
CHITRADURGA NEWS | 04 DECEMBER 2024
ಚಿತ್ರದುರ್ಗ: ಫೆಂಗಾಲ್ (Fengal) ಚಂಡಮಾರುತ ಸೃಷ್ಟಿಸಿದ ಅಕಾಲಿಕೆ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯ ಕಡಲೆ ಬೆಳೆಗಾರ ರೈತರು ಆತಂಕಕ್ಕೀಡಾಗಿದ್ದಾರೆ.
ತೋಟಗಾರಿಕೆ ಬೆಳೆಗಾರರು ಮಳೆಯಿಂದ ಸಂತಸಗೊಂಡಿದ್ದಾರೆ. ಮೆಕ್ಕೆಜೋಳ ಮತ್ತಿತರೆ ಬೆಳೆ ಬೆಳೆದಿದ್ದ ರೈತರು ಬಹುತೇಕ ಕಟಾವು ಮುಗಿಸಿದ್ದು, ಮಳೆಯ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಿಲ್ಲ.
ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆಯಲ್ಲಿ ಸ್ಥಿರವಾದ ರಾಶಿ ಅಡಿಕೆ ಬೆಲೆ
ಆದರೆ, ಕಳೆದೆರಡು ತಿಂಗಳಿಂದ ಜಿಲ್ಲೆಯ ಕಪ್ಪು ಮಣ್ಣು ಹೊಂದಿರುವ ರೈತರು ಕಡಲೆ ಬಿತ್ತನೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಸಾಂಪ್ರದಾಯಿಕ ಕಡಲೆ ಬೆಳೆಗಾರರಿದ್ದಾರೆ.
ಈ ರೈತರು ಮಳೆಯ ಬಗ್ಗೆ ತುಸು ಆತಂಕಗೊಂಡಿದ್ದಾರೆ. ಕಡಲೆ ಬಿತ್ತನೆಯಾಗಿ ಒಂದು, ಒಂದೂವರೆ ತಿಂಗಳಾಗಿರುವ ರೈತರಿಗೆ ಮಳೆ ಬೇಕು ಅನ್ನಿಸಿದರೆ, ಹೂವು ಕಾಣಿಸಿಕೊಂಡಿರುವ ಕಡಲೆ ಬೆಳೆಗಾರರು ಎಲ್ಲಿ ಹೂವು ಉದುರಿ ಹೋಗುತ್ತದೊ ಎನ್ನುವ ಚಿಂತೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ರೈತ ಉತ್ಪಾದಕ ಸಂಸ್ಥೆಗಳಿಂದ ಮೈಸೂರು ಕಿಸಾನ್ ಮಾಲ್ ಸ್ಥಾಪನೆ | ಅರ್ಜಿ ಸಲ್ಲಿಸಲು ಡಿ.16 ರವರೆಗೆ ವಿಸ್ತರಣೆ
ಕಡಲೆಯ ಹುಳಿ ಹೋದರೆ ಹುಳುವಿನ ಆತಂಕ:
ಕಡಲೆ ಕಾಯಿಗಟ್ಟುವಾಗ ಸಾಕಷ್ಟು ಹುಳಿಯ ಅಂಶವಿರುತ್ತದೆ. ಬೆಳೆಯ ಒಳಗೆ ಓಡಾಡಿದರೂ ತುರಿಕೆ ಬರುತ್ತದೆ. ಹಸಿ ಕಾಯಿ ಮುಟ್ಟಿ ರುಚಿ ನೋಡಿದರೆ ಹುಳಿಯಿರುತ್ತದೆ. ಹೀಗಿರುವುದೇ ಕಡಲೆಯ ಆರೋಗ್ಯದ ಗುಟ್ಟು. ಆದರೆ, ಮಳೆ ಹೆಚ್ಚಾದರೆ ಈ ಹುಳಿ ಅಂಶ ಹೋಗುತ್ತದೆ. ಆಗ ಕಡಲೆ ಬೆಳೆ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚು ಎಂದು ರೈತರು ಅಂದಾಜಿಸುತ್ತಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
