
CHITRADURGA NEWS | 02 AUGUST 2025
ಚಿತ್ರದುರ್ಗ: ವಿದ್ಯಾರ್ಥಿಗಳು ತಾವು ಗಳಿಸುವ ಅಂಕಗಳ ಜೊತೆಗೆ ಕೌಶಲ್ಯವನ್ನು ಸಹಾಗಳಿಸಬೇಕಿದೆ ಎಂದು ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಕೃಷಿ ಪಂಪ್ಸೆಟ್ ಬಳಕೆಯಿಂದ ಇಂಧನ ಉಳಿತಾಯ | ಡಾ.ರಾಜಶೇಖರ್ ಭಾರ್ಕೆರ್

ನಗರದ ಗಾರೇಹಟ್ಟಿ ರಸ್ತೆಯಲ್ಲಿನ ಎಸ್.ಜೆ.ಎಂ.ವಿದ್ಯಾ ಪೀಠದ ಮತ್ತು ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಬ್ರಹನ್ಮಠ ಸಂಯುಕ್ತ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ವಿದ್ಯಾರ್ಥಿ ವೇದಿಕೆ ಉದ್ಘಾಟನೆ (ಕ್ರೀಡಾ ಹಾಗೂ ಇತರೆ ಚಟುವಟಿಕೆಗಳು) ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು,
ಇಂದಿನ ದಿನಮಾನದಲ್ಲಿ ನೀವುಗಳಿಸುವ ಅಂಕಗಳಿಗೆ ಹೆಚ್ಚಿನ ಮಾನ್ಯತೆ ಇಲ್ಲ, ಇದರೊಂದಿಗೆ ಯಾವುದಾದರಲ್ಲಿ ಕೌಶಲ್ಯವನ್ನು ಸಹಾಗಳಿಸಬೇಕಿದೆ. ಇದು ನಿಮ್ಮ ಮುಂದಿನ ಜೀವನಕ್ಕೆ ಉಪಯೋಗವಾಗಲಿದೆ ನಿಮಗೆ ಉತ್ತಮರಾದವರು ಮಾರ್ಗದರ್ಶಕರಾಗಿರಬೇಕು.
ಯಾವುದೇ ಸಿನಿಮಾದವರು ನಿಮ್ಮ ಜೀವನಕ್ಕೆ ಮಾರ್ಗದರ್ಶಕರಾಗಬಾರದು, ಅವರು ನೋಡುವುದಕ್ಕೆ ಸಿನಿಮಾದಲ್ಲಿ ಮಾತ್ರ ಚನ್ನಾಗಿ ಇರುತ್ತಾರೆ ಆದರೆ ಅವರ ಜೀವನ ತುಂಬ ಗಲೀಜಾಗಿರುತ್ತದೆ. ನೀವು ಭ್ರಮೆಯಿಂದ ಹೊರಗಡೆ ಬನ್ನಿ ಈ ವಯಸ್ಸಿನಲ್ಲಿ ನೀವು ತೆಗೆದುಕೊಳ್ಳುವ ನಿರ್ಣಯಗಳನ್ನು ನಿಮ್ಮ ಜೀವನದಲ್ಲಿ ಸಾಧನೆಯನ್ನು ಮಾಡಬಹುದಾಗಿದೆ ಎಂದರು.
ಇದನ್ನೂ ಓದಿ: ಕಾಡು ಕಾಯುವ ಮರ ಕೃತಿ ಲೋಕಾರ್ಪಣೆ ನಾಳೆ | ಸಾಹಿತಿ, ಪತ್ರಕರ್ತ ಜಡೆಕುಂಟೆ ಮಂಜುನಾಥ್ ಕಥಾ ಸಂಕಲನ
ಪ್ರಯತ್ನ ಶೀಲರಾಗಿ, ಕ್ರೀಯಾಶೀಲರಾಗಿ ಸಮಯವನ್ನು ಕಳೆಯ ಬೇಡಿ, ಒಂದು ನಿಮಿಷ ಹಾಳಾದರೆ ಒಂದು ದಿನ ಹಾಳಾದಂತೆ. ಮುಂದೆ ಸಮಯಕ್ಕೆ ಬೆಲೆಯನ್ನು ನೀಡಲು ಸಾಧ್ಯವಿಲ್ಲ, ಈಗ ಒಂದು ಕ್ಷಣವನ್ನು ವ್ಯರ್ಥ ಮಾಡದೆ ಸದುಪಯೋಗವನ್ನು ಪಡಿಸಿಕೊಳ್ಳಬೇಕಿದೆ.
