By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಯರೇಹಳ್ಳಿಯಲ್ಲಿ ಚಲಾವಣೆಯಾಗಿದ್ದು 24 ಮತಗಳು ಮಾತ್ರ..!
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಯರೇಹಳ್ಳಿಯಲ್ಲಿ ಚಲಾವಣೆಯಾಗಿದ್ದು 24 ಮತಗಳು ಮಾತ್ರ..!

ಲೋಕಸಮರ 2024

ಯರೇಹಳ್ಳಿಯಲ್ಲಿ ಚಲಾವಣೆಯಾಗಿದ್ದು 24 ಮತಗಳು ಮಾತ್ರ..!

chitradurganews.com
Last updated: 26 April 2024 21:39
chitradurganews.com
1 year ago
Share
ಯರೇಹಳ್ಳಿ
ಯರೇಹಳ್ಳಿ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 26 APRIL 2024

ಚಿತ್ರದುರ್ಗ: ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲೂಕಿನ ನಡುವೆ ಗುಡ್ಡಗಳ ನಡುವೆ ಸಿಲುಕಿಕೊಂಡಂತಿರುವ ಯರೇಹಳ್ಳಿ ಗ್ರಾಮದ ಜನ ಮತದಾನ ಬಹಿಷ್ಕಾರ ಮಾಡುವ ತೀರ್ಮಾನ ಮಾಡಿದ್ದರು.

ಅದರಂತೆ, ಗುರುವಾರ ಸಂಜೆ ಗ್ರಾಮಕ್ಕೆ ಮತಯಂತ್ರಗಳನ್ನು ಹೊತ್ತೊಯ್ದ ಬಸ್ಸಿನ ಬಳಿಯೂ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು.

ಇದನ್ನೂ ಓದಿ: ಮದುವೆ ಮಂಟಪದಿಂದ ಮತಗಟ್ಟೆಗೆ ಬಂದ ನವ ದಂಪತಿಗಳು | ಮಾಂಗಲ್ಯ ಧಾರಣೆ ನಂತರ ಮತದಾನ

ಇಂದು ದೇಶದಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ಯರೇಹಳ್ಳಿ ಗ್ರಾಮದ ಜನ ಮತದಾನ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದು ಕುಳಿತಿದ್ದರು. ವಿವಿಧ ಹಂತದ ಅಧಿಕಾರಿ, ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡಿ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹಾಗೂ ಉಪವಿಭಾಗಾಧಿಕಾರಿ ಕಾರ್ತಿಕ್ ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿ ಜನರ ಮನವೊಲಿಸಿದ್ದರು.

ಇದನ್ನೂ ಓದಿ: ಬಿಸಿಲಿನ ತಾಪ ಲೆಕ್ಕಿಸದ ಮತದಾರ | ಮಠಾಧೀಶರಿಂದ ಮತ ಚಲಾವಣೆ | ಬೆಳಗಿನಿಂದ ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು ?

ಆದರೆ, ದಿನದ ಕೊನೆಯಲ್ಲಿ ಮತದಾನ ಪ್ರಕ್ರಿಯೆ ಮುಗಿದಾಗ ಯರೇಹಳ್ಳಿಯಲ್ಲಿ ಚಲಾವಣೆ ಆಗಿರುವುದು ಕೇವಲ 24 ಮತಗಳು ಎಂದು ಗೊತ್ತಾಗಿದೆ.

ಇಲ್ಲಿ 24 ಮತಗಳು ಚಲಾವಣೆ ಆಗಿರುವುದರಿಂದ ಮರು ಮತದಾನದ ಸಾಧ್ಯತೆ ಕಡಿಮೆ. ಆದರೆ, ಗ್ರಾಮದ ಸಮಸ್ಯೆಯನ್ನು ಬಗೆಹರಿಸಲು ಜನ ಪಟ್ಟು ಹಿಡಿದಿರುವುದು ಚುನಾವಣೆ ಬಹಿಷ್ಕಾರದ ಮೂಲಕ ಬೆಳಕಿಗೆ ಬಂದಂತಾಗಿದೆ.

ಮತದಾನ ಬಹಿಷ್ಕಾರಕ್ಕೆ ಕಾರಣವೇನು:

ಚಿತ್ರದುರ್ಗದಿಂದ ಇಂಗಳದಾಳು ಮಾರ್ಗವಾಗಿ ಕುರುಮರಡಿಕೆರೆ ದಾಟಿ ಸಾಗಿದಾಗ ಗುಡ್ಡಗಳ ನಡುವೆ ಯರೇಹಳ್ಳಿ ಸಿಗುತ್ತದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಡೆಯ ಗ್ರಾಮ. ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಕೊಳಾಳು ಮಾರ್ಗದಲ್ಲಿ ಬಂದಾಗಲೂ ಒಂದು ಗುಡ್ಡ ಹತ್ತಿ ಇಳಿದು, ಹಳ್ಳ ದಾಟಿದರೆ ಯರೇಹಳ್ಳಿ ದರ್ಶನವಾಗುತ್ತದೆ.

ಇದನ್ನೂ ಓದಿ: ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿ ಸಾವು 

ಈ ಕುಗ್ರಾಮ ಯರೇಹಳ್ಳಿಗೆ ಇಂದಿಗೂ ಮೊಬೈಲ್ ನೆಟ್‍ವರ್ಕ್ ಇಲ್ಲ. ಪೋನ್ ಮಾಡುವುದಾದರೆ ಪಕ್ಕದ ಗುಡ್ಡ ಅಥವಾ ಎತ್ತರದ ಪ್ರದೇಶದ ಜಮೀನಿಗೆ ಹೋಗಬೇಕು.

