By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಗೋವಿಂದ ಕಾರಜೋಳ ಭಾಷಣಕ್ಕೆ ಆಕ್ಷೇಪ | ಆರೆಸ್ಸೆಸ್ಸ್‌, ಮೋಹನ್‌ ಭಾಗವತ್‌ ಹೆಸರಿಗೆ ತಕರಾರು
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಗೋವಿಂದ ಕಾರಜೋಳ ಭಾಷಣಕ್ಕೆ ಆಕ್ಷೇಪ | ಆರೆಸ್ಸೆಸ್ಸ್‌, ಮೋಹನ್‌ ಭಾಗವತ್‌ ಹೆಸರಿಗೆ ತಕರಾರು

ಮುಖ್ಯ ಸುದ್ದಿ

ಗೋವಿಂದ ಕಾರಜೋಳ ಭಾಷಣಕ್ಕೆ ಆಕ್ಷೇಪ | ಆರೆಸ್ಸೆಸ್ಸ್‌, ಮೋಹನ್‌ ಭಾಗವತ್‌ ಹೆಸರಿಗೆ ತಕರಾರು

chitradurganews.com
Last updated: 5 April 2025 17:04
chitradurganews.com
2 months ago
Share
GOVINDA KARAJOLA
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 5 APRIL 2025

ಚಿತ್ರದುರ್ಗ: ಸಂಸದ ಗೋವಿಂದ ಕಾರಜೋಳ ತಮ್ಮ ಭಾಷಣದಲ್ಲಿ ಆರೆಸ್ಸೆಸ್‌ ಹಾಗೂ ಮೋಹನ್‌ ಭಾಗವತ್‌ ಹೆಸರು ಪ್ರಸ್ತಾಪಿಸಿದ್ದಕ್ಕೆ ಅಸಮಧಾನ ವ್ಯಕ್ತವಾಗಿದೆ.

ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಆಯೋಜಿಸಿದ್ದ ಡಾ.ಬಾಬು ಜಗಜೀವನ್‌ರಾಂ ಜಯಂತಿ ಕಾಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ಭಾಷಣಕ್ಕೆ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.

ಇದನ್ನೂ ಓದಿ: ಬೆಸ್ಕಾಂ ಎಇಇ ಸೇರಿ ಮೂರು ಜನರಿಗೆ ಜೈಲು ಶಿಕ್ಷೆ | ವಿದ್ಯುತ್‌ ತಗುಲಿ ಬಾಲಕ ಮೃತಪಟ್ಟಿದ್ದ ಪ್ರಕರಣ

ಬಾಬು ಜಗಜೀವನ್‌ರಾಂ ಜಯಂತಿ ಕಾಯಕ್ರಮದಲ್ಲಿ ಭಾಗವಹಿಸಿದ್ದ ಸಂಸದರು, ಒಳಮೀಸಲಾತಿ ವಿಚಾರದಲ್ಲಿ ಆರೆಸ್ಸೆಸ್ಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಹಾಯ ಮಾಡಿದ್ದಾರೆ ಎಂದು ಹೇಳಿದರು.

ಈ ಹೇಳಿಕೆಗೆ ಸಭೆಯಲ್ಲಿದ್ದ ಬೀಸನಹಳ್ಳಿ ಜಯ್ಯಣ್ಣ, ಹನುಮಂತಪ್ಪ ದುರ್ಗ, ಮೈಲಾರಪ್ಪ ಸೇರಿದಂತೆ ಕೆಲವರು ಅಸಮಧಾನ ವ್ಯಕ್ತಪಡಿಸಿ, ಆರೆಸ್ಸೆಸ್‌ ಹಾಗೂ ಮೋಹನ್‌ ಭಾಗವತ್‌ ಹೆಸರು ಇಲ್ಲಿ ತರಬೇಡಿ, ಒಳಮೀಸಲಾತಿಗಾಗಿ ಸಮುದಾಯ ಸುಧೀರ್ಘ ಹೋರಾಟ ನಡೆಸಿದೆ  ಎಂದು ಭಾಷಣಕ್ಕೆ ಅಡ್ಡಿ ಮಾಡಿದರು.

