CHITRADURGA NEWS | 14 October 2024
ಹೊಸದುರ್ಗ: ಹೊಸದುರ್ಗ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ(Heavy rain)ಯಾಗಿದ್ದು, ವೇದಾವತಿ ನದಿ ಮೈದುಂಬಿದೆ.
ಕ್ಲಿಕ್ ಮಾಡಿ ಓದಿ: Astrology; ದಿನ ಭವಿಷ್ಯ | 14 ಅಕ್ಟೋಬರ್ | ವಾಹನ ಖರೀದಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಶುಭ ಸುದ್ದಿ

ಕೆಲ್ಲೋಡು ಬಳಿ ವೇದಾವತಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಮತ್ತೆ ಜೀವಕಳೆಯೊಂದಿಗೆ ಹರಿಯುತ್ತಿದೆ.
ಬ್ಯಾರೇಜ್ ಭರ್ತಿಯಾಗಿ ನೀರು ತೊರೆಯಾಗಿ ಹರಿಯುವ ದೃಶ್ಯ ನಯನ ಮನೋಹರವಾಗಿದೆ.
ವಿವಿ ಸಾಗರ ಒಳಹರಿವು ಹೆಚ್ಚಳ:
ವ್ಯಾಪಕ ಮಳೆಯಿಂದಾಗಿ ವಿವಿ ಸಾಗರದ ಒಲಹರಿವಿನ ಪ್ರಮಾಣ ಹೆಚ್ಚಾಗಿದೆ.
ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ ವಿವಿ ಸಾಗರಕ್ಕೆ 1040 ಕ್ಯೂಸೆಕ್ ನೀರು ಹರಿದು ಬಂದಿದೆ.
ಕ್ಲಿಕ್ ಮಾಡಿ ಓದಿ: Madakari Nayaka; ಮದಕರಿ ಪ್ರತಿಮೆಗೆ ವಾಲ್ಮೀಕಿ ಶ್ರೀ ಪುಷ್ಪಾರ್ಚನೆ | ದುರ್ಗದ ದೊರೆಯ ಅದ್ದೂರಿ ಜಯಂತಿಗೆ ನಿರ್ಧಾರ
ಸದ್ಯ ಜಲಾಶಯದ ನೀರಿನ ಮಟ್ಟ 122.35 ಅಡಿವರೆಗೆ ನೀರು ಬಂದಿದ್ದು, 24.01 ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನ ವಿವಿ ಸಾಗರ ಜಲಾಶಯದಲ್ಲಿ 122.15 ಅಡಿವರೆಗೆ ನೀರು ಬಂದಿದ್ದು, ಜಲಾಶಯದಲ್ಲಿ 23.76 TMC ನೀರಿತ್ತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