ಕೆಲವರು ಗ್ರಾಮದ ಪಕ್ಕದ ಜಮೀನೊಂದರಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನಿಟ್ಟು ಮೊಬೈಲ್ ನೆಟ್‍ವರ್ಕ್ ಸಿಗುವ ಪಾಯಿಂಟ್ ಮಾಡಿಕೊಂಡು, ಸಂಜೆ ಹೊತ್ತು ಅಲ್ಲಿಗೆ ಹೋಗಿ ಮಾತನಾಡಿಕೊಂಡು ಬರುವ ಪದ್ಧತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬಿಎಸ್ಸಿ ಆಗ್ರಿ ಪ್ರವೇಶ ಪರೀಕ್ಷೆಗೆ ಪ್ರಾಯೋಗಿಕ ತರಬೇತಿ

ಮೊಬೈಲ್ ನೆಟ್‍ವರ್ಕ್ ಸಿಗದ ಕಾರಣಕ್ಕೆ ಸಾಕಷ್ಟು ಸಮಸ್ಯೆಗಳಾಗಿವೆ. ಊರಿಂದ ಹೊರಗೆ ಹೋದವರು ಆಕಸ್ಮಿಕವಾಗಿ ಏನಾದರೂ ಆದರೆ, ಮನೆಗೆ ವಿಷಯ ಮುಟ್ಟಿಸಲು ಪಕ್ಕದ ಊರಿನವರಿಗೆ ಪೋನ್ ಮಾಡಿ ಅಲ್ಲಿಂದ ಕಳಿಸುವ ಸ್ಥಿತಿಯಿದೆ.

ಇನ್ನೂ, ಸುಮಾರು 20 ವರ್ಷಗಳಿಗಿಂತ ಹಿಂದೆ ಇಲ್ಲಿ ವಿದ್ಯುತ್ ಸಮಸ್ಯೆಯಾಗಿ ಮನೆಯ ಮೀಟರ್‍ಗಳೆಲ್ಲಾ ಸುಟ್ಟು ಹೋಗಿದ್ದವು. ಒಂದಿಷ್ಟು ಮನೆಗಳು ಸುಟ್ಟು ಹೋಗಿದ್ದವು.

ಇದನ್ನೂ ಓದಿ: KAS ಪರೀಕ್ಷೆಗೆ ಉಚಿತ ತರಬೇತಿ

ಆನಂತರ ಈ ಗ್ರಾಮಕ್ಕೆ ಸರಿಯಾದ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ. ಇಂದಿಗೂ ನೀರಾವರಿಗೆ ಬಳಸುವ ವಿದ್ಯುತ್ತನ್ನೇ ಮನೆಗಳಿಗೆ ಬಳಕೆ ಮಾಡಲಾಗುತ್ತಿದೆ. ರಾತ್ರಿ ವೇಳೆ ಇಲ್ಲಿ ವಿದ್ಯುತ್ ಇರುವುದಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಿದೆ. ಬೇಸಿಗೆ ಸಂದರ್ಭದಲ್ಲಿ ಮಲಗುವುದು ಕಷ್ಟ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BoycottChitradurgaLok SabhaproblemvillageYarehalliಕುಗ್ರಾಮಚಿತ್ರದುರ್ಗಮತದಾನ ಬಹಿಷ್ಕಾರಯರೇಹಳ್ಳಿಲೋಕಸಭೆಸಮಸ್ಯೆ
Share This Article
Facebook Email Print
Previous Article ಮಠಾಧೀಶರಿಂದ ಮತದಾನ ಬಿಸಿಲಿನ ತಾಪ ಲೆಕ್ಕಿಸದ ಮತದಾರ | ಮಠಾಧೀಶರಿಂದ ಮತ ಚಲಾವಣೆ | ಬೆಳಗಿನಿಂದ ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು ?
Next Article arecanut price list ಚುನಾವಣೆ ದಿನ ಅಡಿಕೆ ರೇಟ್ ಎಷ್ಟಿತ್ತು ಗೊತ್ತಾ ?
Leave a Comment

Leave a Reply Cancel reply

Your email address will not be published. Required fields are marked *

ಬೆಳೆ ಸಮೀಕ್ಷೆ | ರೈತರೇ Mobile App ಮೂಲಕ ಮಾಹಿತಿ ಅಪ್‍ಲೋಡ್ ಮಾಡಬಹುದು | ಅದು ಹೇಗೆ ಎಂದು ತಿಳಿಯಿರಿ 
ಮುಖ್ಯ ಸುದ್ದಿ
arecanut price list
ಅಡಿಕೆ ಧಾರಣೆ | ಜುಲೈ 1 | ಯಾವ ಅಡಿಕೆಗೆ ಎಷ್ಟು ರೇಟ್‌
ಅಡಕೆ ಧಾರಣೆ
ರಕ್ತದಾನದಿಂದ ಆರೋಗ್ಯ ವೃದ್ಧಿ | ಎಂ.ಕೆ.ರವೀಂದ್ರ
ಮುಖ್ಯ ಸುದ್ದಿ
SSLC ಪರೀಕ್ಷೆ-3 | ಜುಲೈ 5 ರಿಂದ ಆರಂಭ | ಜಿಲ್ಲೆಯಲ್ಲಿ 24 ಪರೀಕ್ಷಾ ಕೇಂದ್ರ | 7453 ವಿದ್ಯಾರ್ಥಿಗಳು
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up