CHITRADURGA NEWS | 15 NOVEMBER 2025
ಹೊಳಲ್ಕೆರೆ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳು ಕಳೆದಿದ್ದರೂ ಸಹಕಾರಿ ಸಂಘಕ್ಕೆ ಸರಿಯಾದ ವ್ಯವಸ್ಥೆಯಿಲ್ಲದಂತಾಗಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತಕ್ಕೆ ಬಿಹಾರ ಚುನಾವಣೆ ಫಲಿತಾಂಶ ಸಾಕ್ಷಿ | ಹನುಮಂತೇಗೌಡ
ಸಹಕಾರ ಇಲಾಖೆ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ, ಬೆಂಗಳೂರು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಚಿತ್ರದುರ್ಗ, ಭರಮಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಚಿತ್ರದುರ್ಗ ತಾಲ್ಲೂಕಿನಲ್ಲಿ ಬರುವ ಎಲ್ಲಾ ಸಹಕಾರ ಮತ್ತು ಬ್ಯಾಂಕ್ಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಚಳುವಳಿ ಮೂಲಕ ಯಾವ್ಯಾವ ಯೋಜನೆಗಳನ್ನು ರೈತರು, ಬಡವರಿಗೆ ಕೊಡಬಹುದೆಂಬ ಕಾರಣಕ್ಕಾಗಿ ತ್ರಿಭುವನ್ ವಿಶ್ವವಿದ್ಯಾನಿಲಯವನ್ನು ಇದಕ್ಕಾಗಿಯೇ ತೆರೆಯಲಾಗಿದ್ದು, ವಿವಿಧ ಕೋರ್ಸ್ಗಳನ್ನು ಆರಂಭಿಸಿದೆ.
ಇದಕ್ಕೆ ನಾವೆಲ್ಲಾ ರಾಜಕಾರಣಿಗಳು ಕಾರಣ. ಈಗಿನ ಪ್ರಧಾನಿ ನರೇಂದ್ರ ಮೋದಿರವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಸಂಘಗಳ ಮೂಲಕ ಸಕ್ಕರೆ ಕಾರ್ಖಾನೆ, ವಿದ್ಯುತ್ ಉತ್ಪಾದನೆ, ವಿವಿಧ ಕಾರ್ಖಾನೆಗಳನ್ನು ಆರಂಭಿಸಲು ಉಚಿತವಾಗಿ ಭೂಮಿ, ವಿದ್ಯುತ್ ನೀಡಿದ ಪರಿಣಾಮ ಸಾವಿರಾರು ಸಂಖ್ಯೆಯಲ್ಲಿ ಫ್ಯಾಕ್ಟರಿಗಳು ತಲೆ ಎತ್ತಿದವು.
ಐದು ವರ್ಷಗಳ ನಂತರ ಬಂದ ಲಾಭದಲ್ಲಿ ಸರ್ಕಾರ ತೆರಿಗೆಯನ್ನು ಪಾವತಿಸಿಕೊಂಡಿತು. ಇದರಿಂದ ಕಾರ್ಖಾನೆಯ ಮಾಲೀಕರುಗಳಿಗೂ ಅನುಕೂಲವಾಯಿತು ಎಂದು ಹೇಳಿದರು.
ಇದನ್ನೂ ಓದಿ: ವಿದ್ಯಾ ವಿಕಾಸ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಸಹಕಾರಿ ಸಂಘಗಳಿಗೆ ಸರಿಯಾಗಿ ಸೌಲತ್ತುಗಳನ್ನು ನೀಡಲು ಕೇಂದ್ರ ಸರ್ಕಾರ ಮಹತ್ತರ ಕಾನೂನು ರೂಪಿಸಿದೆ. ಅಮಿತ್ಷಾ ಸಹಕಾರ ಮಂತ್ರಿಗಳಾಗಿ ಸಹಕಾರಿ ಚಳುವಳಿ ಮೂಲಕ ದೊಡ್ಡ ಕೊಡುಗೆ ನೀಡಬೇಕೆಂದಿದ್ದಾರೆ. ಸಹಕಾರ ಸಂಘಗಳೆಂದಾಕ್ಷಣ ಸರ್ಕಾರದ್ದಲ್ಲ. ಸದಸ್ಯರುಗಳೆ ನಡೆಸಿಕೊಂಡು ಹೋಗಬೇಕು ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎನ್.ತಿಪ್ಪೇಸ್ವಾಮಿ, ಭರಮಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎನ್.ಹನುಮಂತಪ್ಪ, ಭರಮಸಾಗರ ಬಿಜೆಪಿ.ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ದ್ಯಾಮಣ್ಣ, ಜೆ.ಆರ್.ರವಿಕುಮಾರ್, ಹೆಚ್.ಎಂ.ಮಂಜುನಾಥ್, ಜೆ.ವಿ.ಗಂಗಾಧರಪ್ಪ, ಇಲ್ಯಾಸ್ಉಲ್ಲಾ ಷರೀಫ್, ದಿಲೀಪ್ಕುಮಾರ್, ಶಿವಮೂರ್ತಿ, ದೀಪಕ್, ರಂಗಸ್ವಾಮಿ, ಮುಕೇಶ್, ತಿಪ್ಪಮ್ಮ, ಮೌನೇಶ್, ಕಗ್ಗಲಗೌಡ, ಶಮೀಂಪಾಷ, ಟಿ.ಆರ್.ಚನ್ನೇಶ್, ಮಂಜುನಾಥ್ನಾಯ್ಕ, ಕೃಷ್ಣಪ್ಪ, ತಿಪ್ಪೇಸ್ವಾಮಿ, ಗುರುಮೂರ್ತಿ, ಶರಣಮ್ಮ, ಕಲ್ಲೇಶ್ ಮತ್ತಿತರರು ಹಾಜರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
