CHITRADURGA NEWS | 02 MARCH 2026
ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಬೆಳೆವಿಮೆ, ಬೆಳೆಪರಿಹಾರಕ್ಕಾಗಿ ರೈತರು ಪ್ರತಿಭಟನೆ, ಧರಣಿ ನಡೆಸುತ್ತಲೇ ಬಂದಿದ್ಧಾರೆ. ಆಡಳಿತ ನಡೆಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾತ್ರ ರೈತರ ಹಿತವನ್ನು ಮರೆತಿದ್ದು, ಬೆಳೆವಿಮೆ ಪರಿಹಾರ ಕೂಡಲೇ ಬಿಡುಗಡೆ ಮಾಡದೇ ಇದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಉಗ್ರ ಪ್ರತಿಭಟನೆ ಮಾಡಲು ಸಿದ್ದತೆ ನಡೆಸಿದೆ ಎಂದು ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ | ಮೋದಿ ಸಾಧನೆ ಮನೆ ಮನೆಗೆ ಮುಟ್ಟಿಸಲು ಕರೆ
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳ 2025-26ನೇ ಸಾಲಿನ ಮುಂಗಾರು ಹಂಗಾಮಿನ ಶೇಂಗಾ, ಈರುಳ್ಳಿ, ದಾಳಿಂಬೆ, ತೊಗರಿ, ಟಮೋಟ, ಅಡಿಕೆ ಬೆಳೆಗಳಿಗೆ ಬೆಳೆವಿಮೆ ಕಂಪನಿಗಳ ರೈತರ ಖಾತೆಗೆ ಹಣಜಮಾಮಾಡದೆ ನಿರ್ಲಕ್ಷಿಸಿವೆ ಎಂದು ಆರೋಪಿಸಿ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು,
ಇನ್ಸೂರೆನ್ಸ್ ಕಂಪನಿಗಳು ಬೆಳೆವಿಮೆಕಟ್ಟಿಸಿಕೊಳ್ಳಲು ನಿಗಧಿತ ಸಮಯವನ್ನು ನಿಗದಿ ಮಾಡುತ್ತಾರೆ. ಬೆಳೆವಿಮೆ ಕೊಡುವಾಗ ಯಾವುದೇ ಸಮಯ ನಿಗದಿಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿವೆ. ಇತ್ತ ಸರ್ಕಾರಗಳು, ಅತ್ತ ವಿಮಾಕಂಪನಿಗಳು ರೈತರಿಗೆ ಮೊಸಮಾಡುತ್ತಿವೆ ಎಂದರು ಆರೋಪಿಸಿದರು.
ರಾಜ್ಯ ಉಪಾಧ್ಯಕ್ಷ ಕೆ.ಸಿ.ಹೋರಕೇರಪ್ಪ ಮಾತನಾಡಿ, ಮಳೆ ವೈಪಲ್ಯದಿಂದ ಭೂಮಿಗೆ ಹಾಕಿದ ಬೆಳೆಯೂ ಕೈಸೇರಿಲ್ಲ. ಸಾಲ ಮಾಡಿ ಬಿತ್ತನೆಮಾಡಿದ್ದ ರೈತ ಅತಿವೃಷ್ಠಿ, ಅನಾವೃಷ್ಠಿಯಿಂದ ಬೆಳೆಯನ್ನು ಕಳೆದುಕೊಂಡಿದ್ದಾನೆ. ಇಂತಹ ಸಮಯದಲ್ಲಿ ಆಸರೆಯಾಗಬೇಕಿದ್ದ ಬೆಳೆವಿಮೆಯೂ ನೀಡದೆ ಅನ್ಯಾಯ ಮಾಡುತ್ತಿದ್ಧಾರೆ. ರೈತರ ನೆರವಿಗೆ ಬರಬೇಕಿರುವ ಸರ್ಕಾರಗಳು ಕೈಚಲ್ಲಿ ಕುಳಿತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 02 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಶೇಂಗಾ, ಈರುಳ್ಳಿ, ದಾಳಿಂಬೆ, ತೊಗರಿ, ಟಮೋಟ, ಅಡಿಕೆ ಸಂಪೂರ್ಣ ವಿಫಲವಾಗಿ ಹಾಕಿನ ಬಂಡವಾಳವೂ ಕೈಗೆಬಾರದೆ ರೈತ ಕಂಗಾಲಾಗಿದ್ಧಾನೆ. ಅವರ ನೆರವಿಗೆ ಸರ್ಕಾರಗಳು ಬರಬೇಕೆಂದು ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್, ತಹಶೀಲ್ದಾರ್ ರೇಹಾನ್ ಪಾಷ, ಈ ತಿಂಗಳ 15ರೊಳಗೆ ವಿಮೆ ಮಾಡಿದ ಎಲ್ಲಾ ರೈತರ ಖಾತೆಗೆ ಇನ್ಸೂರೆನ್ಸ್ ಹಣ ಬರಲಿದೆ. ರೈತರು ಆತಂಕಪಡುವ ಅಗತ್ಯವಿಲ್ಲ. ಕಳೆದ ವರ್ಷ ಇಡೀ ರಾಜ್ಯದಲ್ಲೇ ನಮ್ಮ ತಾಲ್ಲೂಕಿಗೆ ಮೊದಲು ಬೆಳೆವಿಮೆ ಹಣ ಬಂದಿದ್ದು. ಯಾವುದೇ ಆತಂಕಪಡದೆ ರೈತರು ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವಂತೆ ಮನವಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೈತರು 15ರೊಳಗೆ ರೈತರಖಾತೆಗೆ ಹಣಬಾರದೆ ಇದ್ದರೆ ತಾಲ್ಲೂಕು ಕಚೇರಿಗೆ ಬೀಗಹಾಕಿ ಪ್ರತಿಭಟಿಸುವ ಎಚ್ಚರಿಕೆ ನೀಡಿ ಸತ್ಯಾಗ್ರಹವನ್ನು ಕೈಬಿಟ್ಟರು.
ಇದನ್ನೂ ಓದಿ: ಒಳಮೀಸಲಾತಿ, ಖಾಲಿ ಹುದ್ದೆ ನೇಮಕಾತಿ ವಿಚಾರದಲ್ಲಿನ ಗೊಂದಲ ಬಗೆಹರಿಸಿ | ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ
ಪ್ರತಿಭಟನೆಯಲ್ಲಿ ಬಸ್ತಿಹಳ್ಳಿ ಸುರೇಶ್ಬಾಬು, ಧನುಂಜಯ, ಒ.ಟಿ.ತಿಪ್ಪೇಸ್ವಾಮಿ, ಶ್ರೀನಿವಾಸರೆಡ್ಡಿ, ಆರ್.ತಿಪ್ಪೇಸ್ವಾಮಿ, ಟಿ.ಹಂಪಣ್ಣ, ಬೊಮ್ಮಣ್ಣ, ಕುಮಾರ್, ಬಿ.ಟಿ.ನಾರಾಯಣಪ್ಪ, ಶಿವಣ್ಣ, ಕೃಷ್ಣಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
