By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಮಿಸ್ಟರ್‌ ಅಂಡ್‌ ಮಿಸ್‌ ಜೆಎಂಐಟಿ ಸ್ಪರ್ಧೆ | ಶೈಲೇಂದ್ರ, ರಕ್ಷಿತಾ ಆಯ್ಕೆ | ಸ್ಟೈಲಿಷ್‌ ವಾಕ್‌, ಸ್ಟೈಲ್‌ ಐಕಾನ್‌ ಪೈಪೋಟಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಮಿಸ್ಟರ್‌ ಅಂಡ್‌ ಮಿಸ್‌ ಜೆಎಂಐಟಿ ಸ್ಪರ್ಧೆ | ಶೈಲೇಂದ್ರ, ರಕ್ಷಿತಾ ಆಯ್ಕೆ | ಸ್ಟೈಲಿಷ್‌ ವಾಕ್‌, ಸ್ಟೈಲ್‌ ಐಕಾನ್‌ ಪೈಪೋಟಿ

Life Style

ಮಿಸ್ಟರ್‌ ಅಂಡ್‌ ಮಿಸ್‌ ಜೆಎಂಐಟಿ ಸ್ಪರ್ಧೆ | ಶೈಲೇಂದ್ರ, ರಕ್ಷಿತಾ ಆಯ್ಕೆ | ಸ್ಟೈಲಿಷ್‌ ವಾಕ್‌, ಸ್ಟೈಲ್‌ ಐಕಾನ್‌ ಪೈಪೋಟಿ

chitradurganews.com
Last updated: 8 May 2025 20:03
chitradurganews.com
1 month ago
Share
Selected as Rakshit Miss J.M.I.T
ರಕ್ಷಿತ ಮಿಸ್ ಜೆ.ಎಂ.ಐ.ಟಿ ಯಾಗಿ ಆಯ್ಕೆ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 08 MAY 2025

ಚಿತ್ರದುರ್ಗ: Student Life is Golden Life ಎಂಬ ಮಾತಿದೆ. ಈ ಹಂತದಲ್ಲಿ ಬದುಕು ಕಟ್ಟಿಕೊಳ್ಳಬಹುದು. ಬದುಕನ್ನು ಸರ್ವನಾಶ ಕೂಡಾ ಮಾಡಿಕೊಳ್ಳಬಹುದು. ಆದರೆ, ಇದೆಲ್ಲದರ ನಡುವೆ ಆಟ, ಪಾಠ, ಮನರಂಜನೆ ಎಲ್ಲದರಲ್ಲೂ ಹಿತ, ಮಿತವಾಗಿ ಭಾಗವಹಿಸಿದರೆ ವಿದ್ಯಾರ್ಥಿ ಜೀವನ ನಿಜಕ್ಕೂ ಸ್ವರ್ಗ ಎನ್ನುವುದಕ್ಕೆ ಮೇಲಿನ ಮಾತು ಅನ್ವರ್ಥ.

ಅಂಥಹ ಅವಕಾಶಗಳು, ಬದುಕಿಗೆ ಬಣ್ಣ ಹಚ್ಚಿ ಸಂಭ್ರಮಿಸುವ ಕ್ಷಣಗಳು ವಿದ್ಯಾರ್ಥಿ ಜೀವದಲ್ಲೇ ಎದುರಾಗುತ್ತವೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ | ಪಾಕಿಸ್ತಾನಕ್ಕೆ ತಕ್ಕ ಉತ್ತರ | ಕೆ.ಎಸ್.ನವೀನ್

ಓದು, ಪರೀಕ್ಷೆಯಲ್ಲಿ ಮಗ್ನರಾಗುವ ವಿದ್ಯಾರ್ಥಿಗಳಿಗೆ ಬದುಕು ಹಾಗೂ ಜಗತ್ತಿನ ಮತ್ತೊಂದು ಮಜಲನ್ನೂ ಪರಿಚಯಿಸುವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು.

ಈ ಪೀಠಿಕೆಗೆ ಕಾರಣ, ನಗರದ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ಪೂರ್ತಿ-2025 ರ ಅಂಗವಾಗಿ ಮಿಸ್ಟರ್ ಜೆ.ಎಂ.ಐ.ಟಿ ಅಂಡ್ ಮಿಸ್ ಜೆ.ಎಂ.ಐ.ಟಿ ಸ್ಪರ್ಧೆ.