ಸರ್ಕಾರದಿಂದ ರಾಜ್ಯದಲ್ಲಿ ನಡೆಸುವ ಅನುದಾನ ರಹಿತ ಕಾಲೇಜಿನಲ್ಲಿ ಅಭ್ಯಾಸವನ್ನು ಮಾಡಿದ ಒಂದೇ ಒಂದು ವಿದ್ಯಾರ್ಥಿ ಮೆಡಿಕಲ್ ಸೀಟನ್ನು ಪಡೆದಿಲ್ಲ. ನಮ್ಮ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಭೋಧನೆಯನ್ನು ಮಾಡಿದರೆ, ಮಕ್ಕಳು ಮುಂದೆ ಉತ್ತಮವಾದ ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದರು.
ಒಂದು ಕಾಲದಲ್ಲಿ ಕಾಲೇಜಿನ ಲೈಫ್ ಗೋಲ್ಡನ್ ಲೈಫ್ ಎನ್ನುತ್ತಿದ್ದರು, ಅದರೆ ಈಗ ಕಾಲೇಜಿನ ಲೈಫ್ ಕಾಂಪಿಟೇಟಿವ್ ಲೈಫ್ ಆಗಿದೆ. ಇಂದಿನ ಸ್ಪಾರ್ಧಾತ್ಮಕ ಯುಗದಲ್ಲಿ ಕಾಲೇಜಿನಲ್ಲಿಯೇ ಎಲ್ಲವನ್ನು ಕಲಿಯಬೇಕಿದೆ. ಇದಕ್ಕೆ ತಕ್ಕ ತಯಾರಿಯನ್ನು ಸಹಾ ಮಾಡಿಕೊಳ್ಳಬೇಕಿದ. ಇದಕ್ಕಾಗಿ ನಮ್ಮ ಬೃಹನ್ಮಠದಲ್ಲಿಯೂ ಸಹಾ ಮಕ್ಕಳಿಗೆ ಅಗತ್ಯವಾದ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ತರಬೇತಿಯನ್ನು ನೀಡಲಾಗುವುದು. ಎಲ್ಲರು ಸಹಕಾರ ನೀಡಬೇಕಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ | ಸಡಗರ, ಸಂಭ್ರಮದೊಂದಿಗೆ ಆಚರಿಸಲು ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಿ | ಡಿಸಿ ವೆಂಕಟೇಶ್
ಬೆಳೆಯಬೇಕು ಎಂಬ ವ್ಯಕ್ತಿಗೆ ಉತ್ಸಾಹ ಇದ್ದಲ್ಲಿ ಏನು ಬೇಕಾದರೂ ಸಹಾ ಸಾಧನೆಯನ್ನು ಮಾಡುತ್ತಾನೆ. ನಿಮ್ಮ ಅಭಿರುಚಿಗಳನ್ನು ಹವ್ಯಾಸಗಳನ್ನು ಬದಲಾವಣೆ ಮಾಡಿಕೊಳ್ಳಿ, ಸೋಮಾರಿತನದಿಂದ ವರ್ತಿಸಬೇಡಿ, ಸದಾ ಕ್ರೀಯಾಶ್ರೀಲರಾಗಿ ಇರಿ. ಇದರಿಂದ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ.
ಮನೆಯಲ್ಲಿ ಪೋಷಕರು ತಮ್ಮ ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲಲಿ ಎಂದು ಬಯಸುತ್ತಾರೆ. ಇದರಿಂದ ಬಡವರ ಮಕ್ಕಳು ಮೆಡಿಕಲ್ ಸೀಟು ಸಿಗುವಂತೆ ಮಾಡಲು ಸಾಧ್ಯವಿದೆ. ಛಲದಿಂದ ಏನನ್ನಾದರೂ ಸಹಾ ಸಾಧಿಸಬಹುದಾಗಿದೆ. ಬಡತನದಿಂದ ಬೆಳೆದ ವ್ಯಕ್ತಿ ದೇಶದಲ್ಲಿ ಏನನ್ನಾದರೂ ಸಹಾ ಸಾಧನೆಯನ್ನು ಮಾಡಲು ಸಾಧ್ಯವಿದೆ ಎಂದು ಶ್ರೀಗಳು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಕೆ.ತಿಮ್ಮಯ್ಯ ಮಾತನಾಡಿ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುವುದು ಬೇರೆ ಮಕ್ಕಳಿಗೆ ಸ್ಪೂರ್ತಿಯಾಗಲಿ, ಮುಂದಿನ ದಿನದಲ್ಲಿ ನಾವು ಸಹಾ ಈ ರೀತಿಯಾದ ಪ್ರತಿಭಾ ಪುರಸ್ಕಾರಕ್ಕೆ ಒಳಗಾಗಬೇಕೆಂಬ ಛಲ ಬರಲಿ ಎಂದು ಮಾಡಲಾಗುತ್ತದೆ.
