ ರೈತ ಹೀಗಿನಿಂದಲೇ ಬಿತ್ತನೆ ಮಾಡಲು ಹಾಗೂ ಹೊಲಗಳನ್ನು ಸಿದ್ದಪಡಿಸಿಕೊಳ್ಳುತ್ತಿದ್ದಾನೆ.
ಇದನ್ನೂ ಓದಿ: ಅಡಿಕೆ ಧಾರಣೆ | ಮೇ.18 ಶನಿವಾರದ ಮಾರುಕಟ್ಟೆ ರೇಟ್
ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು, ಅಡನೂರು, ಮಳೇನಹಳ್ಳಿ, ಗುಂಡೇರಿ, ರಾಮಗಿರಿ, ತಾಳ್ಯ, ಹೆಚ್. ಡಿ. ಪುರ, ಬಿ. ದುರ್ಗ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಎರೆಡು ದಿನ ಬಿಡದೆ ಮಳೆ ಆಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