ಇದನ್ನೂ ಓದಿ: ವಿವಿಧ ಹುದ್ದೆ | ಇಂದೇ ಅರ್ಜಿ ಸಲ್ಲಿಸಿ

ಸ್ಪರ್ಧೆಯಲ್ಲಿ ಇ&ಸಿ ವಿಭಾಗದ ಶೈಲೆಂದ್ರ ಮಿಸ್ಟರ್ ಜೆ.ಎಂ.ಐ.ಟಿ ಯಾಗಿ ಆಯ್ಕೆಯಾದರೆ, ಪ್ರಥಮ ವರ್ಷದ ತರುಣ್ ಪ್ರಥಮ ರನ್ನರ್ ಆಫ್ ಹಾಗೂ ಸಿವಿಲ್ ವಿಭಾಗದ ತಿಪ್ಪೇಸ್ವಾಮಿ ದ್ವೀತಿಯ ರನ್ನರ್ ಆಫ್ ಆಗಿ ಆಯ್ಕೆಯಾದರು.

ಸಿಎಸ್ ಇಂಜಿನಿಯರಿಂಗ್ ವಿಭಾಗದ ರಕ್ಷಿತ ಮಿಸ್ ಜೆ.ಎಂ.ಐ.ಟಿ ಯಾಗಿ ಆಯ್ಕೆಯಾದರೆ, ತೃಪ್ತಿ ಎ.ಜೆ ಪ್ರಥಮ ರನ್ನರ್ ಆಫ್ ಹಾಗೂ ಪ್ರಥಮ ವರ್ಷದ ಪ್ರಾಂಜಲ ದ್ವೀತಿಯ ರನ್ನರ್ ಆಫ್ ಆಯ್ಕೆಯಾದರು. ಸಿಎಸ್ ವಿಭಾಗದ ತೃಪ್ತಿ ಎ.ಜೆ-ಬೆಸ್ಟ್ ಅಟೈರ್, ಪ್ರಾಂಜಲ-ಸ್ಟೈಲೀಷ್‌ ವಾಕ್ ಹಾಗೂ ಇ&ಸಿ ವಿಭಾಗದ ಸ್ಪೂರ್ತಿ -ಸ್ಟೈಲ್‌ ಐಕಾನ್ ಆಗಿ ಆಯ್ಕೆಯಾದರು.

ಇದನ್ನೂ ಓದಿ: ಭಾರತ ಚೀನಾ ಯುದ್ಧದಲ್ಲಿ ದೇಶಕ್ಕಾಗಿ ಚಿನ್ನದ ಕಿರೀಟ ಕೊಡುಗೆ | ಜಯವಿಭವ ಶ್ರೀಗಳ ಸ್ಮರಣೆ

ಪ್ರಥಮ ವರ್ಷದ ತರುಣ್-ಬೆಸ್ಟ್ ಅಟೈರ್, ಸಿಎಸ್‌ಇ ವಿಭಾಗದ ಮಿನಾಲ್-ಸ್ಟೈಲಿಷ್ ವಾಕ್ ಹಾಗೂ ಮೆಕ್ಯಾನಿಕಲ್ ವಿಭಾಗದ ರಾಜು- ಸ್ಟೈಲ್‌ ಐಕಾನ್ ಆಗಿ ಆಯ್ಕೆಯಾದರು.

Rakshita and Shailendra were selected as Miss JMIT and Mr JMIT
ರಕ್ಷಿತಾ ಹಾಗೂ ಶೈಲೇಂದ್ರ ಮಿಸ್‌ ಜೆಎಂಐಟಿ ಹಾಗೂ ಮಿಸ್ಟರ್‌ ಜೆಎಂಐಟಿ ಆಯ್ಕೆ