ಇದನ್ನೂ ಓದಿ: ಒಳ ಮೀಸಲಾತಿ ಜಾರಿಗಾಗಿ ಸ್ವಾಭಿಮಾನಿ ಮಾದಿಗ ಮಹಾಸಭಾದಿಂದ ಬೃಹತ್ ಪ್ರತಿಭಟನೆ | ಡಿಸಿ ಕಚೇರಿ ಮುತ್ತಿಗೆ
ಕಾಲೇಜಿಗೆ ಹೊಸದಾಗಿ ಬರುವ ವಿದ್ಯಾರ್ಥಿಗಳು ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಭಯ ಹಸ್ತವನ್ನು ನೀಡುವ ಕಾರ್ಯಕ್ರಮ ಸ್ವಾಗತವಾದ ಕಾರ್ಯವಾಗಿದೆ. ನಮ್ಮ ಮುಂದಿರುವ ಎರಡು ವರ್ಷವನ್ನು ಸರಿಯಾದ ರೀತಿಯಲ್ಲಿ ಬಳಕೆಯನ್ನು ಮಾಡಿಕೊಂಡರೆ ಅದು ನಿಮ್ಮ ಬದುಕಿನಲ್ಲಿ ದಾರಿ ದೀಪವಾಗಲಿದೆ.
ಎರಡು ವರ್ಷದ ವಿದ್ಯಾಭ್ಯಾಸ ಸರಿಯಾದ ರೀತಿಯಲ್ಲಿ ಮಾಡಿದರೆ ಮುಂದಿನ 50 ವರ್ಷ ಚನ್ನಾಗಿ ಇರಲು ಸಾಧ್ಯವಿದೆ. ವಿದ್ಯಾಭ್ಯಾಸ ಬಿಟ್ಟು ಬೇರೆ ಕಡೆಗಳಲ್ಲಿ ಸಕ್ರಿಯವಾಗಿ ಇದ್ದರೆ ತಮ್ಮ ಮುಂದಿನ ಜೀವನ ಕಷ್ಟವಾಗಲಿದೆ.
ನಮ್ಮ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಪಿಯು ಅಭ್ಯಾಸಕ್ಕೆ ಬೇರೆ ಕಡೆಗೆ ಹೋಗುವುದರಿಂದ ನಮ್ಮ ಜಿಲ್ಲೆಯ ಫಲಿತಾಂಶ ಕಡಿಮೆಯಾಗಲು ಸಾಧ್ಯವಿದೆ, ಆದರೂ ಸಹಾ ಜಿಲ್ಲೆಯಲ್ಲಿ ಫಲಿತಾಂಶವನ್ನು ಉತ್ತಮಗೊಳಿಸಲು ಬೇಕಾದ ಸಕಲವಾದ ಕಾರ್ಯವನ್ನು ಈಗಿನಿಂದಲೇ ಕೈಗೊಳ್ಳಲಾಗಿದೆ ಎಂದರು.
2025ನೇ ಸಾಲಿನಲ್ಲಿ ದ್ವೀತೀಯ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿದ ವಿದ್ಯಾರ್ಥಿಗಳಾದ ಕಲಾ ವಿಭಾಗದ ಕೆ.ರಾಹುಲ್, ಆರ್.ಲೀಲಾವತಿ, ವಿಜ್ಞಾನ ವಿಭಾಗದ ವಿಕಾಸ ಹೆಚ್. ವಾಣೀಜ್ಯ ವಿಭಾಗದ ತಶ್ವಿನಿ ಜಿ.ಎಸ್.ರವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ನೂತನ ಡಿಸಿ ಕಚೇರಿ ಕಟ್ಟಡ ಮೆಡಿಕಲ್ ಕಾಲೇಜಿಗೆ | ಡಿಸಿ ಮನೆ, ತೋಟಗಾರಿಕೆ ಇಲಾಖೆ ಬಳಿ ಹೊಸ ಜಿಲ್ಲಾಡಳಿತ ಭವನ !
ಇದರೊಂದಿಗೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹೆಚ್.ಎಂ ಬಸವರಾಜಪ್ಪ, ಹಾಗೂ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯ ಪಾಲಕರಾದ ಅನಿತ ಡಿ.ಎಸ್.ಇವರನ್ನು ಗೌರವಿಸಲಾಯಿತು.
ಬೃಹನ್ಮಠ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಎಂ.ಜಿ.ರಾಜೇಶ್ ಕಾರ್ಯಕ್ರಮದ ಆದ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಮಲ್ಲೇಶ್ ಟಿ.ಆರ್. ಹಾಗೂ ಎಸ್.ಜೆ.ಎಂ.ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಎನ್.ಬಿ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
