Connect with us

    Vedavati; ವೇದಾವತಿ ನದಿಯಲ್ಲಿ ಕೊಚ್ಚಿ ಹೋದ ಯುವಕ | ಪೊಲೀಸರು, ಸ್ಥಳೀಯರಿಂದ ಹುಡುಕಾಟ

    ವೇದಾವತಿ ನದಿ

    ಹೊಸದುರ್ಗ

    Vedavati; ವೇದಾವತಿ ನದಿಯಲ್ಲಿ ಕೊಚ್ಚಿ ಹೋದ ಯುವಕ | ಪೊಲೀಸರು, ಸ್ಥಳೀಯರಿಂದ ಹುಡುಕಾಟ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 20 AUGUST 2024

    ಹೊಸದುರ್ಗ: ಜಿಲ್ಲೆಯಲ್ಲಿ ವ್ಯಾಪಕ ಮಳೆ‌ ಆಗುತ್ತಿದ್ದು ಹಲವು ಹಳ್ಳಕೊಳ್ಳಗಳಿಗೆ ಜೀವಕಳೆ ಬಂದಿದೆ.

    ಭದ್ರಾ ಜಲಾಶಯದಿಂದ ವೇದಾವತಿ‌(Vedavati) ನದಿ ಮೂಲಕ ವಿವಿ ಸಾಗರಕ್ಕೆ ನೀರನ್ನೂ ಬಿಡಲಾಗಿದೆ. ಇದರೊಟ್ಟಿಗೆ ಮಳೆ ನೀರು ಸೇರಿ ರಭಸದಿಂದ ಹರಿಯುತ್ತಿದೆ.

    ಕ್ಲಿಕ್ ಮಾಡಿ ಓದಿ: Sri Raghavendra Swamy; ಚಿತ್ರದುರ್ಗದಲ್ಲಿ 3 ದಿನ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಪಂಚರಾತ್ರೋತ್ಸವ 

    ನದಿ ಹರಿಯುತ್ತಿರುವುದರಿಂದ ಮೀನು ಹಿಡಿಯಲು ವೇದಾವತಿ ನದಿಗೆ ತೆರಳಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿರುವ ಘಟನೆ ಜರುಗಿದೆ.

    ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಸಮೀಪ ಈ ಘಟನೆ ನಡೆದಿದೆ.

    ಬಾರಿ ಮಳೆಯಿಂದ ವೇದಾವತಿ ನದಿ ತುಂಬಿ ಹರಿಯುತ್ತಿದೆ. ಈ ವೇಳೆ ವೇದಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಕ್ಲಿಕ್ ಮಾಡಿ ಓದಿ: T.Raghumurthy; ತಾಲೂಕು ಮಟ್ಟದಲ್ಲಿ ಗ್ಯಾರೆಂಟಿ ಅನುಷ್ಠಾನ ಯೋಜನಾ ಸಮಿತಿ | ಟಿ.ರಘುಮೂರ್ತಿ

    ನಾಪತ್ತೆಯಾಗಿರುವ ಯುವಕನನ್ನು ಹೊಸದುರ್ಗ ತಾಲೂಕು ಜಾನಕಲ್ ಗ್ರಾಮದ ಶಿವು (35) ಎಂದು ಗುರುತಿಸಲಾಗಿದೆ.

    ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಶಿವು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

    ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top