ಆಪರೇಷನ್ ಲಂಡನ್ ಕೆಫೆ ಚಲನಚಿತ್ರ ನಿರ್ದೇಶಕ ಕವಿಶ್ ಶೆಟ್ಟಿ ಹಾಗೂ ಮಾಡೆಲ್ ಚೈತ್ರಶ್ರೀ ನಾಯ್ಡು ತೀರ್ಪುಗಾರರಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ನಾನು ಮತ್ತು ಗುಂಡ-2 ಕನ್ನಡ ಚಲನಚಿತ್ರದ ನಾಯಕ ನಟ ರಾಕೇಶ ಅಡಿಗ ಹಾಗೂ ಪೇಟೆ ಹುಡುಗಿರ್ ಹಳ್ಳಿ ಲೈಪ್‌ನ ರಿಯಾಲಿಟಿ ಶೋ ಖ್ಯಾತಿಯ ಅರ್ಪಿತ ಆಗಮಿಸಿದ್ದರು.

ಇದನ್ನೂ ಓದಿ: ಯಾವ ದೇವರ ದೇವಾಲಯದಲ್ಲಿ ನೀವು ಎಷ್ಟು ಬಾರಿ ಪ್ರದಕ್ಷಿಣೆ ಹಾಕಬೇಕು ಎಂಬುದನ್ನು ತಿಳಿಯಿರಿ

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಭರತ್ ಪಿ ಬಿ, ಸ್ಫೂರ್ತಿ-2025ರ ಸಂಚಾಲಕ ಡಾ.ಶಿವಕುಮಾರ್ ಎಸ್ ಪಿ, ಇಲಾಖಾ ಮುಖ್ಯಸ್ಥರಾದ ಡಾ.ಕುಮಾರಸ್ವಾಮಿ ಬಿ ಜಿ, ಡಾ.ಸಿದ್ಧೇಶ್ ಕೆ ಬಿ, ಡಾ.ಕೃಷ್ಣಾರೆಡ್ಡಿ ಕೆ ಆರ್, ಡಾ.ಶ್ರೀಶೈಲ ಜೆ ಎಂ, ಡಾ.ಲೋಕೇಶ್ ಹೆಚ್ ಜೆ, ಡಾ.ನಿರಂಜನ್ ಈ, ಪ್ರೊ. ಶಶಿಧರ್ ಎ ಪಿ, ಡಾ.ಕುಮಾರಸ್ವಾಮಿ ಕೆ, ಬೋಧಕ – ಬೋಧಕೇತರ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaChitradurga LatestChitradurga newsCultural competitionEngineeringfeaturedKannada NewsMiss JMITMr JMITRamp WalkSJMITStudentsStylish Walkಇಂಜಿನಿಯರಿಂಗ್‌ಎಸ್‍ಜೆಎಂಐಟಿಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಲೇಟೆಸ್ಟ್ಮಿಸ್‌ ಜೆಎಂಐಟಿಮಿಸ್ಟರ್‌ ಜೆಎಂಐಟಿರ್ಯಾಂಪ್‌ ವಾಕ್‌ವಿದ್ಯಾರ್ಥಿಗಳುಸಾಂಸ್ಕೃತಿಕ ಸ್ಪರ್ಧೆಸ್ಟೈಲಿಶ್‌ ವಾಕ್‌
Share This Article
Facebook Email Print
Previous Article ನಿಮ್ಮ ಕೈಗಳಲ್ಲಿ ತೀವ್ರ ಸೆಳೆತವೇ? ಇದಕ್ಕೆ ಕಾರಣವೇನು? ತಿಳಿಯಿರಿ
Next Article ಸೊಂಪು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದೇ? 
Leave a Comment

Leave a Reply Cancel reply

Your email address will not be published. Required fields are marked *

ಎಬಿವಿಪಿ ಹಿರಿಯೂರು ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಪ್ರಾಧ್ಯಾಪಕ ರಂಗಸ್ವಾಮಿ
ಹಿರಿಯೂರು
APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
keladi-shivappa-nayaka-agriculture-university-shivamogga
ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ
ಮುಖ್ಯ ಸುದ್ದಿ
Pandarahally health awerness
ಭೇದಿ ನಿಯಂತ್ರಕ್ಕೆ ಓಆರ್‌ಎಸ್‌, ಜಿಂಕ್‌ ಸೂಕ್ತ | ಡಾ.ಬಿ.ವಿ.ಗಿರೀಶ್‌
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up