
CHITRADURGA NEWS | 04 NOVEMBER 2024
ಚಿತ್ರದುರ್ಗ: ಕಳೆದ ಮೂರು ತಿಂಗಳಿಂದ ನಿರಂತರ ಒಳಹರಿವು ಹೊಂದಿದ್ದ ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ (VaniVilasa Dam) ಜಲಾಶಯಕ್ಕೆ ಒಳಹರಿವು ಪೂರ್ಣ ಪ್ರಮಾಣದಲ್ಲಿ ಬಂದ್ ಆಗಿದೆ.
ನವೆಂಬರ್ 3 ಭಾನುವಾರ 462 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಆದರೆ, ನವೆಂಬರ್ 4 ಸೋಮವಾರ ಒಳಹರಿವು ಸಂಪೂರ್ಣ ನಿಂತು ಹೋಗಿದೆ.
ಇದನ್ನೂ ಓದಿ: ಚಿತ್ರದುರ್ಗ-ಚಳ್ಳಕೆರೆ ನಗರಸಭೆ ಉಪಚುನಾವಣೆ | ತೆರವಾದ ಸ್ಥಾನಗಳಿಗೆ ಮೀಸಲಾತಿ ನಿಗಧಿ
ಸೋಮವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ಈ ಅಂಶ ಬೆಳೆಕಿಗೆ ಬಂದಿದ್ದು, ಇಷ್ಟು ದಿನ ಹರಿಯುತ್ತಿದ್ದ ಹಳ್ಳ, ಕೊಳ್ಳಗಳ ಬಸಿಯೂ ನಿಂತು ಹೋಗಿದೆ.
ಭದ್ರಾದಿಂದ ಬರುತ್ತಿದ್ದ 700 ಕ್ಯೂಸೆಕ್ ನೀರನ್ನೂ ನಿಲ್ಲಿಸಲಾಗಿದೆ. ಎತ್ತಿನ ಹೊಳೆ ನೀರು ವಿವಿ ಸಾಗರ ತಲುಪಿದ್ದು ಗೊತ್ತೇ ಆಗಲಿಲ್ಲ. ಈ ಮೂಲಕ ಈ ವರ್ಷ ಕೂಡಾ ವಿವಿ ಸಾಗರ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯುವ ಕನಸು ಸದ್ಯಕ್ಕೆ ಅಲ್ಲಿಗೆ ನಿಂತಿದೆ.
ಇದನ್ನೂ ಓದಿ: ಸರ್ಕಾರಿ ವಕೀಲ ಜಗದೀಶ್ ಕಾರು ಭೀಕರ ಅಪಘಾತ | ಹಿಂಬದಿಯಿಂದ ಬಸ್ ಡಿಕ್ಕಿ
ನವೆಂಬರ್ 4 ಸೋಮವಾರಕ್ಕೆ ವಿವಿ ಸಾಗರಕ್ಕೆ 127.20 ಅಡಿ ನೀರು ಬಂದಿದೆ. ಜಲಾಶಯದಲ್ಲಿ ಸದ್ಯ 28.07 ಟಿಎಂಸಿ ನೀರು ಸಂಗ್ರಹವಾಗಿದೆ.
ಬಹುತೇಕ ಜಲಾಶಯ ಭರ್ತಿಯಾಗಿದ್ದು, ಕೋಡಿಯಲ್ಲಿ ನೀರು ಹರಿಯಲು ಇನ್ನೂ 3 ಅಡಿಯಷ್ಟು ಬಾಕಿ ಇದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಈ ದಿನಕ್ಕೆ 5 ಟಿಎಂಸಿ ನೀರು ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 5.35 ಅಡಿವರೆಗೆ ಹೆಚ್ಚು ನೀರು ಬಂದಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