ಇದನ್ನೂ ಓದಿ: ಮರದ ದಿಮ್ಮಿ ಕಳ್ಳತನ ಯತ್ನ | ಗಿಡ ನೆಟ್ಟು ಬೆಳೆಸುವ ಶಿಕ್ಷೆ ವಿಧಿಸಿದ ನ್ಯಾಯಾಲಯ

ಆದರೆ, ಇಷ್ಟಕ್ಕೆ ಸುಮ್ಮನಾಗದ ಸಂಸದರು, ಒಳಮೀಸಲಾತಿ ವಿಚಾರದಲ್ಲಿ ಆರೆಸ್ಸೆಸ್ಸ್‌, ಬಿಜೆಪಿ ಹಾಗೂ ಮೋಹನ್‌ ಭಾಗವತ್‌ ಅವರನ್ನು ಸ್ಮರಿಸಬೇಕು. ನಮಗೆ ಸಹಾಯ ಮಾಡಿದವರನ್ನು ನೆನೆಯುವುದು ನಮ್ಮ ಕರ್ತವ್ಯ. ಹೀಗೆ ಅಡ್ಡಿ ಮಾಡಿ ಸಮುದಾಯದ ದಿಕ್ಕು ತಪ್ಪಿಸಬೇಡಿ ಎಂದರು.

ತರಾಸು ರಂಗಮಂದಿರದಲ್ಲಿ ನಡೆದ ಘಟನೆಯ ವೀಡಿಯೋ ನೋಡಿ:

ನಾನು ಮೋಹನ್‌ ಭಾಗವತ್‌ ಅವರನ್ಳು ಭೇಟಿಯಾಗಿ ಒಳಮೀಸಲಾತಿ ಬಗ್ಗೆ ವಿವರಿಸಿದ್ಅದೆ. ನಮ್ಮ ಅಹವಾಲು ಸ್ವೀಕಾರ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಒಳಮೀಸಲಾತಿ ಭಿಕ್ಷೆಯಲ್ಲ. ಅದು ಅವರ ಹಕ್ಕು ಎಂದು ಹೇಳಿ, ಅಟಾರ್ನಿ ಜನರಲ್‌, ಸಾಲಿಸಿಟಿರ್‌ ಜನರಲ್‌ ಅವರ ಸಭೆ ನಡೆಸಿ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿ ಆದೇಶ ಬರುವಂತೆ ಮಾಡಿರುವುದನ್ನು ಹೇಳಬೇಕಾಗುತ್ತದೆ. ಈ ಹಿನ್ನೆಲೆ ಎಲ್ಲರಿಗೂ ಗೊತ್ತಾಗಬೇಕು.

ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ? 

ಈ ದೇಶದಲ್ಲಿ ಒಳಮೀಸಲಾತಿಗಾಗಿ 30 ವರ್ಷ ಹೋರಾಟ ಮಾಡಿದ್ದೀರಿ. ಈ ಸಮುದಾಯಕ್ಕೆ ಅನ್ಯಾಯ ಆಗಿದೆ ಎನ್ನುವುದನ್ನು ಕೇಳಲು ಇಲ್ಲೀವರೆಗೆ ಮೋಹನ್‌ ಭಾಗವತ್‌ ಅವರು ಬಂದಿದ್ದರು. ಈ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ವಿವರಿಸಿದ್ದಾರೆ. ನಾನು ಇಲ್ಲಿ ಆರೆಸ್ಸೆಸ್‌ ಸೇರಿ, ಮತ ಹಾಕಿ ಎಂದು ಹೇಳಿಲ್ಲ. ಭಾಗವತ್‌ ಅವರಿಗೆ ಜಾತಿ ವ್ಯವಸ್ಥೆ ಬಗ್ಗೆ ಚೆನ್ನಾಗಿ ಗೊತ್ತಿರುವುದರಿಂದ ಈ ಅನ್ಯಾಯವನ್ನು ಮೋದಿ ಅವರ ಗಮನಕ್ಕೆ ತಂದಿದ್ದಾರೆ. ನಮಗೆ ಸಹಾಯ ಮಾಡಿದವರನ್ನು ನೆನಪಿಸುವ ಸಲುವಾಗಿ ಇಲ್ಲಿ ಪ್ರಸ್ತಾಪಿಸಿದ್ದೇನೆ ಎಂದರು.

