
CHITRADURGA NEWS | 19 AUGUST 2024
ಚಿತ್ರದುರ್ಗ: ತಾತ್ವಿಕತೆ ಮತ್ತು ಸಮಾನತೆ ಪ್ರತಿಪಾದಿಸಿ ಅನುಭವ ಮಂಟಪ ಜಗತ್ತಿಗೆ ಆದರ್ಶವಾದ ಪ್ರಜಾಪ್ರಭುತ್ವದ ಕೇಂದ್ರಬಿಂದುವಾಗಿದೆ ಎಂದು ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿಯಲ್ಲಿ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿದ್ದ ಅನುಭಾವ ಶ್ರಾವಣ ಸರಣಿ ಚಿಂತನ ಮಾಲೆ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಂವಿಧಾನದ ರಚನೆಯಲ್ಲಿ ಅನೇಕ ಅಂಶಗಳಿಗೆ ಸ್ಪೂರ್ತಿ ಅನುಭವ ಮಂಟಪ. ಅನುಭವ ಮಂಟಪದ ಸ್ಥಾಪಕರು, ಸ್ತ್ರೀ ಸಮಾನತೆಯ ಹರಿಕಾರರು ಜಗಜ್ಯೋತಿ ಬಸವಣ್ಣನವರು. ತಾರತಮ್ಯ ರಹಿತ ಸಮಾಜ ನಿರ್ಮಾಣ ಅವರ ಬಹುದೊಡ್ಡ ಕನಸು. ಸಾಮಾಜಿಕ ಅಸಮಾನತೆಯ ಹಳೆಯ ಪದ್ಧತಿಯನ್ನು ತೆಗೆದು, ಸಮಾನತೆ, ಅರಿವು, ಕಾಯಕ ತತ್ವವನ್ನ ಅಳವಡಿಸುವುದು ಅನುಭವ ಮಂಟಪದ ಮೊದಲ ಆದ್ಯತೆಯಾಗಿತ್ತು’ ಎಂದರು.
‘ಕಾಯಕ ಮಾಡಬೇಕು. ದುಡಿದುಗಳಿಸಬೇಕು. ಅದನ್ನ ಹಂಚಿ ತಿನ್ನಬೇಕು ಇದೇ ದಾಸೋಹ ಎಂದು ಶರಣರು ಸಾರಿದರು. ಇದನ್ನು ಅನುಸರಿಸಿದರೆ ಮೊದಲು ನಾವು, ನಮ್ಮ ಮನೆ, ನಮ್ಮೂರು, ರಾಜ್ಯ, ದೇಶ ಎಲ್ಲವೂ ಅನ್ಯೋನ್ಯತೆಯಿಂದ ಬದುಕಲು ಸಾಧ್ಯವಾಗುತ್ತದೆ’ ಎಂದು ನುಡಿದರು.
ಕ್ಲಿಕ್ ಮಾಡಿ ಓದಿ: ವಾಣಿ ವಿಲಾಸ ಸಾಗರ ಜಲಾಶಯ | ಹೆಚ್ಚಾಗುತ್ತಿದೆ ಒಳಹರಿವು
ಸಾಹಿತಿ ಜಡೆಕುಂಟೆ ಮಂಜುನಾಥ್, ‘ಅನುಭವ ಮಂಟಪ ಮತ್ತು ಆಶಯ’ ಕುರಿತು ವಿಶೇಷ ಉಪನ್ಯಾಸ ನೀಡಿ, ‘12ನೇ ಶತಮಾನದ ಅನುಭವ ಮಂಟಪ ಎಂಬ ಶಬ್ದವೇ ಮೈರೋಮಾಂಚನಗೊಳಿಸುವಂತದ್ದು. ಬಸವಣ್ಣನವರ ಹಾಗೆಯೇ ಬುದ್ಧ, ಅಂಬೇಡ್ಕರ್ ಸಮಾಜದಲ್ಲಿ ಹುಟ್ಟದೇ ಇದ್ದಿದ್ದರೆ, ತಮ್ಮ ವಚನಗಳ ಮೂಲಕ, ವಿಚಾರಗಳ ಮೂಲಕ, ಸಂವಿಧಾನದ ಮೂಲಕ ಜನರನ್ನ ಬೌದ್ಧಿಕ ಮತ್ತು ತಾತ್ವಿಕ ವಿಚಾರಧಾರೆಯ ಮೂಲಕ ಎಚ್ಚರಿಸದೇ ಇದ್ದಿದ್ದರೆ, ಈ ಸಮಾಜ ಇನ್ನೂ ಮೌಢ್ಯತೆಯಲ್ಲಿ, ಅಸಮಾನತೆಯಲ್ಲಿ, ಕೀಳು ಅಭಿರುಚಿಯ ಮನೋಭಾವದಲ್ಲಿ ಉಳಿದು ಹೋಗುತ್ತಿತ್ತು’ ಎಂದರು.
ಕ್ಲಿಕ್ ಮಾಡಿ ಓದಿ: ಪ್ರತಿಭಟನೆ ಬದಲು ಪೊಲೀಸರಿಗೆ ದೂರು ನೀಡಿ| ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
‘ಸಮಾಜದಲ್ಲಿದ್ದ ಶೋಷಣೆ ಗೊಡ್ಡು ಸಂಪ್ರದಾಯ ಮೆಟ್ಟಿ, ಎಲ್ಲರೂ ಸರ್ವ ಸಮಾನತೆಯ ತತ್ವದಡಿಯಲ್ಲಿ ಎಲ್ಲಾ ವೃತ್ತಿಯ ಕಾಯಕ ಜೀವಿಗಳನ್ನು ಒಂದೆಡೆ ಸೇರಿಸಿ ಅನುಭವ ಮಂಟಪ ಕಟ್ಟಿದರು. ಇಂಥ ಒಂದು ಅನುಭವ ಮಂಟಪಕ್ಕೆ ಪ್ರಥಮ ಅಧ್ಯಕ್ಷರು ಅಲ್ಲಮಪ್ರಭುಗಳು. ಇದೇ ಹಾದಿಯಲ್ಲಿ ಸಾಗಿದ ಮುರುಘಾಮಠವೂ ಕೂಡ ವಿವಿಧ ಮಠಗಳಿಗೂ ಕೂಡ ಆಶ್ರಯ ನೀಡಿದ್ದು ಉಲ್ಲೇಖನೀಯ. ಯಾರ ಬಗ್ಗೆಯಾದರೂ ಮಾತನಾಡುವ ಮೊದಲು ನಮ್ಮ ತನು ,ಮನ ಭಾವಗಳನ್ನ ಶುದ್ಧ ಮಾಡಿಕೊಳ್ಳಬೇಕು. ಎಂದು ಬಸವಣ್ಣನವರು ಹೇಳುತ್ತಾರೆ. ಇದನ್ನು ನಾವುಗಳು ಪಾಲಿಸಬೇಕು’ ಎಂದು ತಿಳಿಸಿದರು.
ಮುರುಘಾಮಠದ ಮುರುಘೇಂದ್ರ ಸ್ವಾಮೀಜಿ, ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರ ಕುಮಾರ್, ಮುಖ್ಯ ಶಿಕ್ಷಕರಾದ ಆಶಾರಾಣಿ, ಮಹಾಂತೇಶ್, ಮುಖಂಡ ಬಸವರಾಜಪ್ಪ, ಸಂಘಟಕ ಬಸವರಾಜ್ ಕಟ್ಟಿ, ಶಿವಲೀಲಾ, ಲಿಂಗರಾಜು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
