CHITRADURGA NEWS | 28 APRIL 2024
ಚಿತ್ರದುರ್ಗ: ಈ ವರ್ಷ ಬಿಸಿಲು ಬಹಳ ಹೆಚ್ಚಾಗಿದೆ ಸ್ವಾಮೀಜಿ..ಇಲ್ಲಿ ಅಷ್ಟೇ ಎಲ್ಲ ಕಡೆನೂ ಇದೇ ಪರಿಸ್ಥಿತಿಯಿದೆ ಸ್ವಾಮೀಜಿ…ಹೀಗೆ ಮಾತು ಶುರು ಮಾಡಿದ್ದು ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪತ್ನಿ ಗೀತಾ ಶಿವರಾಜ್ ಕುಮಾರ್ ಜತೆ ಭಾನುವಾರ ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಆಗಮಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ವೇಳೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ದಂಪತಿಗಳ ಆರೋಗ್ಯ ವಿಚಾರಿಸಿದರು.
‘ಬೆಳಿಗ್ಗೆಯಿಂದಲೇ ಬಿಸಿಲು ಶುರುವಾಗುತ್ತಿದೆ. ಕ್ಷೇತ್ರದ ಎಲ್ಲೆಡೆ ಸಂಚಾರ ನಡೆಸುತ್ತಿದ್ದೇವೆ. ಬಿಸಿಲಿಗೆ ಗೀತಾಗೆ ನಿನ್ನೆಯಿಂದ ಸ್ವಲ್ಪ ಗಂಟಲು ಕಿಚ್ಕಿಚ್ ಶುರುವಾಗಿದೆ’ ಎಂದು ಶಿವಣ್ಣ ಲೋಕಾಭಿರಾಮವಾಗಿ ಸ್ವಾಮೀಜಿಗಳ ಜತೆ ಮಾತನಾಡಿದರು. ‘ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಗೆಲುವಿನ ವಾತಾವರಣ ಕಂಡು ಬರುತ್ತಿದೆ. ನಮಗೆ ಈ ಬಾರಿ ಆತ್ಮ ವಿಶ್ವಾಸವಿದೆ. ಗೆಲುವು ನಮ್ಮದಾಗುತ್ತದೆ ಎಂದು. ಆದರೆ ಇದು ಸ್ಪರ್ಧೆ ಎಲ್ಲರೂ ಗೆಲುವಿಗೆ ಓಡುತ್ತಿದ್ದೇವೆ. ನೋಡೋಣ’ ಎಂದರು.
‘ಕ್ಷೇತ್ರದಲ್ಲಿ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗುತ್ತಿದೆ. ಗುರುಗಳ ಶ್ರೀ ರಕ್ಷೆ ಇಂದು ದೊರಕಿದೆ. ಎಲ್ಲೇಡೆ ಉತ್ತಮ ವಾತಾವರಣವಿದೆ’ ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದರು.
ಸ್ವಾಮೀಜಿಗಳಿಗೆ ಗೌರವ ಸಲ್ಲಿಸಿದ ಬಳಿಕ ಆಗಮಿಸಿದ ಅಭಿಮಾನಿಗಳ ಜತೆ ಕೊಂಚವೂ ಬೇಸರಿಸಿಕೊಳ್ಳದೆ ಫೋಟೋ ತೆಗೆಸಿಕೊಂಡು ನಗುತ್ತಲೆ ಪ್ರಯಾಣ ಬೆಳೆಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