ಆದರೆ, ಸಂಸದರ ಭಾಷಣಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾಗ, ಒಂದು ಹಂತದಲ್ಲಿ ಅವರನ್ನು ಹೊರಗೆ ಹಾಕಿ ಎಂದು ಹೇಳಿದರು. ಅಸಮಧಾನಿತರನ್ನು ಕೂರಿಸಲು ಪೊಲೀಸರು ಹರಸಾಹಸ ಮಾಡಿದರು.

ಇದನ್ನೂ ಓದಿ: ಬಿಸಿಲಿಗೆ ನಿಮ್ಮ ಮುಖದ ಚರ್ಮ ಸುಡುತ್ತಿದೆಯೇ? ಹಾಗಾದ್ರೆ ಕಿಚನ್ನಲ್ಲಿ ಸಿಗುವ ಈ 6 ಪದಾರ್ಥಗಳನ್ನು ಮುಖಕ್ಕೆ ಬಳಸಿ

ಆಗಸ್ಟ್‌ 1 ರಂದೇ ಸುಪ್ರೀಂ ಕೋರ್ಟ್‌ ಒಳಮೀಸಲಾತಿ ಜಾರಿ ಮಾಡಲು ಆದೇಶ ಮಾಡದೆ. ಆಂದ್ರಪ್ರದೇಶ, ತೆಲಂಗಾಣ, ಹರಿಯಾಣ, ರಾಜಾಸ್ಥಾನಗಳಲ್ಲಿ ಜಾರಿಯಾಗಿದೆ. ಆದರೆ, ಕರ್ನಾಟಕದಲ್ಲಿ ಜಾರಿ ಆಗುತ್ತಿಲ್ಲ. ಇದಕ್ಕೆ ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಎಂದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Govinda KarjolaInternal ReservationMohan BhagwatMPObjectionPrime Minister Narendra ModiRSSspeechTarasu Theaterಆಕ್ಷೇಪಆರೆಸ್ಸೆಸ್ಸ್ಒಳಮೀಸಲಾತಿಗೋವಿಂದ ಕಾರಜೋಳತರಾಸು ರಂಗಮಂದಿರಪ್ರಧಾನಿ ನರೇಂದ್ರ ಮೋದಿಭಾಷಣಮೋಹನ್‌ ಭಾಗವತ್‌ಸಂಸದ
Share This Article
Facebook Email Print
Previous Article ಹಳ್ಳಿಗಳ ಅಭಿವೃದ್ಧಿ ದೇಶದ ಪ್ರಗತಿಗೆ ಬುನಾದಿ | ಡಾ.ರವಿ
Next Article ಮುರುಘಾಮಠ | ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 14 ನವಜೋಡಿ ದಾಂಪತ್ಯಕ್ಕೆ ಪದಾರ್ಪಣೆ
Leave a Comment

Leave a Reply Cancel reply

Your email address will not be published. Required fields are marked *

arecanut price list
ಅಡಿಕೆ ಧಾರಣೆ | ಜೂನ್‌ 17 | ಇಂದಿನ ಮಾರುಕಟ್ಟೆ ಪೂರ್ಣ ವಿವರ
ಅಡಕೆ ಧಾರಣೆ
ಜೇನು ಕೃಷಿಯನ್ನು ಸಮಗ್ರ ಕೃಷಿಯನ್ನಾಗಿ ಅಳವಡಿಸಿಕೊಳ್ಳಿ | ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ
ಮುಖ್ಯ ಸುದ್ದಿ
ಎಬಿವಿಪಿ ಹಿರಿಯೂರು ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಪ್ರಾಧ್ಯಾಪಕ ರಂಗಸ್ವಾಮಿ
ಹಿರಿಯೂರು
APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up