CHITRADURGA NEWS | 29 JANUARY 20226
ಚಿತ್ರದುರ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನೆಹರು ನಗರ ಇವರ ವತಿಯಿಂದ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜರುಗಿತು.
ಇದನ್ನೂ ಓದಿ: ಅಡಿಕೆ ಧಾರಣೆ | 29 ಜನವರಿ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ದೇವಾಲಯ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕರಾದ ಮನೋಹರ ಮಠದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪುರಾತನವಾದ ನಮ್ಮ ಸಂಸ್ಕøತಿ, ಸಂಪ್ರದಾಯವನ್ನು ನಾವು ಮರೆಯುತ್ತಿದ್ದೇವೆ, ವಿದೇಶಿ ಸಂಸ್ಕøತಿಗೆ ಮಾರು ಹೋಗಿದ್ದೇವೆ ಆದರೆ ವಿಪರ್ಯಾಸ ಎಂದರೆ ವಿದೇಶಿಯವರು ನಮ್ಮ ಸಂಸ್ಕøತಿಯನ್ನು ಅನುಸರಿಸುತ್ತಿದ್ದಾರೆ ನಮ್ಮಲ್ಲಿ ವೇಷ ಎನ್ನುವುದು ದಿಕ್ಕು ತಪ್ಪುತ್ತಿದೆ, ದೇವಾಲಯಗಳಲ್ಲಿ ಸರಿಯಾದ ಉಡುಪು ಧರಿಸಿಕೊಂಡು ಬನ್ನಿ ಎಂದು ಬೋರ್ಡ ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾಧಿಸಿದರು.
ಇಂದಿನ ದಿನಮಾನದಲ್ಲಿ ಭಗವಂತನಲ್ಲಿ ಸರ್ವಜನ ಸುಖಿನೋ ಭವಂತು ಎಂದು ಬೇಡುವುದಕ್ಕಿಂತ ನನಗೆ, ನಮ್ಮ ಮನೆಯವರಿಗೆ, ನಮ್ಮ ಕುಟುಂಬದವರಿಗೆ ನೀಡುವಂತೆ ಬೇಡುವವರ ಸಂಖ್ಯೆ ಹೆಚ್ಚಾಗಿದೆ. ನಾವು ಎಷ್ಟೇ ಬೇಡಿದರು ಸಹಾ ಭಗವಂತ ನಮಗೆ ಎಷ್ಟು ನೀಡಬೇಕೂ ಅಷ್ಟೇ ಮಾತ್ರ ನೀಡುತ್ತಾನೆ. ನಾವುಗಳು ನಮ್ಮ ಪಾಲಿನ ಕೆಲಸ ಮಾಡಬೇಕು. ಅದಕ್ಕೆ ತಕ್ಕಂತೆ ಫಲ ನೀಡುವುದು ಭಗವಂತನ ಕೆಲಸವಾಗಿದೆ.
ಮುಸ್ಲಿಂರು ಬೇಡುತ್ತಾರೆ, ಕೈಸ್ತರು ಪ್ರಾರ್ಥನೆ ಮಾಡುತ್ತಾರೆ, ಹಿಂದೂಗಳು ಪೂಜೆ ಮಾಡುತ್ತಾರೆ. ಹೀಗೆ ಅವರ ಅವರ ಧರ್ಮಕ್ಕೆ ತಕ್ಕಂತೆ ನಡೆಯುತ್ತಾರೆ. ಆದರೆ ನಮ್ಮ ಬದುಕು ಮಾನತ್ವದಿಂದ ದೈವತ್ವದ ಕಡೆಗೆ ಹೋಗಬೇಕಿದೆ. ಇದರಿಂದ ಬದುಕು ಸಾರ್ಥಕತೆಯನ್ನು ಪಡೆಯಬೇಕು.
ಇದನ್ನೂ ಓದಿ: JJM ಕಾಮಗಾರಿ ಕಳಪೆ | ಕೇಂದ್ರದ ಮಧ್ಯ ಪ್ರವೇಶಕ್ಕೆ ಗೋವಿಂದ ಕಾರಜೋಳ ಒತ್ತಾಯ
ಮಾನವ ಸತ್ತಾಗ ಹಲವಾರು ಜನತೆ ನಮ್ಮ ಸ್ಮರಣೆಯನ್ನು ಮಾಡುವಂತ ಸಾವು ನಮ್ಮದಾಗಬೇಕು, ಯಾವಾಗ ಸಾಯುತ್ತಾನೆ ಎಂದು ಜನತೆ ಬೇಡುವಂತ ಪರಿಸ್ಥಿತಿ ಬರಬಾರದು. ನಮ್ಮ ಬದುಕು ಬೇರೆಯವರಿಗೆ ಮಾದರಿಯಾಗಿರಬೇಕು ಎಂದರು.
ಕುಟುಂಬದಲ್ಲಿ ಒಟ್ಟಾಗಿ ದೇವಾಲಯಕ್ಕೆ ಹೋಗಿ ಮನೆಯಲ್ಲಿ ಒಟ್ಟಾಗಿ ಕುಳಿತು ಊಟ ಮಾಡಿ ಇದರಿಂದ ಮಕ್ಕಳಲ್ಲಿ ಸಂಸ್ಕಾರ ಬರುತ್ತದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಯೋಜನಾಧಿಕಾರಿ ಬಿ.ಚಂದ್ರಹಾಸ್ ಮಾತನಾಡಿ, ನಮ್ಮ ಸಂಘ ಬರಿ ಸಾಲ ನೀಡುವುದು, ಉಳಿತಾಯ ಮಾಡುವುದು ಅಷ್ಟೇ ಅಲ್ಲದೆ ಸಮಾಜ ಮುಖಿಯಾಗಿ ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಾ ಬಂದಿದೆ. ಜನರ ಆರ್ಥಿಕ ಸ್ಥಿತಿ ಬದಲಾಯಿಸುವದರೊಂದಿಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಲಾಗುತ್ತಿದೆ.
ಬಡವರಿಗೆ ಮಾಸಾಶನ, ಶಾಲೆ, ಸಮುದಾಯ ಭವನ, ದೇವಾಲಯಗಳನ್ನು ಜೀಣೋದ್ದಾರ, ಕೆರೆಗಳನ್ನು ಪುನರೂಜ್ಜೀವನ ಮಾಡಲಾಗುತ್ತಿದೆ. ಮಹಿಳೆಯರಿಗೆ ಕಾನೂನಿನ ಅರಿವು ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದರ ಮೂಲಕ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ.
ಇದನ್ನೂ ಓದಿ: ಆದರ್ಶ ವಿದ್ಯಾಲಯ | 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
ಈ ರೀತಿಯಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜನತೆಯಲ್ಲಿ ಧಾರ್ಮಿಕ ಭಾವನೆಯನ್ನು ಮೂಡಿಸಲಾಗುತ್ತಿದೆ ಎಂದರು.
ಬಡಾವಣೆ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ರೇಣುಕಾ ಕಾರ್ಯಕ್ರಮ ಉದ್ಘಾಟಿಸಿದರು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಕೆ.ಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯ ಕೆ.ಆರ್.ಮಂಜುನಾಥ್ ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
