CHITRADURGA NEWS | 31 DECEMBER 2024
ಚಿತ್ರದುರ್ಗ: ಮೈಸೂರು ವಿಭಾಗದ ರೈಲುಗಳ ಸಮಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, 2025ರ ಜನವರಿ 1 ರಿಂದ ಜಾರಿಗೆ ಬರಲಿದೆ.
ಕ್ಲಿಕ್ ಮಾಡಿ ಓದಿ: ಚಳ್ಳಕೆರೆ ಕೃಷಿಕ ಸಮಾಜದ ಅಧ್ಯಕ್ಷರಾಗಿ ಚಾಲುಕ್ಯ ನವೀನ್
ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆ ಮಾಡುವ ಮುನ್ನ ಈ ಬದಲಾವಣೆಗಳನ್ನು ಗಮನಿಸಬೇಕು. ಈ ಬದಲಾವಣೆಗಳಿಂದ ರೈಲು ಸಂಚಾರದ ಸುಗಮತೆ ಮತ್ತು ಸಮಯ ಪಾಲನೆ ಸುಧಾರಿಸಲಾಗುವುದು.
ಬದಲಾದ ಪ್ರಮುಖ ರೈಲುಗಳ ವಿವರ ಹೀಗಿವೆ. ಟ್ರೈನ್ ಸಂಖ್ಯೆ 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್ (ಎಸ್.ಕೆ ಎಕ್ಸ್ಪ್ರೆಸ್):ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿಗರ್ಮನ ಸಮಯ: 17:08/17:10, ಹಳೆಯ ಸಮಯ: 17:50/17:52 ಇದು ಜನವರಿ 1, 2025 ರಿಂದ ಜಾರಿಗೆ ಬರಲಿದೆ.
ಟ್ರೈನ್ ಸಂಖ್ಯೆ 20656 ಹುಬ್ಬಳ್ಳಿ-ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್: ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿಗಮಣ ಸಮಯ: 13:20/13:22, ಹಳೆಯ ಸಮಯ: 13:45/13:47 ಈ ಬದಲಾವಣೆ ಜನವರಿ 4, 2025 ರಿಂದ ಜಾರಿಗೆ ಬರುತ್ತದೆ.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಟ್ರೈನ್ ಸಂಖ್ಯೆ 06243/56519 ಬೆಂಗಳೂರು-ಹೋಷಪೇಟೆ ಪ್ಯಾಸೆಂಜರ್: ಚಿಕ್ಕಜಜೂರು ನಿಲ್ದಾಣ: ಹೊಸ ಸಮಯ: 10:05/10:10, ಹಳೆಯ ಸಮಯ: 10:07/10:10 – ಜನವರಿ 1, 2025 ರಿಂದ ಈ ಬದಲಾವಣೆ ಜಾರಿಯಲ್ಲಿರುತ್ತದೆ.
ಟ್ರೈನ್ ಸಂಖ್ಯೆ 07377 ಬಿಜಾಪುರ-ಮಂಗಳೂರು ಎಕ್ಸ್ಪ್ರೆಸ್: ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿಗಮಣ ಸಮಯ: 23:43/23:45, ಹಳೆಯ ಸಮಯ: 23:55/23:57, ಚಿಕ್ಕಜಜೂರು ನಿಲ್ದಾಣ: – ಹೊಸ ಸಮಯ: 00:20/00:22, ಹಳೆಯ ಸಮಯ: 00:40/00:42, ಟ್ರೈನ್ ಸಂಖ್ಯೆ 17348 ಚಿತ್ತದುರ್ಗ-ಹುಬ್ಬಳ್ಳಿ ಎಕ್ಸ್ಪ್ರೆಸ್ ಈ ರೈಲು ಹಲವಾರು ಮಧ್ಯದ ನಿಲ್ದಾಣಗಳಲ್ಲಿ ಬದಲಾದ ಸಮಯದೊಂದಿಗೆ ಸಂಚರಿಸುತ್ತದೆ.
ಚಿತ್ರದುರ್ಗ:- ಹೊಸ ಸಮಯ: 13:40, – ಹಳೆಯ ಸಮಯ: 14:00, ಹಳಿಯೂರು, ಹೊಸ ಸಮಯ: 13:45/13:46 – ಹಳೆಯ ಸಮಯ: 14:09/14:11, ಬೆಟ್ಟದನಗನಹಳ್ಳಿ ಹಾಲ್ಟ್, ಹೊಸ ಸಮಯ: 13:52/13:53, ಹಳೆಯ ಸಮಯ: 14:15/14:16, ಅಮೃತಾಪುರ, ಹೊಸ ಸಮಯ: 13:58/13:59, – ಹಳೆಯ ಸಮಯ: 14:23/14:24, ಚಿಕ್ಕಂದವಾಡಿ ಹಾಲ್ಟ್, ಹೊಸ ಸಮಯ: 14:05/14:06, ಹಳೆಯ ಸಮಯ: 14:30/14:31, ದಾವಣಗೆರೆ: – ಹೊಸ ಸಮಯ: 15:21/15:23 – ಹಳೆಯ ಸಮಯ: 16:10/16:12
ಕ್ಲಿಕ್ ಮಾಡಿ ಓದಿ: ವಾಣಿವಿಲಾಸ ಸಾಗರ ಜಲಾಶಯ | ಇಂದಿನ ನೀರಿನ ಮಟ್ಟ
ಟ್ರೈನ್ ಸಂಖ್ಯೆ 07339 ಹುಬ್ಬಳ್ಳಿ-ಬೆಂಗಳೂರು ಎಕ್ಸ್ಪ್ರೆಸ್, ದಾವಣಗೆರೆ ನಿಲ್ದಾಣ, ಹೊಸ ಸಮಯ: 01:10/01:12, ಹಳೆಯ ಸಮಯ: 01:33/01:35 ಈ ಬದಲಾವಣೆ ಜನವರಿ 1, 2025 ರಿಂದ ಜಾರಿಗೆ ಬರಲಿದೆ.
ಪ್ರಯಾಣಿಕರಿಗೆ ಸೂಚನೆ: ಈ ಬದಲಾವಣೆಗಳಿಂದ ರೈಲು ಸಂಚಾರವನ್ನು ಇನ್ನಷ್ಟು ಸಮರ್ಪಕಗೊಳಿಸಲು ಮತ್ತು ಪ್ರಯಾಣಿಕರ ಅನುಕೂಲತೆಗಳಿಗೆ ಅನುಗುಣವಾಗಿ ಬದಲಾವಣೆಗಳನ್ನು ತಂದುಕೊಳ್ಳಲಾಗಿದೆ. ಹೊಸ ವೇಳಾಪಟ್ಟಿಯನ್ನು ರೈಲು ನಿಲ್ದಾಣಗಳಲ್ಲಿ ಅಥವಾ ಅಧಿಕೃತ ವೆಬ್ಸೈಟ್ಗಳಲ್ಲಿ ಪರಿಶೀಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
