
CHITRADURGA NEWS | 09 MARCH 2025
ಚಿತ್ರದುರ್ಗ: ಆಳವಾದ ಅಧ್ಯಯನ ಹಾಗೂ ಸೈದ್ಧಾಂತಿಕವಾಗಿ ಗಟ್ಟಿಯಾದಾಗ ಮಾತ್ರ ಬರಹಗಾರ ಗಟ್ಟಿಯಾಗುತ್ತಾನೆ ಎಂದು ಎಬಿವಿಪಿ ರಾಜ್ಯಾಧ್ಯಕ್ಷ ಡಾ.ರವಿ ಮಂಡ್ಯ ಅಭಿಪ್ರಾಯಪಟ್ಟರು.
Also Read: ಭೀಕರ ಅಪಘಾತ | ಐದು ಜನ ಸ್ಥಳದಲ್ಲೇ ಸಾವು | ತಮಟಕಲ್ಲು ಬಳಿ ಘಟನೆ

ನಗರದ ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಎಬಿವಿಪಿ ಕರ್ನಾಟಕ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಅರಳುವ ಪ್ರತಿಭೆ ವಿದ್ಯಾರ್ಥಿ ಬರಹಗಾರರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಒಬ್ಬ ಬರಹಗಾರ ಉತ್ತಮ ಕೇಳುಗ, ನೋಡುಗನೂ ಆಗಿರಬೇಕು. ಹಾಗಾದಾಗ ಮಾತ್ರ ಬರಹದಲ್ಲಿ ನಾವೀನ್ಯತೆ, ಸೃಜನಶೀಲತೆ ಹೊರಹಮ್ಮಲು ಸಾಧ್ಯ ಎಂದರು.
ಬರಹಗಳು ಮನಸ್ಸನ್ನು ಅರಳಿಸುವಂತಿರಬೇಕು. ಬದಲಾಗಿ ಕೆರಳಿಸಬಾರದು. ಯಾವುದೇ ಸಮಾಜ ಅಥವಾ ವ್ಯಕ್ತಿಗೆ ನೋವು ತರುವ ಬರಹಕ್ಕಿಂತ ರಾಷ್ಟ್ರೀಯ ಹಿತಾಸಕ್ತಿ ಇರುವ ಬರಹಗಳು ಇಂದಿನ ಅಗತ್ಯವಾಗಿವೆ. ಲೇಖಕನಿಂದ ಸಮಾಜದಲ್ಲಿ ಪರಿವರ್ತನೆಯಾಗಬೇಕು ಎಂದು ಹೇಳಿದರು.
Also Read: ಔಡಲ ಚಿಗುರು ತಿಂದ 86 ಕುರಿ ಸಾವು
ಎಬಿವಿಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಮಾತನಾಡಿ, ರಾಷ್ಟ್ರೀಯ ವಿಚಾರಧಾರೆಯಡಿ ಕಾರ್ಯನಿರ್ವಹಿಸುತ್ತಿರುವ ಎಬಿವಿಪಿ ಒಂದು ವೈಚಾರಿಕ ಸಂಘಟನೆ ಎಂದರು.
ಅನೇಕ ವಿದ್ಯಾರ್ಥಿ ಸಂಘಟನೆಗಳ ನಡುವೆ ವಿಭಿನ್ನವಾಗಿ ವಿದ್ಯಾರ್ಥಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಎಬಿವಿಪಿ ಅತೀ ಹೆಚ್ಚು ಸದಸ್ಯರನ್ನು ಹೊಂದಿದ್ದು, ಸಾಕಷ್ಟು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. 1985 ರಲ್ಲಿ ಪ್ರಾರಂಭವಾಗಿದ್ದ ಅರಳುವ ಪ್ರತಿಭೆ ಬರಹಗಾರರ ಶಿಬಿರದ ಮೂಲಕ ಅನೇಕ ಲೇಖಕರು, ಸಾಹಿತಿಗಳು ಹೊರಹಿಮ್ಮಿದ್ದಾರೆ ಎಂದು ವಿವರಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಕೆ.ರಾಜೀವಲೋಚನ ಮಾತನಾಡಿ, ಬರಹದ ಹಂಬಲ ಇರುವ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಈ ಶಿಬಿರ ನಡೆದಿದ್ದು, ಖ್ಯಾತ ಸಾಹಿತಿಗಳು, ಪ್ರಾಧ್ಯಾಪಕರು ಮಾರ್ಗದರ್ಶನ ಮಾಡಿದ್ದಾರೆ. ಇಲ್ಲಿಂದ ಪ್ರೇರಣೆ ಪಡೆದು ದೇಶಕ್ಕೆ ಪೂರಕವಾದ ಸಾಹಿತಿಗಳಾಗಿ ಹೊರಹೊಮ್ಮಿದರೆ ಈ ಶ್ರಮ ಸಾರ್ಥಕ ಎಂದರು.
Also Read: Kannada Novel: 23. ಜಂಗಮಯ್ಯರ ಗೃಹ ನಿರ್ಮಾಣ
ಕಾರ್ಯಕ್ರಮದಲ್ಲಿ ಎಬಿವಿಪಿ ರಾಜ್ಯ ಉಪಾಧ್ಯಕ್ಷ ಡಾ.ಸ.ರಾ.ಲೇಪಾಕ್ಷ, ನಗರ ಕಾರ್ಯದರ್ಶಿ ರಾಜು ಹೊನ್ನಮರಡಿ, ಎಬಿವಿಪಿ ಪ್ರಮುಖರಾದ ಮಂಗಳಗೌರಿ, ಗೋಪಿ, ಕನಕರಾಜು ಕೋಡಿಹಳ್ಳಿ, ತಿಪ್ಪೇಶ್, ಆದರ್ಶ ಬಸೂರಿ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
