
CHITRADURGA NEWS | 18 MAY 2024
ಹೊಳಲ್ಕೆರೆ: ಶುಕ್ರವಾರ ಸುರಿದ ಮಳೆ ಹಾಗೂ ವಿಪರೀತ ಗಾಳಿಗೆ ಹೊಳಲ್ಕೆರೆ ತಾಲೂಕು, ರಾಮಗಿರಿ ಹೋಬಳಿ, ರಾಮಗಿರಿ ಗೊಲ್ಲರಹಟ್ಟಿಯ ರಮೇಶ್ ಎಂಬುವವರ ಬಾಳೆ ಬೆಳೆ ಹಾಳಾಗಿದೆ.
1 ಎಕರೆ 08 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದು, ಬಿರುಗಾಳಿ ಹಾಗೂ ಮಳೆಯಿಂದ ಬಾಳೆ ಬೆಳೆ ನಾಶಗೊಂಡಿದ್ದು, ಸುಮಾರು 8 ಲಕ್ಷ ರೂ. ನಷ್ಟವಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ತೆರೆದಿದೆ ಉದ್ಯೋಗಾವಕಾಶದ ಬಾಗಿಲು | 22ರಂದು ನೇರ ನೇಮಕಾತಿ ಸಂದರ್ಶನ
ಇದೇ ಗ್ರಾಮದ ಸಂತೋಷ್ ಎಂಬುವವರಿಗೆ ಸೇರಿದ 1 ಎಕರೆ 21 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆದಿದ್ದು ಅದೂ ಕೂಡಾ ಮಳೆಯಿಂದ ನೆಲಕ್ಕೆ ಮಲಗಿದೆ. ಕೊಳವೆ ಬಾವಿಯಲ್ಲಿ ನೀರಿಲ್ಲದ ಕಾರಣ ಟ್ಯಾಂಕರ್ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲಾಗಿತ್ತು.
ಈಗ ಒಂದು ಕಡೆ ಮಳೆ ಬಂದ ಖುಷಿಯಿದ್ದರೆ, ಮತ್ತೊಂದು ಕಡೆ ಬೆಳೆದ ಬಾಳೆಯೇ ಹಾಳಾದ ದುಃಖ ರೈತರಲ್ಲಿದೆ.
ಇದನ್ನೂ ಓದಿ: ಜಯದೇವ ಗುರುಗಳ ನೆಚ್ಚಿನ ಶಿಷ್ಯ ಜಯವಿಭವ ಸ್ವಾಮೀಜಿ | ಮುರುಘಮಠದಲ್ಲಿ ಸ್ಮರಣೋತ್ಸವ
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಬೆಳೆ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
